ಕೊಪ್ಪಳ: ‘ವಿಸ್ತಾರ’ ರಂಗ ಕಾರ್ಯಕ್ರಮಗಳು ಆಂತರಿಕ ಹಾಗೂ ಬಾಹ್ಯ ರಂಗಭೂಮಿ ವಿಸ್ತಾರಗೊಳಿಸುತ್ತವೆ ಎಂದು ಸಾಹಿತಿ ವಿಠ್ಠಪ್ಪ ಗೋರಂಟ್ಲಿ ಹೇಳಿದರು.
ಭಾಗ್ಯನಗರದ ಜ್ಞಾನಬಂಧು ವಿದ್ಯಾ ಸಂಸ್ಥೆ ಆವರಣದಲ್ಲಿ ಶನಿವಾರ ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ‘ಚಿಣ್ಣರ ಚಿಲುಮೆ’ ಯೋಜನೆಯ ಅಡಿ ‘ದೇವತಾಪುರದ ಮಕ್ಕಳು’ ಮಕ್ಕಳ ನಾಟಕ ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಈ ನಾಟಕವನ್ನು ವೆಣ್ಣಿಲಾ ಹಾಲ್ಕುರಿಕೆ ರಚಿಸಿದ್ದಾರೆ. ಗುರುರಾಜ ಹೊಸಪೇಟೆ ನಿರ್ದೇಶಿಸಿದ್ದಾರೆ.
ಜ್ಞಾನಬಂಧು ವಿದ್ಯಾ ಸಂಸ್ಥೆಯ ಅಧ್ಯಕ್ಷ ದಾನಪ್ಪ ಕವಲೂರು, ರಂಗನಿರ್ದೇಶಕ ಶಿವಶಂಕರ್ ಹಾಲ್ಕುರಿಕೆ, ತಿರುಗಾಟದ ಸಂಯೋಜಕ ಲಕ್ಷ್ಮಣ ಪಿರಗಾರ, ಸುಂಕಪ್ಪ ಮೀಸಿ,ರೇಣುಕಾ ಹೊನ್ನಳ್ಳಿ ಇದ್ದರು.