<p><strong>ಮಾಲೂರು:</strong> ಪಟ್ಟಣದ ಕೋಚಿಮುಲ್ ಶಿಬಿರ ಕಚೇರಿಯಲ್ಲಿ ಹಾಲು ಉತ್ಪಾದಕರ ಒಕ್ಕೂಟದ ವತಿಯಿಂದ ಮೃತಪಟ್ಟ ಹಸುಗಳ ಮಾಲೀಕರಿಗೆ ವಿಮೆ ಪರಿಹಾರದ ಚೆಕ್ ವಿತರಣೆ ಕಾರ್ಯಕ್ರಮವು ಮಂಗಳವಾರ ನಡೆಯಿತು. </p>.<p>ಶಾಸಕ ಕೆ.ವೈ. ನಂಜೇಗೌಡ ಮಾತನಾಡಿ, ‘ರೈತರು ಕಡ್ಡಾಯವಾಗಿ ತಮ್ಮ ಹಸುಗಳಿಗೆ ವಿಮೆ ಮಾಡಿಸಬೇಕು. ಆಕಸ್ಮಿಕವಾಗಿ ಹಸು ಮರಣ ಹೊಂದಿದರೆ ಮತ್ತೊಂದು ಹಸು ಖರೀದಿಸಲು ವಿಮೆ ಮೊತ್ತ ಅನುಕೂಲವಾಗುತ್ತದೆ’ ಎಂದರು. </p>.<p>‘ಆರು ವರ್ಷಗಳಿಂದ ಕೋಲಾರ ಮತ್ತು ಚಿಕ್ಕಬಳ್ಳಾಪುರ ಒಕ್ಕೂಟದ ಅಧ್ಯಕ್ಷನಾಗಿ ಸೇವೆ ಸಲ್ಲಿಸಿದ್ದು, ನನ್ನ ಆಡಳಿತ ಅವಧಿಯಲ್ಲಿ ಹಾಲು ಉತ್ಪಾದಕರ ಅಭಿವೃದ್ಧಿಗೆ ಕೋಲಾರ ಮತ್ತು ಚಿಕ್ಕಬಳ್ಳಾಪುರ ಹಾಲು ಒಕ್ಕೂಟದಿಂದ ಹಲವು ಕಾರ್ಯಕ್ರಮಗಳನ್ನು ಜಾರಿಗೆ ತರಲಾಗಿದೆ’ ಎಂದರು.</p>.<p>‘ಆಡಳಿತ ಮಂಡಳಿ ಮತ್ತು ಅಧಿಕಾರಿಗಳ ಸಹಕಾರದಿಂದ ಹಾಲು ಉತ್ಪಾದಕರ ಕ್ಷೇಮಕ್ಕೆ ಉತ್ತಮ ನಿರ್ಣಯ ಕೈಗೊಳ್ಳಲಾಗಿದೆ. ಅದರಲ್ಲಿ ರಾಸುಗಳ ವಿಮೆ ಮೊತ್ತವನ್ನು ₹25 ಸಾವಿರದಿಂದ ₹70 ಸಾವಿರಕ್ಕೆ ಏರಿಸಲಾಗಿದೆ. ಈ ಮೊತ್ತವನ್ನು ₹80 ಸಾವಿರಕ್ಕೆ ಹೆಚ್ಚಿಸುವ ಬಗ್ಗೆ ಚಿಂತಿಸಲಾಗುತ್ತಿದೆ. ವಿಮೆಯನ್ನು ಎರಡು ಕಂತುಗಳಾಗಿ ಕಟ್ಟಲು ಅವಕಾಶ ಮಾಡಿಕೊಡಲಾಗಿದೆ’ ಎಂದರು.</p>.<p>ಹಾಲು ಉತ್ಪಾದಕರ ಸಂಘಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗೆ ನಿವೃತ್ತಿ ನಂತರ ಗ್ರಾಚುಟಿ ಹಣ ಜಾರಿಗೆ ತರಲಾಗಿದೆ. ಕಾರ್ಯದರ್ಶಿಗೆ ₹3 ಲಕ್ಷ, ಹಾಲು ಪರೀಕ್ಷಕನಿಗೆ ₹2 ಲಕ್ಷ, ಸಹಾಯಕರಿಗೆ ₹1 ಲಕ್ಷವನ್ನು ಗ್ರಾಚುಟಿ ಆಗಿ ನೀಡಲಾಗುವುದು. ಮೇವು ಕಟಾವು ಯಂತ್ರ, ಮ್ಯಾಟ್ ವಿತರಣೆ, ಮೇವು ಬೆಳೆಸಲು ಎಕರೆಗೆ ₹3,000 ಸಹಾಯಧನ ಸೇರಿದಂತೆ ರೈತರಿಗೆ ಅನುಕೂಲವಾಗುವ ವಿವಿಧ ಕಾರ್ಯಕ್ರಮಗಳನ್ನು ಜಾರಿಗೆ ತರಲಾಗಿದೆ ಎಂದರು. </p>.<p>ಸುಮಾರು ₹350 ಕೋಟಿ ಯೋಜನೆಯ ಕಾಮಗಾರಿಗಳು ಪ್ರಾರಂಭವಾಗಿದ್ದು, ಸುಮಾರು ₹70 ಕೋಟಿಯಲ್ಲಿ ಸೋಲಾರ್ ಪ್ಲಾಂಟ್, ಸುಮಾರು ₹50 ಕೋಟಿಯಲ್ಲಿ ಐಸ್ ಕ್ರೀಮ್ ಪ್ಲಾಂಟ್, ಎಂ.ವಿ.ಕೆ ಡೇರಿ, ಗೋಲ್ಡನ್ ಡೇರಿ ಕಾಮಗಾರಿ ನಡೆಯುತ್ತಿವೆ.</p>.<p>ಶಿಬಿರ ಕಚೇರಿ ಉಪ ವ್ಯವಸ್ಥಾಪಕ ಡಾ.ಲೋಹಿತ್, ಶ್ರೀನಿವಾಸ್, ಗೋವರ್ದನ್ ರೆಡ್ಡಿ, ಉಲ್ಲೂರಪ್ಪ, ಗಂಗಾಧರ್, ತಾಲ್ಲೂಕಿನ ಹಾಲು ಉತ್ಪಾದಕರ ಸಂಘಗಳ ಅಧ್ಯಕ್ಷರು, ಕಾರ್ಯದರ್ಶಿಗಳು ಮತ್ತು ಹಾಲು ಉತ್ಪಾದಕರು ಉಪಸ್ಥಿತರಿದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಾಲೂರು:</strong> ಪಟ್ಟಣದ ಕೋಚಿಮುಲ್ ಶಿಬಿರ ಕಚೇರಿಯಲ್ಲಿ ಹಾಲು ಉತ್ಪಾದಕರ ಒಕ್ಕೂಟದ ವತಿಯಿಂದ ಮೃತಪಟ್ಟ ಹಸುಗಳ ಮಾಲೀಕರಿಗೆ ವಿಮೆ ಪರಿಹಾರದ ಚೆಕ್ ವಿತರಣೆ ಕಾರ್ಯಕ್ರಮವು ಮಂಗಳವಾರ ನಡೆಯಿತು. </p>.<p>ಶಾಸಕ ಕೆ.ವೈ. ನಂಜೇಗೌಡ ಮಾತನಾಡಿ, ‘ರೈತರು ಕಡ್ಡಾಯವಾಗಿ ತಮ್ಮ ಹಸುಗಳಿಗೆ ವಿಮೆ ಮಾಡಿಸಬೇಕು. ಆಕಸ್ಮಿಕವಾಗಿ ಹಸು ಮರಣ ಹೊಂದಿದರೆ ಮತ್ತೊಂದು ಹಸು ಖರೀದಿಸಲು ವಿಮೆ ಮೊತ್ತ ಅನುಕೂಲವಾಗುತ್ತದೆ’ ಎಂದರು. </p>.<p>‘ಆರು ವರ್ಷಗಳಿಂದ ಕೋಲಾರ ಮತ್ತು ಚಿಕ್ಕಬಳ್ಳಾಪುರ ಒಕ್ಕೂಟದ ಅಧ್ಯಕ್ಷನಾಗಿ ಸೇವೆ ಸಲ್ಲಿಸಿದ್ದು, ನನ್ನ ಆಡಳಿತ ಅವಧಿಯಲ್ಲಿ ಹಾಲು ಉತ್ಪಾದಕರ ಅಭಿವೃದ್ಧಿಗೆ ಕೋಲಾರ ಮತ್ತು ಚಿಕ್ಕಬಳ್ಳಾಪುರ ಹಾಲು ಒಕ್ಕೂಟದಿಂದ ಹಲವು ಕಾರ್ಯಕ್ರಮಗಳನ್ನು ಜಾರಿಗೆ ತರಲಾಗಿದೆ’ ಎಂದರು.</p>.<p>‘ಆಡಳಿತ ಮಂಡಳಿ ಮತ್ತು ಅಧಿಕಾರಿಗಳ ಸಹಕಾರದಿಂದ ಹಾಲು ಉತ್ಪಾದಕರ ಕ್ಷೇಮಕ್ಕೆ ಉತ್ತಮ ನಿರ್ಣಯ ಕೈಗೊಳ್ಳಲಾಗಿದೆ. ಅದರಲ್ಲಿ ರಾಸುಗಳ ವಿಮೆ ಮೊತ್ತವನ್ನು ₹25 ಸಾವಿರದಿಂದ ₹70 ಸಾವಿರಕ್ಕೆ ಏರಿಸಲಾಗಿದೆ. ಈ ಮೊತ್ತವನ್ನು ₹80 ಸಾವಿರಕ್ಕೆ ಹೆಚ್ಚಿಸುವ ಬಗ್ಗೆ ಚಿಂತಿಸಲಾಗುತ್ತಿದೆ. ವಿಮೆಯನ್ನು ಎರಡು ಕಂತುಗಳಾಗಿ ಕಟ್ಟಲು ಅವಕಾಶ ಮಾಡಿಕೊಡಲಾಗಿದೆ’ ಎಂದರು.</p>.<p>ಹಾಲು ಉತ್ಪಾದಕರ ಸಂಘಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗೆ ನಿವೃತ್ತಿ ನಂತರ ಗ್ರಾಚುಟಿ ಹಣ ಜಾರಿಗೆ ತರಲಾಗಿದೆ. ಕಾರ್ಯದರ್ಶಿಗೆ ₹3 ಲಕ್ಷ, ಹಾಲು ಪರೀಕ್ಷಕನಿಗೆ ₹2 ಲಕ್ಷ, ಸಹಾಯಕರಿಗೆ ₹1 ಲಕ್ಷವನ್ನು ಗ್ರಾಚುಟಿ ಆಗಿ ನೀಡಲಾಗುವುದು. ಮೇವು ಕಟಾವು ಯಂತ್ರ, ಮ್ಯಾಟ್ ವಿತರಣೆ, ಮೇವು ಬೆಳೆಸಲು ಎಕರೆಗೆ ₹3,000 ಸಹಾಯಧನ ಸೇರಿದಂತೆ ರೈತರಿಗೆ ಅನುಕೂಲವಾಗುವ ವಿವಿಧ ಕಾರ್ಯಕ್ರಮಗಳನ್ನು ಜಾರಿಗೆ ತರಲಾಗಿದೆ ಎಂದರು. </p>.<p>ಸುಮಾರು ₹350 ಕೋಟಿ ಯೋಜನೆಯ ಕಾಮಗಾರಿಗಳು ಪ್ರಾರಂಭವಾಗಿದ್ದು, ಸುಮಾರು ₹70 ಕೋಟಿಯಲ್ಲಿ ಸೋಲಾರ್ ಪ್ಲಾಂಟ್, ಸುಮಾರು ₹50 ಕೋಟಿಯಲ್ಲಿ ಐಸ್ ಕ್ರೀಮ್ ಪ್ಲಾಂಟ್, ಎಂ.ವಿ.ಕೆ ಡೇರಿ, ಗೋಲ್ಡನ್ ಡೇರಿ ಕಾಮಗಾರಿ ನಡೆಯುತ್ತಿವೆ.</p>.<p>ಶಿಬಿರ ಕಚೇರಿ ಉಪ ವ್ಯವಸ್ಥಾಪಕ ಡಾ.ಲೋಹಿತ್, ಶ್ರೀನಿವಾಸ್, ಗೋವರ್ದನ್ ರೆಡ್ಡಿ, ಉಲ್ಲೂರಪ್ಪ, ಗಂಗಾಧರ್, ತಾಲ್ಲೂಕಿನ ಹಾಲು ಉತ್ಪಾದಕರ ಸಂಘಗಳ ಅಧ್ಯಕ್ಷರು, ಕಾರ್ಯದರ್ಶಿಗಳು ಮತ್ತು ಹಾಲು ಉತ್ಪಾದಕರು ಉಪಸ್ಥಿತರಿದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>