ಹನುಮನಹಳ್ಳಿ, ಕುರುಬರಹಳ್ಳಿ, ಅನಂತಪುರ, ಜಮ್ಮನಹಳ್ಳಿ, ಚಿಕ್ಕಮಾದೇನಹಳ್ಳಿ, ವಿರೂಪಾಕ್ಷಿ, ಗುಟ್ಟಹಳ್ಳಿ, ಮುಳಬಾಗಿಲು ಗ್ರಾಮ ಕುಮದೇನಹಳ್ಳಿ ತುರುಕರಹಳ್ಳಿ, ಇಂಡ್ಲಕೆರೆ, ಸೊನ್ನವಾಡಿ, ನರಸೀಪುರದಿನ್ನೆ ಗ್ರಾಮಗಳಲ್ಲಿ ಜಮೀನು ಸರ್ವೆ ಮಾಡಲಾಗಿದೆ. ಜಮೀನು ಮಾಲೀಕರಿಗೆ ಭೂಸ್ವಾಧೀನದ ಪರಿಹಾರವೂ ದೊರೆತಿಲ್ಲ. ಇತ್ತ ಜಮೀನು ಅಥವಾ ನಿವೇಶನವನ್ನು ಮಾರಾಟ ಮಾಡುವ ಹಾಗೂ ಇಲ್ಲ. ಅಭಿವೃದ್ಧಿ ಮಾಡಲು ಸಾಧ್ಯವಾಗುತ್ತಿಲ್ಲ. ಈ ಕುರಿತು ಯಾರನ್ನು ಕೇಳಬೇಕು ಎಂದು ತಿಳಿಯದ ರೈತರು ಗೊಂದಲದಲ್ಲಿದ್ದಾರೆ.