‘ಕಳೆದ 2 ವರ್ಷಗಳಿಂದ ಕೋವಿಡ್ ಕಾರಣಕ್ಕೆ ಜನ ಸಾಕಷ್ಟು ತೊಂದರೆ ಅನುಭವಿಸಿದ್ದಾರೆ. ಇದೀಗ ಕೋವಿಡ್ ಆತಂಕ ದೂರವಾಗಿ ಜಾತ್ರೆ, ಸಮಾರಂಭ ನಡೆಯುತ್ತಿವೆ. ಎಲ್ಲರೂ ಹೆಚ್ಚಾಗಿ ಕನ್ನಡ ಸಿನಿಮಾ ನೋಡಬೇಕು. ನಾನೂ ಸಹ ಅವಿಭಜಿತ ಕೋಲಾರ ಜಿಲ್ಲೆಗೆ ಸೇರಿದ್ದು, ಇಂತಹ ಕಾರ್ಯಕ್ರಮಗಳಿಗೆ ಸಹಕರಿಸುತ್ತೇನೆ’ ಎಂದು ನಟಿ ಹರಿಪ್ರಿಯಾ ಭರವಸೆ ನೀಡಿದರು.