<p><strong>ಶ್ರೀನಿವಾಸಪುರ: </strong>ತಾಲ್ಲೂಕಿನಲ್ಲಿ ಗುರುವಾರ ಸುರಿದ ಸೋನೆ ಮಳೆಯಿಂದಾಗಿ ರಾಗಿ ತೆನೆ ಕಟಾವಿಗೆ ಹಿನ್ನಡೆ ಉಂಟಾಗಿದೆ. ಅನಿರೀಕ್ಷಿತ ಮಳೆಯಿಂದಾಗಿ ಹೊಲಗಳಲ್ಲಿ ಕೊಯ್ಲು ಮಾಡಿದ್ದ ರಾಗಿ ಕಾಳು ನೆನೆದುಹೋಗಿವೆ.</p>.<p>ಬುಧವಾರ ಬೆಳಿಗ್ಗೆ ದಟ್ಟವಾದ ಮಂಜು ಕವಿದಿತ್ತು. ಬೆಳಿಗ್ಗೆ 8 ಗಂಟೆಯಾದರೂ, ವಾಹನ ಚಾಲಕರು ಹೆಡ್ಲೈಟ್ ಉರಿಸಬೇಕಾದ ಅನಿವಾರ್ಯ ಪರಿಸ್ಥಿತಿ ಉಂಟಾಗಿತ್ತು. ಮರಗಳಿಂದ ತೊಟ್ಟಿಡುತ್ತಿದ್ದ ನೀರನ್ನು ಕಂಡ ರೈತರು ಮಳೆ ಬರುವುದಿಲ್ಲ ಎಂದು ನಂಬಿದ್ದರು. ಹಾಗಾಗಿ ಕೊಯ್ದ ರಾಗಿ ಕಾಳನ್ನು ಕಟ್ಟುವ, ಒಣಗಿದ ಕಟ್ಟುಗಳನ್ನು ಗಾಳಿ ಉಡ್ಡೆಗೆ ಇಡುವ ಗೋಜಿಗೆ ಹೋಗಿರಲಿಲ್ಲ.</p>.<p>ಮಳೆ ಹೀಗೆಯೇ ಮುಂದುವರಿದರೆ ಕಟಾವಿಗೆ ಬಂದಿರುವ ರಾಗಿ ತೆನೆ ಮೊಳಕೆಯೊಡೆಯುವ ಸಂಭವ ಇದೆ. ಈ ಬಾರಿ ಹೊಲಗಳಲ್ಲಿ ರಾಗಿ ತೆನೆಗಳು ಎತ್ತರಕ್ಕೆ ಬೆಳೆದು ಬಿದ್ದುಹೋಗಿವೆ. ಅಂತಹ ಹೊಲಗಳಲ್ಲಿ ತೆನೆ ಬೇಗ ಮೊಳಕೆಯೊಡೆಯುತ್ತದೆ. ಅದರಿಂದ ರೈತರಿಗೆ ನಷ್ಟ ಉಂಟಾಗುತ್ತದೆ. ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬಂತಾಗುತ್ತದೆ.</p>.<p><strong>ಬೆಲೆ ಕುಸಿತ</strong>: ಈ ಬಾರಿ ರಾಗಿ ಬಂಪರ್ ಬೆಳೆ ಬಂದಿರುವುದರಿಂದ ಮಾರುಕಟ್ಟೆಯಲ್ಲಿ ರಾಗಿ ಬೆಲೆಯಲ್ಲಿ ಗಣನೀಯ ಇಳಿಕೆ ಕಂಡುಬಂದಿದೆ. ಈ ಹಿಂದೆ ಉತ್ತಮ ಗುಣಮಟ್ಟದ ರಾಗಿ ಕ್ವಿಂಟಲ್ ಒಂದಕ್ಕೆ ₹ 3,700 ರಿಂದ ₹ 4,000ವರೆಗೆ ಮಾರಾಟವಾಗುತ್ತಿತ್ತು. ಆದರೆ ಇದೀಗ ₹ 2,000 ದಿಂದ ₹ 2,700ವರೆಗೆ ಮಾರಾಟವಾಗುತ್ತಿದೆ. ಇದರಿಂದ ರಾಗಿ ಬೆಳೆದ ರೈತರಿಗೆ ನಷ್ಟ ಉಂಟಾಗುತ್ತಿದೆ.</p>.<p>ಈ ಬಾರಿಯೂ ಮಳೆ ಕೈಕೊಡಬಹುದು ಎಂದು ತಿಳಿದ ರೈತರು ಹಿಂದಿನ ವರ್ಷ ಬೆಳೆದ ರಾಗಿಯನ್ನು ದಾಸ್ತಾನು ಮಾಡಿದ್ದರು. ರಾಗಿ ವ್ಯಾಪಾರಿಗಳೂ ಹೆಚ್ಚಿನ ಲಾಭ ಪಡೆಯುವ ಉದ್ದೇಶದಿಂದ ದಾಸ್ತಾನು ಮಾಡಿದ್ದರು. ಆದರೆ ಈ ಬಾರಿ ಮಳೆರಾಯ ಮೋಸ ಮಾಡಲಿಲ್ಲ. ಎಲ್ಲ ಕಡೆ ರಾಗಿ ಬೆಳೆ ಹುಲುಸಾಗಿ ಬಂದಿದೆ. ಸುಗ್ಗಿ ಆರಂಭವಾಗಿದೆ. ಇದನ್ನು ಗಮನಿಸಿದ ರೈತರು ಹಾಗೂ ವ್ಯಾಪಾರಿಗಳು ಬೆಲೆ ಕುಸಿತದ ಭಯದಿಂದ ಒಂದೇ ಸಲ ಮಾರುಕಟ್ಟೆಗೆ ಬಿಟ್ಟಿದ್ದಾರೆ. ಇದು ಬೆಲೆ ಇಳಿಕೆಗೆ ಕಾರಣವಾಗಿದೆ.</p>.<p>ರಾಗಿ ಸುಗ್ಗಿ ಮುಗಿಯುವ ವೇಳೆಗೆ ಬೆಲೆಯಲ್ಲಿ ಇನ್ನಷ್ಟು ಇಳಿಕೆಯಾಗುವ ಸಾಧ್ಯತೆ ಇದೆ ಎಂಬುದು ವ್ಯಾಪಾರಿಗಳ ಅಭಿಪ್ರಾಯ. ಇದರಿಂದಾಗಿ ಹಳೆ ರಾಗಿಯನ್ನು ಸಾಗಿಸುವ ಪ್ರಯತ್ನ ಎಲ್ಲ ಕಡೆ ನಡೆಯುತ್ತಿದೆ.</p>.<p>‘ರಾಗಿ ಉತ್ಪಾದನಾ ವೆಚ್ಚ ಗಗನಕ್ಕೇರಿದೆ. ಈಗಿನ ಬೆಲೆಯಲ್ಲಿ ಮಾರಾಟ ಮಾಡಿದರೆ ಹೆಚ್ಚು ನಷ್ಟವಾಗುತ್ತದೆ. ಬಂಪರ್ ಬೆಳೆಯಾದರೂ, ಅಧಿಕ ನಿರ್ವಹಣಾ ವೆಚ್ಚದ ಪರಿಣಾಮವಾಗಿ ನಷ್ಟ ಸಾಮಾನ್ಯವಾಗಿದೆ’ ಎಂದು ಕೃಷಿಕ ನಾರಾಯಣಸ್ವಾಮಿ ಹೇಳುತ್ತಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶ್ರೀನಿವಾಸಪುರ: </strong>ತಾಲ್ಲೂಕಿನಲ್ಲಿ ಗುರುವಾರ ಸುರಿದ ಸೋನೆ ಮಳೆಯಿಂದಾಗಿ ರಾಗಿ ತೆನೆ ಕಟಾವಿಗೆ ಹಿನ್ನಡೆ ಉಂಟಾಗಿದೆ. ಅನಿರೀಕ್ಷಿತ ಮಳೆಯಿಂದಾಗಿ ಹೊಲಗಳಲ್ಲಿ ಕೊಯ್ಲು ಮಾಡಿದ್ದ ರಾಗಿ ಕಾಳು ನೆನೆದುಹೋಗಿವೆ.</p>.<p>ಬುಧವಾರ ಬೆಳಿಗ್ಗೆ ದಟ್ಟವಾದ ಮಂಜು ಕವಿದಿತ್ತು. ಬೆಳಿಗ್ಗೆ 8 ಗಂಟೆಯಾದರೂ, ವಾಹನ ಚಾಲಕರು ಹೆಡ್ಲೈಟ್ ಉರಿಸಬೇಕಾದ ಅನಿವಾರ್ಯ ಪರಿಸ್ಥಿತಿ ಉಂಟಾಗಿತ್ತು. ಮರಗಳಿಂದ ತೊಟ್ಟಿಡುತ್ತಿದ್ದ ನೀರನ್ನು ಕಂಡ ರೈತರು ಮಳೆ ಬರುವುದಿಲ್ಲ ಎಂದು ನಂಬಿದ್ದರು. ಹಾಗಾಗಿ ಕೊಯ್ದ ರಾಗಿ ಕಾಳನ್ನು ಕಟ್ಟುವ, ಒಣಗಿದ ಕಟ್ಟುಗಳನ್ನು ಗಾಳಿ ಉಡ್ಡೆಗೆ ಇಡುವ ಗೋಜಿಗೆ ಹೋಗಿರಲಿಲ್ಲ.</p>.<p>ಮಳೆ ಹೀಗೆಯೇ ಮುಂದುವರಿದರೆ ಕಟಾವಿಗೆ ಬಂದಿರುವ ರಾಗಿ ತೆನೆ ಮೊಳಕೆಯೊಡೆಯುವ ಸಂಭವ ಇದೆ. ಈ ಬಾರಿ ಹೊಲಗಳಲ್ಲಿ ರಾಗಿ ತೆನೆಗಳು ಎತ್ತರಕ್ಕೆ ಬೆಳೆದು ಬಿದ್ದುಹೋಗಿವೆ. ಅಂತಹ ಹೊಲಗಳಲ್ಲಿ ತೆನೆ ಬೇಗ ಮೊಳಕೆಯೊಡೆಯುತ್ತದೆ. ಅದರಿಂದ ರೈತರಿಗೆ ನಷ್ಟ ಉಂಟಾಗುತ್ತದೆ. ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬಂತಾಗುತ್ತದೆ.</p>.<p><strong>ಬೆಲೆ ಕುಸಿತ</strong>: ಈ ಬಾರಿ ರಾಗಿ ಬಂಪರ್ ಬೆಳೆ ಬಂದಿರುವುದರಿಂದ ಮಾರುಕಟ್ಟೆಯಲ್ಲಿ ರಾಗಿ ಬೆಲೆಯಲ್ಲಿ ಗಣನೀಯ ಇಳಿಕೆ ಕಂಡುಬಂದಿದೆ. ಈ ಹಿಂದೆ ಉತ್ತಮ ಗುಣಮಟ್ಟದ ರಾಗಿ ಕ್ವಿಂಟಲ್ ಒಂದಕ್ಕೆ ₹ 3,700 ರಿಂದ ₹ 4,000ವರೆಗೆ ಮಾರಾಟವಾಗುತ್ತಿತ್ತು. ಆದರೆ ಇದೀಗ ₹ 2,000 ದಿಂದ ₹ 2,700ವರೆಗೆ ಮಾರಾಟವಾಗುತ್ತಿದೆ. ಇದರಿಂದ ರಾಗಿ ಬೆಳೆದ ರೈತರಿಗೆ ನಷ್ಟ ಉಂಟಾಗುತ್ತಿದೆ.</p>.<p>ಈ ಬಾರಿಯೂ ಮಳೆ ಕೈಕೊಡಬಹುದು ಎಂದು ತಿಳಿದ ರೈತರು ಹಿಂದಿನ ವರ್ಷ ಬೆಳೆದ ರಾಗಿಯನ್ನು ದಾಸ್ತಾನು ಮಾಡಿದ್ದರು. ರಾಗಿ ವ್ಯಾಪಾರಿಗಳೂ ಹೆಚ್ಚಿನ ಲಾಭ ಪಡೆಯುವ ಉದ್ದೇಶದಿಂದ ದಾಸ್ತಾನು ಮಾಡಿದ್ದರು. ಆದರೆ ಈ ಬಾರಿ ಮಳೆರಾಯ ಮೋಸ ಮಾಡಲಿಲ್ಲ. ಎಲ್ಲ ಕಡೆ ರಾಗಿ ಬೆಳೆ ಹುಲುಸಾಗಿ ಬಂದಿದೆ. ಸುಗ್ಗಿ ಆರಂಭವಾಗಿದೆ. ಇದನ್ನು ಗಮನಿಸಿದ ರೈತರು ಹಾಗೂ ವ್ಯಾಪಾರಿಗಳು ಬೆಲೆ ಕುಸಿತದ ಭಯದಿಂದ ಒಂದೇ ಸಲ ಮಾರುಕಟ್ಟೆಗೆ ಬಿಟ್ಟಿದ್ದಾರೆ. ಇದು ಬೆಲೆ ಇಳಿಕೆಗೆ ಕಾರಣವಾಗಿದೆ.</p>.<p>ರಾಗಿ ಸುಗ್ಗಿ ಮುಗಿಯುವ ವೇಳೆಗೆ ಬೆಲೆಯಲ್ಲಿ ಇನ್ನಷ್ಟು ಇಳಿಕೆಯಾಗುವ ಸಾಧ್ಯತೆ ಇದೆ ಎಂಬುದು ವ್ಯಾಪಾರಿಗಳ ಅಭಿಪ್ರಾಯ. ಇದರಿಂದಾಗಿ ಹಳೆ ರಾಗಿಯನ್ನು ಸಾಗಿಸುವ ಪ್ರಯತ್ನ ಎಲ್ಲ ಕಡೆ ನಡೆಯುತ್ತಿದೆ.</p>.<p>‘ರಾಗಿ ಉತ್ಪಾದನಾ ವೆಚ್ಚ ಗಗನಕ್ಕೇರಿದೆ. ಈಗಿನ ಬೆಲೆಯಲ್ಲಿ ಮಾರಾಟ ಮಾಡಿದರೆ ಹೆಚ್ಚು ನಷ್ಟವಾಗುತ್ತದೆ. ಬಂಪರ್ ಬೆಳೆಯಾದರೂ, ಅಧಿಕ ನಿರ್ವಹಣಾ ವೆಚ್ಚದ ಪರಿಣಾಮವಾಗಿ ನಷ್ಟ ಸಾಮಾನ್ಯವಾಗಿದೆ’ ಎಂದು ಕೃಷಿಕ ನಾರಾಯಣಸ್ವಾಮಿ ಹೇಳುತ್ತಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>