ಈಗ 7-8 ದಿನಗಳ ಹಿಂದೆ ಮಡಿವಾಳದ ಜಿ.ಪಾಪಣ್ಣ ಎಂಬುವರು ಅಧಿಕಾರಿಗಳ ಗಮನಕ್ಕೆ ತರದೆ ಜೆಸಿಬಿ ಯಂತ್ರದಿಂದ ಅಂಗನವಾಡಿ ಕಟ್ಟಡವನ್ನು ಕೆಡವಿರುವುದು ಖಂಡನೀಯ ಎಂದು ದಲಿತ ಸಂಘರ್ಷ ಸಮಿತಿ ಸದಸ್ಯರು ತಿಳಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಡಿಡಿಪಿಐ ಅವರಿಗೆ ಮನವಿ ಸಲ್ಲಿಸಿದ ಸದಸ್ಯರು ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಪ್ರತಿಭಟನೆಯ ನೇತೃತ್ವವನ್ನು ದಲಿತ ಸಂಘರ್ಷ ಸಮಿತಿ ಸಂಚಾಲಕ ಕೀಲುಹೊಳಲಿ ಸತೀಶ್, ಸಂಚಾಲಕ ಜಮ್ಮನಹಳ್ಳಿ ಜಗದೀಶ್, ಖಜಾಂಚಿ ಬಂಗವಾದಿ ಶ್ರೀನಿವಾಸ್, ಬೈರಕೂರು ಶಿವಶಂಕರ್, ನಗರ ಸಮಿತಿ ಹರೀಶ್, ವಿ.ಕೆ.ರಾಜು, ಕಲಾವಿದ ನರಸಿಂಹ ಮುಂತಾದವರು ಪಾಲ್ಗೊಂಡಿದ್ದರು.