<p><strong>ಕೋಲಾರ:</strong> ಶರಣ ಸಾಹಿತ್ಯದ ವಚನ, ಜಾನಪದ ಕ್ರಾಂತಿಕಾರಿ ಸಂದೇಶಗಳ ಬಗ್ಗೆ ಪ್ರತಿಯೊಬ್ಬರೂ ಅರಿವು ಪಡೆದುಕೊಳ್ಳಬೇಕು. ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಸಾರ್ಥಕ ಬದುಕು ಕಟ್ಟಿಕೊಳ್ಳಲು ಸಾಧ್ಯ ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಗೌರವ ಸಲಹೆಗಾರ, ಸಾಹಿತಿ ಗೊ.ರು.ಚನ್ನಬಸಪ್ಪ ಅಭಿಪ್ರಾಯಪಟ್ಟರು.</p>.<p>ನಗರದ ಪತ್ರಕರ್ತರ ಭವನದಲ್ಲಿ ಮೈಸೂರಿನ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಹಾಗೂ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಸಹಯೋಗದಿಂದ ಗುರುವಾರ ಕೆ.ಆರ್.ಲಿಂಗಪ್ಪ ಜಾನಪದ ದತ್ತಿ ಪ್ರಶಸ್ತಿ -2024 ಪ್ರದಾನ ಮಾಡಿ ಮಾತನಾಡಿದರು.</p>.<p>ಅಧುನಿಕ ಯುಗದಲ್ಲಿ ಮಾನವೀಯ ಮೌಲ್ಯಗಳನ್ನು ಸಮಾಜದಲ್ಲಿ ಪಸರಿಸಲು ಪರಿಷತ್ ಅನ್ನು ಅಸ್ತಿತ್ವಕ್ಕೆ ತರಲಾಗಿದೆ. 12ನೇ ಶತಮಾನದಲ್ಲಿ ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ ಸಾಮರಸ್ಯಗಳನ್ನು ಮುಂದಿನ ಪೀಳಿಗೆಗಳಿಗೆ ಸಂದೇಶ ಸಾರುವ ಉದ್ದೇಶವಾಗಿದೆ ಎಂದರು.</p>.<p>ಚಿನ್ನದ ನಾಡಿನ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಜಾನಪದ ಕಲಾವಿದರನ್ನು ಗುರುತಿಸಿ ಅವರಿಗೆ ಜಾನಪದ ದತ್ತಿ ಪ್ರಶಸ್ತಿಯನ್ನು ಪ್ರದಾನ ಮಾಡುವ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದು ಸಂತಸ ವ್ಯಕ್ತಪಡಿಸಿದರು.</p>.<p>ಶರಣ ಸಾಹಿತ್ಯ ಪರಿಷತ್ನ ರಾಜ್ಯಾಧ್ಯಕ್ಷ ಡಾ.ಸಿ.ಸೋಮಶೇಖರ್ ಮಾತನಾಡಿ, ‘ಮಾನಸಿಕ ಸಮಾಧಾನಕ್ಕಾದರೂ ಜಾನಪದ, ಸಂಸ್ಕೃತಿ ಉಳಿವಿಗಾಗಿ ಸರ್ಕಾರಗಳು ಕ್ರಮವಹಿಸಬೇಕಿದೆ. ಬಜೆಟ್ಗಳಲ್ಲಿ ಅನುದಾನವನ್ನು ಬಿಡುಗಡೆ ಮಾಡಿ ಕಲಾವಿದರಿಗೆ ಉತ್ತೇಜನ ನೀಡುವ ಕೆಲಸ ಮಾಡಬೇಕು’ ಎಂದು ಒತ್ತಾಯಿಸಿದರು.</p>.<p>ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ಸುರೇಶ್ ಮಾತನಾಡಿ, ‘ಶರಣ ಸಾಹಿತ್ಯ ಪರಿಷತ್ ಸೂತ್ತೂರು ಶ್ರೀಗಳು ಸ್ಥಾಪಿಸಿದ್ದು, ವಚನಗಳು, ದಾಸರ ಪದಗಳು ಜನರಿಗೆ ತಲುಪಿಸುವ ದೆಸೆಯಲ್ಲಿ ಪರಿಷತ್ ಮುಂಚೂಣಿಯಲ್ಲಿದೆ’ ಎಂದು ಹೇಳಿದರು.</p>.<p>ಸಾಮಾನ್ಯ ಜನರಿಗೆ ಜ್ಞಾನದ ಸಂಪತ್ತು ತಲುಪಿಸುವಂತ ಕಾಯಕದಲ್ಲಿ ಪರಿಷತ್ ತೊಡಗಿಸಿಕೊಂಡಿದೆ. ಹಳಘಟ್ಟಿ ಅವರು ವಚನಗಳ ಸಂಶೋಧನೆ ಮತ್ತು ಸಂಗ್ರಹಗಳ ಮೂಲಕ ವಚನಗಳನ್ನು ಪ್ರಚಾರ ಮಾಡಿದ ಹಿನ್ನೆಲೆಯಲ್ಲಿ ವಚನ ಪಿತಾಮಹ ಎಂದು ಕರೆಯಲಾಗುತ್ತದೆ ಎಂದರು.</p>.<p>ಕರ್ನಾಟಕ ಜಾನಪದ ಅಕಾಡೆಮಿಯ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್ ಮಾತನಾಡಿ, ‘12ನೇ ಶತಮಾನದಲ್ಲಿ ಬಸವಣ್ಣನವರು ಸಮಾನತೆ, ಜಾತ್ಯತೀತ ಸಂದೇಶ ಸಾರುವುದರ ಜತೆಗೆ ಕ್ರಾಂತಿಕಾರಿ ಚಳವಳಿಯನ್ನು ಮಾಡಿದರು’ ಎಂದು ಹೇಳಿದರು.</p>.<p>ತತ್ವದ ಆಚಾರ ವಿಚಾರಗಳನ್ನು ವಚನದ ಮೂಲಕ ಜ್ಞಾನ ವಿಕಾಸವನ್ನು ಪಸರಿಸಿದರು. ಶಿಕ್ಷಣ, ಸಮಾನತೆ, ಸಾರ್ವಜನಿಕರ ಸ್ವತ್ತು ಎಂಬುವುದನ್ನು ಪ್ರತಿಪಾದಿಸುವ ಮೂಲಕ ರಾಜ್ಯದ ನಾಡ ಭಾಷೆಯಾದ ಕನ್ನಡದಲ್ಲಿ ವಚನಗಳನ್ನು ರಚಿಸಿ ಸರ್ವರಿಗೂ ಉಣಬಡಿಸಿ ಜ್ಞಾನಾಭಿವೃದ್ಧಿಸಿದ್ದಾರೆ ಎಂದು ಬಣ್ಣಿಸಿದರು.</p>.<p>ಬುದ್ಧ, ಬಸವ, ಅಂಬೇಡ್ಕರ್ ಇವರೇ ಸಮಾಜದಲ್ಲಿ ಮಾನವೀಯತೆಗೆ ಮುನ್ನುಡಿ ಬರೆದ ಸಮಾಜದ ಅಭಿವೃದ್ಧಿ ಹರಿಕಾರರು. ಸಮಾಜದಲ್ಲಿ ಬಹುತೇಕರು ಬದುಕಿಯೂ ಸತ್ತಂತೆ ಇದ್ದರೆ, ಇನ್ನು ಕೆಲವರು ಸತ್ತರೂ ಬದುಕಿದಂತೆ ಇರುತ್ತಾರೆ. ಈ ತ್ರಿಮೂರ್ತಿಗಳ ತತ್ವ ಆದರ್ಶಗಳು ಸಮಾಜಕ್ಕೆ ಮಾದರಿಯಾಗಿವೆ ಎಂದು ತಿಳಿಸಿದರು.</p>.<p>ಜಾನಪದ ಸಾಹಿತ್ಯದ ಹಿರಿಯ ಪ್ರತಿಭೆ ಮಂಡ್ಯದ ಸೋಬಾನೆ ಕೆಂಪಮ್ಮ ಹಾಗೂ ಜಾನಪದ ಗಾಯಕ ತುಮಕೂರು ಜಿಲ್ಲೆಯ ಬೆಳ್ಳಾವಿಯ ಎನ್.ಮೋಹನ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.</p>.<p>ಕಾರ್ಯಕ್ರಮದಲ್ಲಿ ಜಿಲ್ಲಾ ಗೌರವಾಧ್ಯಕ್ಷ ಬಿ.ಎಂ.ಚೆನ್ನಪ್ಪ, ಜಾನಪದ ಗಾಯಕ ಪಿಚ್ಚಳ್ಳಿ ಶ್ರೀನಿವಾಸ್, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಕೆ.ಚಂದ್ರಶೇಖರ್, ಕೆ.ಆರ್.ಲಿಂಗಪ್ಪ ಅವರ ಪುತ್ರ ಡಾ.ಪಂಚಾಕ್ಷರಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೋಲಾರ:</strong> ಶರಣ ಸಾಹಿತ್ಯದ ವಚನ, ಜಾನಪದ ಕ್ರಾಂತಿಕಾರಿ ಸಂದೇಶಗಳ ಬಗ್ಗೆ ಪ್ರತಿಯೊಬ್ಬರೂ ಅರಿವು ಪಡೆದುಕೊಳ್ಳಬೇಕು. ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಸಾರ್ಥಕ ಬದುಕು ಕಟ್ಟಿಕೊಳ್ಳಲು ಸಾಧ್ಯ ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಗೌರವ ಸಲಹೆಗಾರ, ಸಾಹಿತಿ ಗೊ.ರು.ಚನ್ನಬಸಪ್ಪ ಅಭಿಪ್ರಾಯಪಟ್ಟರು.</p>.<p>ನಗರದ ಪತ್ರಕರ್ತರ ಭವನದಲ್ಲಿ ಮೈಸೂರಿನ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಹಾಗೂ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಸಹಯೋಗದಿಂದ ಗುರುವಾರ ಕೆ.ಆರ್.ಲಿಂಗಪ್ಪ ಜಾನಪದ ದತ್ತಿ ಪ್ರಶಸ್ತಿ -2024 ಪ್ರದಾನ ಮಾಡಿ ಮಾತನಾಡಿದರು.</p>.<p>ಅಧುನಿಕ ಯುಗದಲ್ಲಿ ಮಾನವೀಯ ಮೌಲ್ಯಗಳನ್ನು ಸಮಾಜದಲ್ಲಿ ಪಸರಿಸಲು ಪರಿಷತ್ ಅನ್ನು ಅಸ್ತಿತ್ವಕ್ಕೆ ತರಲಾಗಿದೆ. 12ನೇ ಶತಮಾನದಲ್ಲಿ ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ ಸಾಮರಸ್ಯಗಳನ್ನು ಮುಂದಿನ ಪೀಳಿಗೆಗಳಿಗೆ ಸಂದೇಶ ಸಾರುವ ಉದ್ದೇಶವಾಗಿದೆ ಎಂದರು.</p>.<p>ಚಿನ್ನದ ನಾಡಿನ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಜಾನಪದ ಕಲಾವಿದರನ್ನು ಗುರುತಿಸಿ ಅವರಿಗೆ ಜಾನಪದ ದತ್ತಿ ಪ್ರಶಸ್ತಿಯನ್ನು ಪ್ರದಾನ ಮಾಡುವ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದು ಸಂತಸ ವ್ಯಕ್ತಪಡಿಸಿದರು.</p>.<p>ಶರಣ ಸಾಹಿತ್ಯ ಪರಿಷತ್ನ ರಾಜ್ಯಾಧ್ಯಕ್ಷ ಡಾ.ಸಿ.ಸೋಮಶೇಖರ್ ಮಾತನಾಡಿ, ‘ಮಾನಸಿಕ ಸಮಾಧಾನಕ್ಕಾದರೂ ಜಾನಪದ, ಸಂಸ್ಕೃತಿ ಉಳಿವಿಗಾಗಿ ಸರ್ಕಾರಗಳು ಕ್ರಮವಹಿಸಬೇಕಿದೆ. ಬಜೆಟ್ಗಳಲ್ಲಿ ಅನುದಾನವನ್ನು ಬಿಡುಗಡೆ ಮಾಡಿ ಕಲಾವಿದರಿಗೆ ಉತ್ತೇಜನ ನೀಡುವ ಕೆಲಸ ಮಾಡಬೇಕು’ ಎಂದು ಒತ್ತಾಯಿಸಿದರು.</p>.<p>ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ಸುರೇಶ್ ಮಾತನಾಡಿ, ‘ಶರಣ ಸಾಹಿತ್ಯ ಪರಿಷತ್ ಸೂತ್ತೂರು ಶ್ರೀಗಳು ಸ್ಥಾಪಿಸಿದ್ದು, ವಚನಗಳು, ದಾಸರ ಪದಗಳು ಜನರಿಗೆ ತಲುಪಿಸುವ ದೆಸೆಯಲ್ಲಿ ಪರಿಷತ್ ಮುಂಚೂಣಿಯಲ್ಲಿದೆ’ ಎಂದು ಹೇಳಿದರು.</p>.<p>ಸಾಮಾನ್ಯ ಜನರಿಗೆ ಜ್ಞಾನದ ಸಂಪತ್ತು ತಲುಪಿಸುವಂತ ಕಾಯಕದಲ್ಲಿ ಪರಿಷತ್ ತೊಡಗಿಸಿಕೊಂಡಿದೆ. ಹಳಘಟ್ಟಿ ಅವರು ವಚನಗಳ ಸಂಶೋಧನೆ ಮತ್ತು ಸಂಗ್ರಹಗಳ ಮೂಲಕ ವಚನಗಳನ್ನು ಪ್ರಚಾರ ಮಾಡಿದ ಹಿನ್ನೆಲೆಯಲ್ಲಿ ವಚನ ಪಿತಾಮಹ ಎಂದು ಕರೆಯಲಾಗುತ್ತದೆ ಎಂದರು.</p>.<p>ಕರ್ನಾಟಕ ಜಾನಪದ ಅಕಾಡೆಮಿಯ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್ ಮಾತನಾಡಿ, ‘12ನೇ ಶತಮಾನದಲ್ಲಿ ಬಸವಣ್ಣನವರು ಸಮಾನತೆ, ಜಾತ್ಯತೀತ ಸಂದೇಶ ಸಾರುವುದರ ಜತೆಗೆ ಕ್ರಾಂತಿಕಾರಿ ಚಳವಳಿಯನ್ನು ಮಾಡಿದರು’ ಎಂದು ಹೇಳಿದರು.</p>.<p>ತತ್ವದ ಆಚಾರ ವಿಚಾರಗಳನ್ನು ವಚನದ ಮೂಲಕ ಜ್ಞಾನ ವಿಕಾಸವನ್ನು ಪಸರಿಸಿದರು. ಶಿಕ್ಷಣ, ಸಮಾನತೆ, ಸಾರ್ವಜನಿಕರ ಸ್ವತ್ತು ಎಂಬುವುದನ್ನು ಪ್ರತಿಪಾದಿಸುವ ಮೂಲಕ ರಾಜ್ಯದ ನಾಡ ಭಾಷೆಯಾದ ಕನ್ನಡದಲ್ಲಿ ವಚನಗಳನ್ನು ರಚಿಸಿ ಸರ್ವರಿಗೂ ಉಣಬಡಿಸಿ ಜ್ಞಾನಾಭಿವೃದ್ಧಿಸಿದ್ದಾರೆ ಎಂದು ಬಣ್ಣಿಸಿದರು.</p>.<p>ಬುದ್ಧ, ಬಸವ, ಅಂಬೇಡ್ಕರ್ ಇವರೇ ಸಮಾಜದಲ್ಲಿ ಮಾನವೀಯತೆಗೆ ಮುನ್ನುಡಿ ಬರೆದ ಸಮಾಜದ ಅಭಿವೃದ್ಧಿ ಹರಿಕಾರರು. ಸಮಾಜದಲ್ಲಿ ಬಹುತೇಕರು ಬದುಕಿಯೂ ಸತ್ತಂತೆ ಇದ್ದರೆ, ಇನ್ನು ಕೆಲವರು ಸತ್ತರೂ ಬದುಕಿದಂತೆ ಇರುತ್ತಾರೆ. ಈ ತ್ರಿಮೂರ್ತಿಗಳ ತತ್ವ ಆದರ್ಶಗಳು ಸಮಾಜಕ್ಕೆ ಮಾದರಿಯಾಗಿವೆ ಎಂದು ತಿಳಿಸಿದರು.</p>.<p>ಜಾನಪದ ಸಾಹಿತ್ಯದ ಹಿರಿಯ ಪ್ರತಿಭೆ ಮಂಡ್ಯದ ಸೋಬಾನೆ ಕೆಂಪಮ್ಮ ಹಾಗೂ ಜಾನಪದ ಗಾಯಕ ತುಮಕೂರು ಜಿಲ್ಲೆಯ ಬೆಳ್ಳಾವಿಯ ಎನ್.ಮೋಹನ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.</p>.<p>ಕಾರ್ಯಕ್ರಮದಲ್ಲಿ ಜಿಲ್ಲಾ ಗೌರವಾಧ್ಯಕ್ಷ ಬಿ.ಎಂ.ಚೆನ್ನಪ್ಪ, ಜಾನಪದ ಗಾಯಕ ಪಿಚ್ಚಳ್ಳಿ ಶ್ರೀನಿವಾಸ್, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಕೆ.ಚಂದ್ರಶೇಖರ್, ಕೆ.ಆರ್.ಲಿಂಗಪ್ಪ ಅವರ ಪುತ್ರ ಡಾ.ಪಂಚಾಕ್ಷರಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>