ಈ ಸಂಬಂಧದ ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ವಿಜಯ್ ಕುಮಾರ್ ಮಾತನಾಡಿ,ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಶನಿವಾರ ತಡರಾತ್ರಿ ಯಾರೋ ನಂದಿನಿ ಪಾರ್ಲರ್ ಪೆಟ್ಟಿಗೆಯನ್ನು ಇಟ್ಟು ಅಂಗಡಿ ತೆರೆಯಲು ಮುಂದಾಗಿದ್ದಾರೆ. ಈ ವಿಷಯ ನನ್ನ ಗಮನಕ್ಕೆ ಬಂದಿದೆ. ಕೂಡಲೇಪೆಟ್ಟಿಗೆ ಅಂಗಡಿಯನ್ನು ಆವರಣದಿಂದ ತೆಗೆಯುವಂತೆ ವೈದ್ಯರಿಗೆ ಸೂಚಿಸಲಾಗಿದೆ. ಅಂಗಡಿ ತೆರೆಯಲು ಹೊರಟವರಿಗೆ ನೋಟಿಸನ್ನು ನೀಡಿ ತೆರವು ಮಾಡುವಂತೆ ಸೂಚಿಸಲಾಗಿದೆ. ತೆರವು ಮಾಡದಿದ್ದಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗುವುದು ಎಂದು ಹೇಳಿದರು.