ಶ್ರೀನಿವಾಸಪುರದ ಅಂಚೆ ಕಚೇರಿ ರಸ್ತೆಯಲ್ಲಿ ಸೋಂಕಿತ ವ್ಯಾಪಾರಿಯ ಪಾತ್ರೆ ಮತ್ತು ಕಾಫಿ ಪುಡಿ ಅಂಗಡಿಯಿದೆ. ಪಾತ್ರೆ ಖರೀದಿಗಾಗಿ ತಮಿಳುನಾಡಿನ ಚೆನ್ನೈಗೆ ಹೋಗಿದ್ದ ಇವರಿಗೆ ಅಲ್ಲಿಯೇ ಸೋಂಕು ತಗುಲಿತ್ತು. ಚೆನ್ನೈನಿಂದ ಹಿಂದಿರುಗಿದ ನಂತರ ಸೋಂಕು ದೃಢಪಟ್ಟಿದ್ದರಿಂದ ಇವರನ್ನು ಎಸ್ಎನ್ಆರ್ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಆ ವೇಳೆಗಾಗಲೇ ಕುಟುಂಬ ಸದಸ್ಯರು ಇವರ ಸಂಪರ್ಕಕ್ಕೆ ಬಂದಿದ್ದರು.