<p><strong>ಮುಳಬಾಗಿಲು</strong>: ನಗರದ ಹೊರವಲಯದಲ್ಲಿರುವ ಸ್ವಾಮಿ ವಿವೇಕಾನಂದ ಶಾಲೆಯಲ್ಲಿ ಭಾರತೀಯ ಕಿಸಾನ್ ಸಂಘದ ವತಿಯಿಂದ ಈಚೆಗೆ ಸ್ವಾಮಿ ವಿವೇಕಾನಂದ ಜಯಂತಿ ಹಾಗೂ ಸಂಕ್ರಾಂತಿ ಸ್ವಾಗತೋತ್ಸವ ಕಾರ್ಯಕ್ರಮದಲ್ಲಿ ಸಾಧಕ ಕೃಷಿಕ ಮಹಿಳೆಯರಿಗೆ ಸನ್ಮಾನ ಮತ್ತು ರಾಜ್ಯಮಟ್ಟದ ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮ ನಡೆಯಿತು.</p>.<p>ಈ ವೇಳೆ ಸ್ವಾಮಿ ವಿವೇಕಾನಂದ ಶಾಲೆಯ ಅಧ್ಯಕ್ಷ ಅಲಂಗೂರು ವೈ.ಸುರೇಂದ್ರ ಗೌಡ ಮಾತನಾಡಿ, ಭಾರತೀಯ ಸಂಸ್ಕೃತಿಯಲ್ಲಿ ಹಬ್ಬ ಹರಿದಿನಗಳಿಗೆ ತನ್ನದೇ ಆದ ವೈಶಿಷ್ಟ್ಯವಿದೆ. ಅದರಲ್ಲೂ ಭೋಗಿ, ಮಕರ ಸಂಕ್ರಾಂತಿ ವಿಶೇಷವಾದದ್ದು ಎಂದರು.</p>.<p>ದೇಶದ ಉನ್ನತಿಗೆ ಶ್ರಮಿಸಿದ ಮಹನೀಯರ ಜಯಂತಿ ಆಚರಿಸುವುದರಿಂದ ಮಕ್ಕಳಲ್ಲಿ ಸಾಧಕರ ಪ್ರಭಾವ ಬೀರುತ್ತದೆ. ಇದರಿಂದ ಸದೃಢ ಸಮಾಜ ನಿರ್ಮಾಣಕ್ಕೆ ಸಾಧ್ಯವಾಗುತ್ತದೆ ಎಂದರು.</p>.<p>ಎಸ್.ನಾರಾಯಣಪ್ಪ, ಕೆ.ರಘುನಾಥ್ ರೆಡ್ಡಿ, ಶ್ರೀನಿವಾಸ ಗೌಡ, ಎಂ.ಕೆ.ವಾಸುದೇವ್, ಪಿ.ಎಂ.ರಘುನಾಥ್, ಕೆ.ಸತೀಶ್, ಅಮರ್, ವಿಶ್ವನಾಥ್, ಮಿಣಿಜೇಣಹಳ್ಳಿ ಪಾಪಮ್ಮ, ಡಿ.ಕುರುಬರಹಳ್ಳಿ ಪಾಪಮ್ಮ, ಸೀಗೇನಹಳ್ಳಿ ಗೋವಿಂದಮ್ಮ, ಬಿ.ಎಸ್.ಶಶಿಕಲಾ, ಉಗಣಿ ಆರ್. ನಾರಾಯಣಗೌಡ, ವೆಂಕಟರಾಮಚಾರಿ, ಪಿ.ಗಂಗಾಪುರ ಮುನಿ ವೆಂಕಟರಾಮಯ್ಯ, ಪ್ರೇಮಮ್ಮ, ಬಿ.ದೇವಾನಂದ್, ಕೆ.ತ್ಯಾಗರಾಜ್, ಕೋಳಿ ನಾಗರಾಜ್ ಮತ್ತಿತರರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಳಬಾಗಿಲು</strong>: ನಗರದ ಹೊರವಲಯದಲ್ಲಿರುವ ಸ್ವಾಮಿ ವಿವೇಕಾನಂದ ಶಾಲೆಯಲ್ಲಿ ಭಾರತೀಯ ಕಿಸಾನ್ ಸಂಘದ ವತಿಯಿಂದ ಈಚೆಗೆ ಸ್ವಾಮಿ ವಿವೇಕಾನಂದ ಜಯಂತಿ ಹಾಗೂ ಸಂಕ್ರಾಂತಿ ಸ್ವಾಗತೋತ್ಸವ ಕಾರ್ಯಕ್ರಮದಲ್ಲಿ ಸಾಧಕ ಕೃಷಿಕ ಮಹಿಳೆಯರಿಗೆ ಸನ್ಮಾನ ಮತ್ತು ರಾಜ್ಯಮಟ್ಟದ ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮ ನಡೆಯಿತು.</p>.<p>ಈ ವೇಳೆ ಸ್ವಾಮಿ ವಿವೇಕಾನಂದ ಶಾಲೆಯ ಅಧ್ಯಕ್ಷ ಅಲಂಗೂರು ವೈ.ಸುರೇಂದ್ರ ಗೌಡ ಮಾತನಾಡಿ, ಭಾರತೀಯ ಸಂಸ್ಕೃತಿಯಲ್ಲಿ ಹಬ್ಬ ಹರಿದಿನಗಳಿಗೆ ತನ್ನದೇ ಆದ ವೈಶಿಷ್ಟ್ಯವಿದೆ. ಅದರಲ್ಲೂ ಭೋಗಿ, ಮಕರ ಸಂಕ್ರಾಂತಿ ವಿಶೇಷವಾದದ್ದು ಎಂದರು.</p>.<p>ದೇಶದ ಉನ್ನತಿಗೆ ಶ್ರಮಿಸಿದ ಮಹನೀಯರ ಜಯಂತಿ ಆಚರಿಸುವುದರಿಂದ ಮಕ್ಕಳಲ್ಲಿ ಸಾಧಕರ ಪ್ರಭಾವ ಬೀರುತ್ತದೆ. ಇದರಿಂದ ಸದೃಢ ಸಮಾಜ ನಿರ್ಮಾಣಕ್ಕೆ ಸಾಧ್ಯವಾಗುತ್ತದೆ ಎಂದರು.</p>.<p>ಎಸ್.ನಾರಾಯಣಪ್ಪ, ಕೆ.ರಘುನಾಥ್ ರೆಡ್ಡಿ, ಶ್ರೀನಿವಾಸ ಗೌಡ, ಎಂ.ಕೆ.ವಾಸುದೇವ್, ಪಿ.ಎಂ.ರಘುನಾಥ್, ಕೆ.ಸತೀಶ್, ಅಮರ್, ವಿಶ್ವನಾಥ್, ಮಿಣಿಜೇಣಹಳ್ಳಿ ಪಾಪಮ್ಮ, ಡಿ.ಕುರುಬರಹಳ್ಳಿ ಪಾಪಮ್ಮ, ಸೀಗೇನಹಳ್ಳಿ ಗೋವಿಂದಮ್ಮ, ಬಿ.ಎಸ್.ಶಶಿಕಲಾ, ಉಗಣಿ ಆರ್. ನಾರಾಯಣಗೌಡ, ವೆಂಕಟರಾಮಚಾರಿ, ಪಿ.ಗಂಗಾಪುರ ಮುನಿ ವೆಂಕಟರಾಮಯ್ಯ, ಪ್ರೇಮಮ್ಮ, ಬಿ.ದೇವಾನಂದ್, ಕೆ.ತ್ಯಾಗರಾಜ್, ಕೋಳಿ ನಾಗರಾಜ್ ಮತ್ತಿತರರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>