ಆದರೆ, ರೇವಣ್ಣ ಅವರು 2018ರಲ್ಲಿ ಕೋಚಿಮುಲ್ ಪಾಲಿನ ಹಾಲು ಪೂರೈಕೆ ಪ್ರಮಾಣ ಕಡಿತಗೊಳಿಸಿ ಹಾಸನ ಜಿಲ್ಲಾ ಹಾಲು ಒಕ್ಕೂಟದಿಂದ ಸೇನೆಗೆ ಶೇ 50ರಷ್ಟು ಹಾಲು ಸರಬರಾಜು ಮಾಡಲು ಅವಕಾಶ ಕಲ್ಪಿಸಿದ್ದರು. ಈ ಹಿನ್ನೆಲೆಯಲ್ಲಿ ಕೋಚಿಮುಲ್ ಆಡಳಿತ ಮಂಡಳಿಯು ಆಗಿನ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬಳಿ ನಿಯೋಗ ಯುಎಚ್ಟಿ ಹಾಲಿನ ಪೂರ್ಣ ಪ್ರಮಾಣದ ಬೇಡಿಕೆಯನ್ನು ಒಕ್ಕೂಟಕ್ಕೆ ಹಂಚಿಕೆ ಮಾಡುವಂತೆ ಮನವಿ ಮಾಡಿದ್ದರು. ಆದರೆ, ಇದಕ್ಕೆ ರೇವಣ್ಣ ಅವರು ಒಪ್ಪಿರಲಿಲ್ಲ.