<p><strong>ಕೆಜಿಎಫ್: </strong>‘ಹಿರಿಯರ ಮಾರ್ಗದರ್ಶನ ಇಲ್ಲದೆ ಹೋದರೆ ಜೀವನ ನರಕ ಸದೃಶವಾಗುತ್ತದೆ. ಅವರ ಅನುಭವವನ್ನು ಪಡೆದು ಉತ್ತಮ ಜೀವನ ನಡೆಸಬೇಕು’ ಎಂದು 3ನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಧೀಶ ಗಣಪತಿ ಗುರುಸಿದ್ಧ ಬಾದಾಮಿ ಹೇಳಿದರು.</p>.<p>ನ್ಯಾಯಾಲಯದಲ್ಲಿ ಶನಿವಾರ ಹಿರಿಯ ನಾಗರಿಕರ ದಿನಾಚರಣೆ ಅಂಗವಾಗಿ ನಡೆದ ಕಾನೂನು ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು.</p>.<p>ತಂದೆ, ತಾಯಿ ತಮಗೆ ಕಷ್ಟವಾದರೂ ಮಕ್ಕಳು ಕಷ್ಟಪಡಬಾರದು ಎಂದು ತಮ್ಮ ಸುಖವನ್ನು ಧಾರೆ ಎರೆಯುತ್ತಾರೆ. ತಮ್ಮ ಹೊಟ್ಟೆ ತುಂಬದೆ ಇದ್ದರೂ, ಮಕ್ಕಳಿಗೆ ವಿವಿಧ ರೀತಿಯಲ್ಲಿ ತ್ಯಾಗ ಮಾಡುತ್ತಾರೆ. ಮಕ್ಕಳು ಮದುವೆಯಾಗುವ ತನಕ ಚೆನ್ನಾಗಿರುತ್ತಾರೆ. ಮದುವೆಯಾದ ನಂತರ ತಂದೆ, ತಾಯಿಯನ್ನು ಕಡೆಗಣಿಸುತ್ತಾರೆ ಎಂದು ತಿಳಿಸಿದರು.</p>.<p>ಈಚಿನ ದಿನಗಳಲ್ಲಿ ಹಿರಿಯರಿಗೆ ಗೌರವ ಕೊಡುವುದು ಕಡಿಮೆಯಾಗುತ್ತಿದೆ. ನಮಗಿಂತ ಹೆಚ್ಚು ವಸಂತಗಳನ್ನು ನೋಡಿ, ಅನುಭವದಲ್ಲಿ ಪಕ್ವವಾಗಿರುವ ಅವರನ್ನು ನಿಕೃಷ್ಟ ಮಾಡುವುದು ಸರಿಯಲ್ಲ ಎಂದು ಹೇಳಿದರು.</p>.<p>ನ್ಯಾಯಾಧೀಶರಾದ ಮಹೇಶ ಶಂ. ಪಾಟೀಲ, ರಹಿಂ ಆಲಿ ಮೌಲಾಸಾಬ್ ನದಾಫ್, ಆರ್. ಮಂಜುನಾಥ್, ವಿನೋದ್ ಕುಮಾರ್, ಎಂ. ಮಂಜು, ವಕೀಲರ ಸಂಘದ ಅಧ್ಯಕ್ಷ ಎಸ್.ಎನ್. ರಾಜಗೋಪಾಲಗೌಡ, ವೆಂಕಟರಾಮಯ್ಯ, ಮಣಿವಣ್ಣನ್, ಕೆ.ಸಿ. ನಾಗರಾಜ್ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೆಜಿಎಫ್: </strong>‘ಹಿರಿಯರ ಮಾರ್ಗದರ್ಶನ ಇಲ್ಲದೆ ಹೋದರೆ ಜೀವನ ನರಕ ಸದೃಶವಾಗುತ್ತದೆ. ಅವರ ಅನುಭವವನ್ನು ಪಡೆದು ಉತ್ತಮ ಜೀವನ ನಡೆಸಬೇಕು’ ಎಂದು 3ನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಧೀಶ ಗಣಪತಿ ಗುರುಸಿದ್ಧ ಬಾದಾಮಿ ಹೇಳಿದರು.</p>.<p>ನ್ಯಾಯಾಲಯದಲ್ಲಿ ಶನಿವಾರ ಹಿರಿಯ ನಾಗರಿಕರ ದಿನಾಚರಣೆ ಅಂಗವಾಗಿ ನಡೆದ ಕಾನೂನು ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು.</p>.<p>ತಂದೆ, ತಾಯಿ ತಮಗೆ ಕಷ್ಟವಾದರೂ ಮಕ್ಕಳು ಕಷ್ಟಪಡಬಾರದು ಎಂದು ತಮ್ಮ ಸುಖವನ್ನು ಧಾರೆ ಎರೆಯುತ್ತಾರೆ. ತಮ್ಮ ಹೊಟ್ಟೆ ತುಂಬದೆ ಇದ್ದರೂ, ಮಕ್ಕಳಿಗೆ ವಿವಿಧ ರೀತಿಯಲ್ಲಿ ತ್ಯಾಗ ಮಾಡುತ್ತಾರೆ. ಮಕ್ಕಳು ಮದುವೆಯಾಗುವ ತನಕ ಚೆನ್ನಾಗಿರುತ್ತಾರೆ. ಮದುವೆಯಾದ ನಂತರ ತಂದೆ, ತಾಯಿಯನ್ನು ಕಡೆಗಣಿಸುತ್ತಾರೆ ಎಂದು ತಿಳಿಸಿದರು.</p>.<p>ಈಚಿನ ದಿನಗಳಲ್ಲಿ ಹಿರಿಯರಿಗೆ ಗೌರವ ಕೊಡುವುದು ಕಡಿಮೆಯಾಗುತ್ತಿದೆ. ನಮಗಿಂತ ಹೆಚ್ಚು ವಸಂತಗಳನ್ನು ನೋಡಿ, ಅನುಭವದಲ್ಲಿ ಪಕ್ವವಾಗಿರುವ ಅವರನ್ನು ನಿಕೃಷ್ಟ ಮಾಡುವುದು ಸರಿಯಲ್ಲ ಎಂದು ಹೇಳಿದರು.</p>.<p>ನ್ಯಾಯಾಧೀಶರಾದ ಮಹೇಶ ಶಂ. ಪಾಟೀಲ, ರಹಿಂ ಆಲಿ ಮೌಲಾಸಾಬ್ ನದಾಫ್, ಆರ್. ಮಂಜುನಾಥ್, ವಿನೋದ್ ಕುಮಾರ್, ಎಂ. ಮಂಜು, ವಕೀಲರ ಸಂಘದ ಅಧ್ಯಕ್ಷ ಎಸ್.ಎನ್. ರಾಜಗೋಪಾಲಗೌಡ, ವೆಂಕಟರಾಮಯ್ಯ, ಮಣಿವಣ್ಣನ್, ಕೆ.ಸಿ. ನಾಗರಾಜ್ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>