ಆದರೆ, ಕಾಮಗಾರಿ ಕೈಗೊಂಡ ಸಂದರ್ಭದಲ್ಲಿ ಹಾಳಾದ ರಸ್ತೆ ದುರಸ್ತಿ ಮಾಡದೇ ಇರುವುದರಿಂದ ಸಂಚಾರಕ್ಕೆ ಅಡಚಣೆಯಾಗಿದೆ. ‘ಗಾಂಧಿ ವೃತ್ತದಿಂದ ದೊಡ್ಡ ಕೆರೆ ಕಟ್ಟೆಯ ಪಕ್ಕದಲ್ಲಿ ಹಾದು ಹೋಗುವ 2 ಕಿ.ಮೀ ರಸ್ತೆಯು ಮುಂದೆ ಕಾಡದೇನಹಳ್ಳಿ , ನಲ್ಲಪನಹಳ್ಳಿ, ಯಶವಂತಪುರ, ಬೊಪ್ಪನಹಳ್ಳಿ ,ಚಿಕ್ಕಾಪುರ, ಮಾದನಹಟ್ಟಿ ಹುರುಳುಗೆರೆ ಸೇರಿದಂತೆ 10 ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯಾಗಿದೆ.