<p><strong>ಕೋಲಾರ: </strong>ತಾಲ್ಲೂಕಿನ ಹುಲ್ಲಂಕಲ್ಲು ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಸಮೂಹ ಹಾಲು ಕರೆಯುವ ಯಂತ್ರಗಳನ್ನು ಕೋಚಿಮುಲ್ ನಿರ್ದೇಶಕ ಡಿ.ವಿ.ಹರೀಶ್ ಬುಧವಾರ ಉದ್ಘಾಟಿಸಿದರು.</p>.<p>‘ಹುಲ್ಲಂಕಲ್ಲು ಸಂಘಕ್ಕೆ ಒಕ್ಕೂಟದಿಂದ ಸುಮಾರು ₹ 3.50 ಲಕ್ಷ ಅನುದಾನ ನೀಡಲಾಗಿದೆ. ಹಾಲು ಉತ್ಪಾದಕರು ಹಾಲು ಒಕ್ಕೂಟದ ಸದುಪಯೋಗ ಪಡೆಯಬೇಕು’ ಎಂದು ಹರೀಶ್ ಸಲಹೆ ನೀಡಿದರು.</p>.<p>‘ಸಮೂಹ ಹಾಲು ಕರೆಯುವ ಯಂತ್ರಗಳಲ್ಲಿ ಹಾಲು ಕರೆಯುವುದರಿಂದ ಒಕ್ಕೂಟದಿಂದ ಸಂಘಕ್ಕೆ ಲೀಟರ್ಗೆ 30 ಪೈಸೆ ಹೆಚ್ಚಿಗೆ ನೀಡಲಾಗುವುದು. ಇದರಲ್ಲಿ 10 ಪೈಸೆ ಹಾಲು ಉತ್ಪಾದಕರಿಗೆ ನೀಡಬೇಕು ಮತ್ತು 20 ಪೈಸೆಯನ್ನು ಸಂಘದ ನಿರ್ವಹಣೆಗೆ ಬಳಸಬೇಕು’ ಎಂದು ಸೂಚಿಸಿದರು.</p>.<p>‘ಸಮೂಹ ಹಾಲು ಕರೆಯುವ ವ್ಯವಸ್ಥೆಯಿಂದ ಶುದ್ಧ ಮತ್ತು ಗುಣಮಟ್ಟದ ಹಾಲು ಉತ್ಪಾದನೆಗೆ ಸಹಕಾರಿಯಾಗುತ್ತದೆ. ಮಹಿಳೆಯರಿಗೆ ಹಾಲು ಕರೆಯುವ ಬವಣೆಯಿಂದ ಮುಕ್ತಿ ಸಿಗುತ್ತದೆ. ಸಂಘದ ಮೊದಲ ಅಂತಸ್ತಿನ ಕಟ್ಟಡ ನಿರ್ಮಾಣ ಮಾಡಿದರೆ ವೈಯಕ್ತಿಕವಾಗಿ ಧನಸಹಾಯ ಮಾಡುತ್ತೇನೆ’ ಎಂದು ಭರವಸೆ ನೀಡಿದರು.</p>.<p>ಕೋಚಿಮುಲ್ ತಾಲ್ಲೂಕು ಉಪ ವ್ಯವಸ್ಥಾಪಕ ಡಾ.ಎ.ಸಿ.ಶ್ರೀನಿವಾಸಗೌಡ, ಹುಲ್ಲಂಕಲ್ಲು ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಅಚ್ಚಪ್ಪ, ಗ್ರಾಮದ ಮುಖಂಡ ಈರಪ್ಪ, ಶಿಬಿರ ಅಧಿಕಾರಿಗಳಾದ ರಾಜಬಾಬು, ಸಮೀರ್ಪಾಷಾ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೋಲಾರ: </strong>ತಾಲ್ಲೂಕಿನ ಹುಲ್ಲಂಕಲ್ಲು ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಸಮೂಹ ಹಾಲು ಕರೆಯುವ ಯಂತ್ರಗಳನ್ನು ಕೋಚಿಮುಲ್ ನಿರ್ದೇಶಕ ಡಿ.ವಿ.ಹರೀಶ್ ಬುಧವಾರ ಉದ್ಘಾಟಿಸಿದರು.</p>.<p>‘ಹುಲ್ಲಂಕಲ್ಲು ಸಂಘಕ್ಕೆ ಒಕ್ಕೂಟದಿಂದ ಸುಮಾರು ₹ 3.50 ಲಕ್ಷ ಅನುದಾನ ನೀಡಲಾಗಿದೆ. ಹಾಲು ಉತ್ಪಾದಕರು ಹಾಲು ಒಕ್ಕೂಟದ ಸದುಪಯೋಗ ಪಡೆಯಬೇಕು’ ಎಂದು ಹರೀಶ್ ಸಲಹೆ ನೀಡಿದರು.</p>.<p>‘ಸಮೂಹ ಹಾಲು ಕರೆಯುವ ಯಂತ್ರಗಳಲ್ಲಿ ಹಾಲು ಕರೆಯುವುದರಿಂದ ಒಕ್ಕೂಟದಿಂದ ಸಂಘಕ್ಕೆ ಲೀಟರ್ಗೆ 30 ಪೈಸೆ ಹೆಚ್ಚಿಗೆ ನೀಡಲಾಗುವುದು. ಇದರಲ್ಲಿ 10 ಪೈಸೆ ಹಾಲು ಉತ್ಪಾದಕರಿಗೆ ನೀಡಬೇಕು ಮತ್ತು 20 ಪೈಸೆಯನ್ನು ಸಂಘದ ನಿರ್ವಹಣೆಗೆ ಬಳಸಬೇಕು’ ಎಂದು ಸೂಚಿಸಿದರು.</p>.<p>‘ಸಮೂಹ ಹಾಲು ಕರೆಯುವ ವ್ಯವಸ್ಥೆಯಿಂದ ಶುದ್ಧ ಮತ್ತು ಗುಣಮಟ್ಟದ ಹಾಲು ಉತ್ಪಾದನೆಗೆ ಸಹಕಾರಿಯಾಗುತ್ತದೆ. ಮಹಿಳೆಯರಿಗೆ ಹಾಲು ಕರೆಯುವ ಬವಣೆಯಿಂದ ಮುಕ್ತಿ ಸಿಗುತ್ತದೆ. ಸಂಘದ ಮೊದಲ ಅಂತಸ್ತಿನ ಕಟ್ಟಡ ನಿರ್ಮಾಣ ಮಾಡಿದರೆ ವೈಯಕ್ತಿಕವಾಗಿ ಧನಸಹಾಯ ಮಾಡುತ್ತೇನೆ’ ಎಂದು ಭರವಸೆ ನೀಡಿದರು.</p>.<p>ಕೋಚಿಮುಲ್ ತಾಲ್ಲೂಕು ಉಪ ವ್ಯವಸ್ಥಾಪಕ ಡಾ.ಎ.ಸಿ.ಶ್ರೀನಿವಾಸಗೌಡ, ಹುಲ್ಲಂಕಲ್ಲು ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಅಚ್ಚಪ್ಪ, ಗ್ರಾಮದ ಮುಖಂಡ ಈರಪ್ಪ, ಶಿಬಿರ ಅಧಿಕಾರಿಗಳಾದ ರಾಜಬಾಬು, ಸಮೀರ್ಪಾಷಾ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>