ಮನೆಗೆ ಬೆಳಿಗ್ಗೆ ದಿನಸಿ ತಂದಿಟ್ಟು ಬೈಕ್ನಲ್ಲಿ ಹೊರ ಹೋಗಿದ್ದ ಪ್ರಭಾಕರ್ ಗ್ರಾಮದ ಕೆರೆ ಬಳಿ ಮೊದಲು ಮರದ ಕೊಂಬೆಗೆ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಆದರೆ, ಮರದ ಕೊಂಬೆ ಹಾಗೂ ಹಗ್ಗ ತುಂಡಾಗಿದ್ದರಿಂದ ಆತ್ಮಹತ್ಯೆ ಪ್ರಯತ್ನ ವಿಫಲವಾಗಿದೆ. ಬಳಿಕ ಅವರು ಮರದ ಬಳಿಯೇ ಬೈಕ್ ನಿಲ್ಲಿಸಿ ಕೆರೆಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.