<p><strong>ಆಹಾರ ಕೊರತೆಗೆ ಕೃಷಿ ಕ್ಷೇತ್ರದ ಅಲಕ್ಷ್ಯವೇ ಕಾರಣ: ವಿರೋಧ ಪಕ್ಷದ ಸಚೇತಕರ ಟೀಕೆ<br /> ಬೆಂಗಳೂರು, ಮಾ. 9– </strong>ಸರಕಾರವು ವ್ಯವಸಾಯ ಕ್ಷೇತ್ರವನ್ನು ಅಲಕ್ಷಿಸಿದೆಯೆಂದು ವಿರೋಧ ಪಕ್ಷದ ಸಚೇತಕ ಶ್ರೀ ಎನ್. ಹುಚ್ಚಮಾಸ್ತಿ ಗೌಡ ಅವರು ಇಂದು ವಿಧಾನ ಸಭೆಯಲ್ಲಿ ಆಪಾದಿಸಿದರು.</p>.<p>ಭಾರತದಲ್ಲಿ ತಲಾ ಹೆಕ್ಟೇರ್ವಾರು ಸಾಗುವಳಿ ಭೂಮಿಯು ಇತರ ಕೆಲವು ದೇಶಗಳಿಗೆ ಹೋಲಿಸಿದರೆ ಹೆಚ್ಚಾಗಿದ್ದು, ಉತ್ಪಾದನೆ ಮಾತ್ರ ಕಡಿಮೆಯಾಗಿದೆ ಎಂದು ಅವರು ಅಂಕಿ ಅಂಶಗಳೊಂದಿಗೆ ವಿವರಿಸಿದರು.</p>.<p><strong>ಜಿಲ್ಲೆಗೊಂದು ಪಾನನಿರೋಧ ಪ್ರಚಾರ ಸಮಿತಿ<br /> ಬೆಂಗಳೂರು, ಮಾ. 9–</strong> ಎಲ್ಲ ಜಿಲ್ಲೆಗಳಲ್ಲೂ ಪಾನನಿರೋಧ ಪ್ರಚಾರ ಸಮಿತಿಗಳನ್ನು ರಚಿಸಲಾಗುವುದೆಂದು ಅರ್ಥ ಸಚಿವ ಶ್ರೀ ರಾಮಕೃಷ್ಣ ಹೆಗಡೆ ಅವರು ಇಂದು ವಿಧಾನ ಪರಿಷತ್ತಿನಲ್ಲಿ ತಿಳಿಸಿದರು.</p>.<p>ಈ ಸಮಿತಿಗಳನ್ನು ರಚಿಸಿದ ನಂತರ, ಸಮಿತಿಗಳ ಸದಸ್ಯರ ಅಭಿಪ್ರಾಯಗಳನ್ನು ಪಡೆದು ಮುಂದೆ ಏನು ಮಾಡಬೇಕೆಂಬುದನ್ನು ಸರ್ಕಾರ ಯೋಚಿಸುವುದೆಂದು ಸಚಿವ ಶ್ರೀ ಹೆಗಡೆ ಅವರು ನುಡಿದರು.</p>.<p><strong>ಕಛತೀವು: ಬ್ರಿಟನ್ಗೂ ಹಕ್ಕು?<br /> ನವದೆಹಲಿ, ಮಾ. 9</strong>– ಭಾರತ–ಸಿಂಹಳ ದೇಶಗಳ ನಡುವೆ ಪಾಕ್ ಜಲಸಂಧಿಯಲ್ಲಿರುವ ಕಛತೀವು ದ್ವೀಪದ ಒಡೆತನದ ಬಗ್ಗೆ ಮೂರನೇ ಹಕ್ಕುದಾರರೊಬ್ಬರು ಹುಟ್ಟಿಕೊಂಡಿದ್ದಾರೆ.</p>.<p>ಮೂರನೇ ಹಕ್ಕುದಾರ: ಬ್ರಿಟನ್. ನಿರ್ಜನ ದ್ವೀಪವಾದ ಈ ಕಛತೀವು ದ್ವೀಪದ ಆಯಕಟ್ಟಿನ ಮಹತ್ವ ಕುರಿತು ಬ್ರಿಟನ್ ಪತ್ರಿಕೆಗಳು ಅನೇಕ ವರ್ಷಗಳಿಂದ ವರದಿ ಮಾಡುತ್ತಾ ಬಂದಿವೆ. </p>.<p><strong>ಅನಭಿವೃದ್ಧ ರಾಜ್ಯಗಳಿಗೆ ಹೆಚ್ಚು ನೆರವು ಕೊಡಿಸಲು ಅರ್ಥ ಆಯೋಗಕ್ಕೆ ಒತ್ತಾಯ<br /> ಬೆಂಗಳೂರು, ಮಾ. 9–</strong> ಅಭಿವೃದ್ಧಿ ಅವಕಾಶವಿದ್ದರೂ, ಹಣದ ಕೊರತೆಯಿಂದಾಗಿ ತೊಂದರೆಗೊಳಗಾಗಿರುವ ರಾಜ್ಯಗಳಿಗೆ, ಕೇಂದ್ರದಿಂದ ಯೋಗ್ಯ ಪರಿಹಾರ ದೊರಕಿಸಿಕೊಡಬೇಕಾದ ಅಗತ್ಯವನ್ನು ಅರ್ಥಸಚಿವ ಶ್ರೀ ರಾಮಕೃಷ್ಣ ಹೆಗಡೆ ಅವರು ಕೇಂದ್ರ ಆರ್ಥಿಕ ಆಯೋಗದ ಮುಂದೆ ಮಂಡಿಸಿದ್ದಾರೆ.</p>.<p><strong>ಜುಲೈನಲ್ಲಿ ಮತ್ತೆ ವಿಧಾನಸಭೆ ಸಮಾವೇಶ<br /> ಬೆಂಗಳೂರು, ಮಾ.9– </strong> ಪ್ರಸ್ತುತ ಬಜೆಟ್ ಅಧಿವೇಶನದ ನಂತರ ವಿಧಾನಸಭೆಯು ಪುನಃ ‘ಜುಲೈ ಮೂರನೆಯ ವಾರ ಅಥವಾ ನಾಲ್ಕನೆಯ ವಾರ ಸಮಾವೇಶಗೊಳ್ಳುವಂತೆ ಅವಕಾಶ ಕಲ್ಪಿಸಲು ಸರಕಾರ ನಿರ್ಧರಿಸಿದೆ’ ಎಂದು ನ್ಯಾಯಾಂಗ ಸಚಿವ ಶ್ರೀ ಎಸ್.ಆರ್. ಕಂಠಿ ಅವರು ಇಂದು ವಿಧಾನಸಭೆಯಲ್ಲಿ ಪ್ರಕಟಿಸಿದರು.</p>.<p><strong>ಉಳಿತಾಯ ರೂಪದಲ್ಲಿ ಭಾಗಶಃ ತುಟ್ಟಿಭತ್ಯ: ಸಚಿವರಿಂದ ಸಮರ್ಥನೆ<br /> ಬೆಂಗಳೂರು, ಮಾ. 9–</strong> ಸರ್ಕಾರಿ ನೌಕರರಿಗೆ ಕೊಡಲು ಉದ್ದೇಶಿಸಿರುವ ಏರಿಸಿದ ತುಟ್ಟಿಭತ್ಯದ 3ನೇ ಒಂದಂಶವನ್ನು ಉಳಿತಾಯದ ರೂಪದಲ್ಲಿ ಕೊಡುವ ವಿಧಾನವನ್ನು ಅರ್ಥಸಚಿವರು ಇಂದು ವಿಧಾನಸಭೆಯಲ್ಲಿ ಕಾರಣಗಳನ್ನು ನೀಡಿ ಸಮರ್ಥಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಆಹಾರ ಕೊರತೆಗೆ ಕೃಷಿ ಕ್ಷೇತ್ರದ ಅಲಕ್ಷ್ಯವೇ ಕಾರಣ: ವಿರೋಧ ಪಕ್ಷದ ಸಚೇತಕರ ಟೀಕೆ<br /> ಬೆಂಗಳೂರು, ಮಾ. 9– </strong>ಸರಕಾರವು ವ್ಯವಸಾಯ ಕ್ಷೇತ್ರವನ್ನು ಅಲಕ್ಷಿಸಿದೆಯೆಂದು ವಿರೋಧ ಪಕ್ಷದ ಸಚೇತಕ ಶ್ರೀ ಎನ್. ಹುಚ್ಚಮಾಸ್ತಿ ಗೌಡ ಅವರು ಇಂದು ವಿಧಾನ ಸಭೆಯಲ್ಲಿ ಆಪಾದಿಸಿದರು.</p>.<p>ಭಾರತದಲ್ಲಿ ತಲಾ ಹೆಕ್ಟೇರ್ವಾರು ಸಾಗುವಳಿ ಭೂಮಿಯು ಇತರ ಕೆಲವು ದೇಶಗಳಿಗೆ ಹೋಲಿಸಿದರೆ ಹೆಚ್ಚಾಗಿದ್ದು, ಉತ್ಪಾದನೆ ಮಾತ್ರ ಕಡಿಮೆಯಾಗಿದೆ ಎಂದು ಅವರು ಅಂಕಿ ಅಂಶಗಳೊಂದಿಗೆ ವಿವರಿಸಿದರು.</p>.<p><strong>ಜಿಲ್ಲೆಗೊಂದು ಪಾನನಿರೋಧ ಪ್ರಚಾರ ಸಮಿತಿ<br /> ಬೆಂಗಳೂರು, ಮಾ. 9–</strong> ಎಲ್ಲ ಜಿಲ್ಲೆಗಳಲ್ಲೂ ಪಾನನಿರೋಧ ಪ್ರಚಾರ ಸಮಿತಿಗಳನ್ನು ರಚಿಸಲಾಗುವುದೆಂದು ಅರ್ಥ ಸಚಿವ ಶ್ರೀ ರಾಮಕೃಷ್ಣ ಹೆಗಡೆ ಅವರು ಇಂದು ವಿಧಾನ ಪರಿಷತ್ತಿನಲ್ಲಿ ತಿಳಿಸಿದರು.</p>.<p>ಈ ಸಮಿತಿಗಳನ್ನು ರಚಿಸಿದ ನಂತರ, ಸಮಿತಿಗಳ ಸದಸ್ಯರ ಅಭಿಪ್ರಾಯಗಳನ್ನು ಪಡೆದು ಮುಂದೆ ಏನು ಮಾಡಬೇಕೆಂಬುದನ್ನು ಸರ್ಕಾರ ಯೋಚಿಸುವುದೆಂದು ಸಚಿವ ಶ್ರೀ ಹೆಗಡೆ ಅವರು ನುಡಿದರು.</p>.<p><strong>ಕಛತೀವು: ಬ್ರಿಟನ್ಗೂ ಹಕ್ಕು?<br /> ನವದೆಹಲಿ, ಮಾ. 9</strong>– ಭಾರತ–ಸಿಂಹಳ ದೇಶಗಳ ನಡುವೆ ಪಾಕ್ ಜಲಸಂಧಿಯಲ್ಲಿರುವ ಕಛತೀವು ದ್ವೀಪದ ಒಡೆತನದ ಬಗ್ಗೆ ಮೂರನೇ ಹಕ್ಕುದಾರರೊಬ್ಬರು ಹುಟ್ಟಿಕೊಂಡಿದ್ದಾರೆ.</p>.<p>ಮೂರನೇ ಹಕ್ಕುದಾರ: ಬ್ರಿಟನ್. ನಿರ್ಜನ ದ್ವೀಪವಾದ ಈ ಕಛತೀವು ದ್ವೀಪದ ಆಯಕಟ್ಟಿನ ಮಹತ್ವ ಕುರಿತು ಬ್ರಿಟನ್ ಪತ್ರಿಕೆಗಳು ಅನೇಕ ವರ್ಷಗಳಿಂದ ವರದಿ ಮಾಡುತ್ತಾ ಬಂದಿವೆ. </p>.<p><strong>ಅನಭಿವೃದ್ಧ ರಾಜ್ಯಗಳಿಗೆ ಹೆಚ್ಚು ನೆರವು ಕೊಡಿಸಲು ಅರ್ಥ ಆಯೋಗಕ್ಕೆ ಒತ್ತಾಯ<br /> ಬೆಂಗಳೂರು, ಮಾ. 9–</strong> ಅಭಿವೃದ್ಧಿ ಅವಕಾಶವಿದ್ದರೂ, ಹಣದ ಕೊರತೆಯಿಂದಾಗಿ ತೊಂದರೆಗೊಳಗಾಗಿರುವ ರಾಜ್ಯಗಳಿಗೆ, ಕೇಂದ್ರದಿಂದ ಯೋಗ್ಯ ಪರಿಹಾರ ದೊರಕಿಸಿಕೊಡಬೇಕಾದ ಅಗತ್ಯವನ್ನು ಅರ್ಥಸಚಿವ ಶ್ರೀ ರಾಮಕೃಷ್ಣ ಹೆಗಡೆ ಅವರು ಕೇಂದ್ರ ಆರ್ಥಿಕ ಆಯೋಗದ ಮುಂದೆ ಮಂಡಿಸಿದ್ದಾರೆ.</p>.<p><strong>ಜುಲೈನಲ್ಲಿ ಮತ್ತೆ ವಿಧಾನಸಭೆ ಸಮಾವೇಶ<br /> ಬೆಂಗಳೂರು, ಮಾ.9– </strong> ಪ್ರಸ್ತುತ ಬಜೆಟ್ ಅಧಿವೇಶನದ ನಂತರ ವಿಧಾನಸಭೆಯು ಪುನಃ ‘ಜುಲೈ ಮೂರನೆಯ ವಾರ ಅಥವಾ ನಾಲ್ಕನೆಯ ವಾರ ಸಮಾವೇಶಗೊಳ್ಳುವಂತೆ ಅವಕಾಶ ಕಲ್ಪಿಸಲು ಸರಕಾರ ನಿರ್ಧರಿಸಿದೆ’ ಎಂದು ನ್ಯಾಯಾಂಗ ಸಚಿವ ಶ್ರೀ ಎಸ್.ಆರ್. ಕಂಠಿ ಅವರು ಇಂದು ವಿಧಾನಸಭೆಯಲ್ಲಿ ಪ್ರಕಟಿಸಿದರು.</p>.<p><strong>ಉಳಿತಾಯ ರೂಪದಲ್ಲಿ ಭಾಗಶಃ ತುಟ್ಟಿಭತ್ಯ: ಸಚಿವರಿಂದ ಸಮರ್ಥನೆ<br /> ಬೆಂಗಳೂರು, ಮಾ. 9–</strong> ಸರ್ಕಾರಿ ನೌಕರರಿಗೆ ಕೊಡಲು ಉದ್ದೇಶಿಸಿರುವ ಏರಿಸಿದ ತುಟ್ಟಿಭತ್ಯದ 3ನೇ ಒಂದಂಶವನ್ನು ಉಳಿತಾಯದ ರೂಪದಲ್ಲಿ ಕೊಡುವ ವಿಧಾನವನ್ನು ಅರ್ಥಸಚಿವರು ಇಂದು ವಿಧಾನಸಭೆಯಲ್ಲಿ ಕಾರಣಗಳನ್ನು ನೀಡಿ ಸಮರ್ಥಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>