‘ನಮ್ಮ ಅಂಚೆ ಕಚೇರಿಯಲ್ಲಿ ಆಧಾರ್, ಮೊಬೈಲ್ ಲಿಂಕ್ ಮಾಡಲು ಪ್ರತ್ಯೇಕ ಸಿಬ್ಬಂದಿ ಇಲ್ಲ. ಗ್ರಾಮೀಣ ಅಂಚೆ ಕಚೇರಿಯ ಗುತ್ತಿಗೆ ಆಧಾರಿತ ಸಿಬ್ಬಂದಿ ತಮ್ಮ ಕೆಲಸ ನಿರ್ವಹಿಸಿ, ಇಲ್ಲಿ ಬಂದಾಗ ಮಾತ್ರ ಈ ಕೆಲಸ ಮಾಡುತ್ತಾರೆ. ಜನರಿಗೆ ಆಗುತ್ತಿರುವ ತೊಂದರೆಯ ಬಗ್ಗೆ ಗಮನಹರಿಸಲಾಗುವುದು’ ಎಂದು ತಾವರಗೇರಾ ಅಂಚೆಕಚೇರಿಯ ಇನ್ಸ್ಪೆಕ್ಟರ್ ಮಂಜುನಾಥ ‘ಪ್ರಜಾವಾಣಿ’ಗೆ ತಿಳಿಸಿದರು.