<p><strong>ಕೋಲಾರ:</strong> ‘ಸಮಾಜದಲ್ಲಿರುವ ಪ್ರತಿಭೆಗಳಿಗೆ ಅವಕಾಶಗಳು ದೊರೆಯದ ಕಾರಣದಿಂದ ಸಮಾಜದಲ್ಲಿ ಗುರುತಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ’ ಎಂದು ವಿಧಾನ ಪರಿಷತ್ ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ತಿಳಿಸಿದರು.</p>.<p>ಗಾಣಿಗರ ಸಂಘದಿಂದ ಇಲ್ಲಿ ಭಾನುವಾರ ಆಯೋಜಿಸಿದ್ದ ಗಾಣಿಗ ಬಂಧುಗಳ ಸಮ್ಮಿಲನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ‘ಸಮಾಜದಲ್ಲಿ ಕಡಿಮೆ ಜನ ಸಂಖ್ಯೆಯಲ್ಲಿರುವ ಸಮುದಾಯದಲ್ಲೂ ಪ್ರತಿಭೆಗಳು ಇದ್ದಾರೆ. ಅವರಿಗೆ ಅವಕಾಶ ಕಲ್ಪಿಸಲು ಮುಂದಾಗಬೇಕು’ ಎಂದು ಸಲಹೆ ನೀಡಿದರು.</p>.<p>‘ರಾಜಕೀಯ ಪಕ್ಷಗಳಲ್ಲಿ ಗುರುತಿಸಿಕೊಂಡಿರುವ ಕಾರ್ಯಕರ್ತರು, ಮುಖಂಡರು ಸಮುದಾಯದ ಅಭಿವೃದ್ಧಿಗೆ ಶ್ರಮಿಸಬೇಕು. ರಾಜಕೀಯ ಪಕ್ಷಗಳಲ್ಲಿ ಗುರುತಿಸಿಕೊಂಡ ಮಾತ್ರ ಸಮುದಾಯಕ್ಕೆ ಸಹಾಯ ಮಾಡಬಾರದು ಎಂಬ ಮಾನೋಭಾವನೆ ಬದಲಾಗಬೇಕು’ ಎಂದರು.</p>.<p>‘ಅತಿಯಾದ ಪ್ರೇಮವೆ ಮುಂದೊಂದು ದಿನ ಸಮುದಾಯಗಳ ಮೇಲೆ ಪರಿಣಾಮ ಬೀರುವ ಭೀತಿ ಕಾಡುತ್ತಿದೆ. ಗಾಣಿಗ ಸಮುದಾಯದವರು ಬೇರೆ ಸಮುದಾಯಗಳ ಜತೆ ಹೊಂದಾಣಿಕೆಯಿಂದ ಸಂಘಟಿತರಾಗುವ ಮೂಲಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಮುಂದಾಗಬೇಕು’ ಎಂದು ಹೇಳಿದರು.</p>.<p>‘ಯುವಕರು ಹೆಚ್ಚಾಗಿ ಮೊಬೈಲ್ ಬಳಕೆಗೆ ಮಾರು ಹೋಗಿದ್ದು, ಮುಂದಿನ ಭವಿಷ್ಯ ರೂಪಿಸಿಕೊಳ್ಳಲು ಪೂರಕವಾದ ವಾತಾವರಣ ಪೋಷಕರು ಸೃಷ್ಟಿಸಬೇಕು. ಉತ್ತಮ ದಾರಿಯಲ್ಲಿ ಸಾಗುವಂತೆ ಮಾಡುವ ಜವಾಬ್ದಾರಿ ಪೋಷಕರ ಮೇಲಿದೆ’ ಎಂದು ಕಿವಿಮಾತು ಹೇಳಿದರು.</p>.<p>ಅಖಿಲ ಭಾರತೀಯ ತೈಲಿಕ್ ಸಾಹೂ ಮಹಾಸಭಾ ಅಧ್ಯಕ್ಷ ಪಿ.ಎಂ.ರಘುನಾಥ್ ಮಾತನಾಡಿ, ‘ಇತ್ತೀಚಿನ ದಿನಗಳಲ್ಲಿ ರಾಜಕೀಯ ಹಣಬಲ, ತೋಳ್ಬಗಲ ಇರುವವರು ಸ್ವತ್ತಾಗಿದೆ. ಸಾಮಾನ್ಯ ಪ್ರಜೆ ಚುನಾವಣೆ ಎದುರಿಸಲು ಕಷ್ಟವಾಗಿದ್ದು, ಇಂತಹ ಸದರ್ಭದಲ್ಲಿ ಸಮುದಾಯವೂ ನಿರ್ಣಾಯಕ ಪಾತ್ರವಹಿಸುವತ್ತ ಚಿಂತಿಸಬೇಕು’ ಎಂದು ಎಚ್ಚರಿಸಿದರು.</p>.<p>‘ಸಮುದಾಯದವರು ಕುಲ ಕಸುಬನ್ನು ಬಿಟ್ಟಿರುವ ಕಾರಣ ಈಗ ತಯಾರಾಗುತ್ತಿರುವ ಎಣ್ಣೆ ಕಲುಷಿತಗೊಂಡಿದೆ. ಇದು ಆರೋಗ್ಯದ ಮೇಲೂ ಪರಿಣಾಮ ಬೀರುತ್ತಿದೆ. ನಮ್ಮ ಮನೆಗಳಲ್ಲೇ ಎಣ್ಣೆ ತಯಾರಿಸುವ ಕಾರ್ಯ ಪ್ರಾರಂಭವಾಗಬೇಕು’ ಎಂದು ತಿಳಿಸಿದರು.</p>.<p>‘ಸಮುದಾಯದಲ್ಲಿ ಸಂಘಟನೆಯ ಕೊರತೆಯಿರುವ ಕಾರಣ ಸಮಸ್ಯೆಗಳು ಹೆಚ್ಚಾಗುತ್ತಿವೆ. ಗ್ರಾಮ ಮಟ್ಟದಿಂದ ಯೋಜನೆಗಳ ಬಗ್ಗೆ ಅರಿವು ಮೂಡಿಸುವುದರ ಜತೆಗೆ ಸಮಾಜದ ಎಲ್ಲಾ ವರ್ಗದವರ ಅಭಿವೃದ್ದಿಗೆ ಶ್ರಮಿಸಬೇಕಾಗಿದೆ’ ಎಂದರು.</p>.<p>ಶ್ರೀನಿವಾಸ ನರ್ಸಿಂಗ್ ಹೋಂ ವೈದ್ಯ ಡಾ.ಶಂಕರ್, ಉಪನ್ಯಾಸಕ ಜೆ.ಜಿ.ನಾಗರಾಜ್, ಶಿಕ್ಷಕ ಪಿ.ಆರ್.ರವಿ, ಗಾಣಿಗ ಸಂಘದ ಸದಸ್ಯರಾದ ಸುಬ್ಬಮ್ಮ, ಕೆ.ಎನ್.ರಾಮಚಂದ್ರಪ್ಪ, ವಿ.ವೆಂಕಟೇಶ್, ಪಿಯು ಶಿಕ್ಷಣ ಇಲಾಖೆ ನಿವೃತ್ತ ಉಪ ನಿರ್ದೇಶಕ ಎಸ್.ವೆಂಕಟಸ್ವಾಮಿ, ಅರ್ವಿಎಂ ಮಂಡಿ ಮಾಲೀಕ ವೆಂಕಟಾಚಲಪತಿ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೋಲಾರ:</strong> ‘ಸಮಾಜದಲ್ಲಿರುವ ಪ್ರತಿಭೆಗಳಿಗೆ ಅವಕಾಶಗಳು ದೊರೆಯದ ಕಾರಣದಿಂದ ಸಮಾಜದಲ್ಲಿ ಗುರುತಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ’ ಎಂದು ವಿಧಾನ ಪರಿಷತ್ ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ತಿಳಿಸಿದರು.</p>.<p>ಗಾಣಿಗರ ಸಂಘದಿಂದ ಇಲ್ಲಿ ಭಾನುವಾರ ಆಯೋಜಿಸಿದ್ದ ಗಾಣಿಗ ಬಂಧುಗಳ ಸಮ್ಮಿಲನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ‘ಸಮಾಜದಲ್ಲಿ ಕಡಿಮೆ ಜನ ಸಂಖ್ಯೆಯಲ್ಲಿರುವ ಸಮುದಾಯದಲ್ಲೂ ಪ್ರತಿಭೆಗಳು ಇದ್ದಾರೆ. ಅವರಿಗೆ ಅವಕಾಶ ಕಲ್ಪಿಸಲು ಮುಂದಾಗಬೇಕು’ ಎಂದು ಸಲಹೆ ನೀಡಿದರು.</p>.<p>‘ರಾಜಕೀಯ ಪಕ್ಷಗಳಲ್ಲಿ ಗುರುತಿಸಿಕೊಂಡಿರುವ ಕಾರ್ಯಕರ್ತರು, ಮುಖಂಡರು ಸಮುದಾಯದ ಅಭಿವೃದ್ಧಿಗೆ ಶ್ರಮಿಸಬೇಕು. ರಾಜಕೀಯ ಪಕ್ಷಗಳಲ್ಲಿ ಗುರುತಿಸಿಕೊಂಡ ಮಾತ್ರ ಸಮುದಾಯಕ್ಕೆ ಸಹಾಯ ಮಾಡಬಾರದು ಎಂಬ ಮಾನೋಭಾವನೆ ಬದಲಾಗಬೇಕು’ ಎಂದರು.</p>.<p>‘ಅತಿಯಾದ ಪ್ರೇಮವೆ ಮುಂದೊಂದು ದಿನ ಸಮುದಾಯಗಳ ಮೇಲೆ ಪರಿಣಾಮ ಬೀರುವ ಭೀತಿ ಕಾಡುತ್ತಿದೆ. ಗಾಣಿಗ ಸಮುದಾಯದವರು ಬೇರೆ ಸಮುದಾಯಗಳ ಜತೆ ಹೊಂದಾಣಿಕೆಯಿಂದ ಸಂಘಟಿತರಾಗುವ ಮೂಲಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಮುಂದಾಗಬೇಕು’ ಎಂದು ಹೇಳಿದರು.</p>.<p>‘ಯುವಕರು ಹೆಚ್ಚಾಗಿ ಮೊಬೈಲ್ ಬಳಕೆಗೆ ಮಾರು ಹೋಗಿದ್ದು, ಮುಂದಿನ ಭವಿಷ್ಯ ರೂಪಿಸಿಕೊಳ್ಳಲು ಪೂರಕವಾದ ವಾತಾವರಣ ಪೋಷಕರು ಸೃಷ್ಟಿಸಬೇಕು. ಉತ್ತಮ ದಾರಿಯಲ್ಲಿ ಸಾಗುವಂತೆ ಮಾಡುವ ಜವಾಬ್ದಾರಿ ಪೋಷಕರ ಮೇಲಿದೆ’ ಎಂದು ಕಿವಿಮಾತು ಹೇಳಿದರು.</p>.<p>ಅಖಿಲ ಭಾರತೀಯ ತೈಲಿಕ್ ಸಾಹೂ ಮಹಾಸಭಾ ಅಧ್ಯಕ್ಷ ಪಿ.ಎಂ.ರಘುನಾಥ್ ಮಾತನಾಡಿ, ‘ಇತ್ತೀಚಿನ ದಿನಗಳಲ್ಲಿ ರಾಜಕೀಯ ಹಣಬಲ, ತೋಳ್ಬಗಲ ಇರುವವರು ಸ್ವತ್ತಾಗಿದೆ. ಸಾಮಾನ್ಯ ಪ್ರಜೆ ಚುನಾವಣೆ ಎದುರಿಸಲು ಕಷ್ಟವಾಗಿದ್ದು, ಇಂತಹ ಸದರ್ಭದಲ್ಲಿ ಸಮುದಾಯವೂ ನಿರ್ಣಾಯಕ ಪಾತ್ರವಹಿಸುವತ್ತ ಚಿಂತಿಸಬೇಕು’ ಎಂದು ಎಚ್ಚರಿಸಿದರು.</p>.<p>‘ಸಮುದಾಯದವರು ಕುಲ ಕಸುಬನ್ನು ಬಿಟ್ಟಿರುವ ಕಾರಣ ಈಗ ತಯಾರಾಗುತ್ತಿರುವ ಎಣ್ಣೆ ಕಲುಷಿತಗೊಂಡಿದೆ. ಇದು ಆರೋಗ್ಯದ ಮೇಲೂ ಪರಿಣಾಮ ಬೀರುತ್ತಿದೆ. ನಮ್ಮ ಮನೆಗಳಲ್ಲೇ ಎಣ್ಣೆ ತಯಾರಿಸುವ ಕಾರ್ಯ ಪ್ರಾರಂಭವಾಗಬೇಕು’ ಎಂದು ತಿಳಿಸಿದರು.</p>.<p>‘ಸಮುದಾಯದಲ್ಲಿ ಸಂಘಟನೆಯ ಕೊರತೆಯಿರುವ ಕಾರಣ ಸಮಸ್ಯೆಗಳು ಹೆಚ್ಚಾಗುತ್ತಿವೆ. ಗ್ರಾಮ ಮಟ್ಟದಿಂದ ಯೋಜನೆಗಳ ಬಗ್ಗೆ ಅರಿವು ಮೂಡಿಸುವುದರ ಜತೆಗೆ ಸಮಾಜದ ಎಲ್ಲಾ ವರ್ಗದವರ ಅಭಿವೃದ್ದಿಗೆ ಶ್ರಮಿಸಬೇಕಾಗಿದೆ’ ಎಂದರು.</p>.<p>ಶ್ರೀನಿವಾಸ ನರ್ಸಿಂಗ್ ಹೋಂ ವೈದ್ಯ ಡಾ.ಶಂಕರ್, ಉಪನ್ಯಾಸಕ ಜೆ.ಜಿ.ನಾಗರಾಜ್, ಶಿಕ್ಷಕ ಪಿ.ಆರ್.ರವಿ, ಗಾಣಿಗ ಸಂಘದ ಸದಸ್ಯರಾದ ಸುಬ್ಬಮ್ಮ, ಕೆ.ಎನ್.ರಾಮಚಂದ್ರಪ್ಪ, ವಿ.ವೆಂಕಟೇಶ್, ಪಿಯು ಶಿಕ್ಷಣ ಇಲಾಖೆ ನಿವೃತ್ತ ಉಪ ನಿರ್ದೇಶಕ ಎಸ್.ವೆಂಕಟಸ್ವಾಮಿ, ಅರ್ವಿಎಂ ಮಂಡಿ ಮಾಲೀಕ ವೆಂಕಟಾಚಲಪತಿ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>