<p><strong>ಮುನಿರಾಬಾದ್</strong>: ಬೇವಿನಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಬುಧವಾರ ಸಂಭವಿಸಿದ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಮೃತ ಪಟ್ಟಿದ್ದು, ನಾಲ್ವರಿಗೆ ಗಾಯಗಳಾಗಿವೆ.</p>.<p>ಕೊಪ್ಪಳ ಕಡೆ ಹೊರಟಿದ್ದ ಸರಕು ಸಾಗಿಸುವ ವಾಹನ ಮತ್ತು ಲಘು ಪ್ರಯಾಣಿಕರ ವಾಹನ ಪರಸ್ಪರ ಉಜ್ಜಿಕೊಂಡ ಪರಿಣಾಮ ಪ್ರಯಾಣಿಕರ ವಾಹನ ರಸ್ತೆ ವಿಭಜಕ ದಾಟಿ ಬಲ ಬದಿಗೆ ಹೋಗಿದೆ.</p>.<p>ಅದೇ ಸಮಯದಲ್ಲಿ ಎದುರಿನಿಂದ ಬರುತ್ತಿದ್ದ ಸಾರಿಗೆ ಸಂಸ್ಥೆಯ ಕುಕನೂರು–ಧರ್ಮಸ್ಥಳ ಬಸ್ ಪ್ರಯಾಣಿಕರ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಅಪಘಾತದ ಪರಿಣಾಮ ಸ್ಥಳದಲ್ಲೇ ಇಬ್ಬರು ಅಸು ನೀಗಿದ್ದಾರೆ.</p>.<p>ಮೃತರನ್ನು ಬಸಾಪುರ ಗ್ರಾಮದ ಪ್ರಮೀಳಾ ಶಶಿಧರ(35) ಹಾಗೂ ಹಿರೇ ಬಗನಾಳ ಗ್ರಾಮದ ಹನುಮಂತಪ್ಪ ಬಾಲಪ್ಪ ದೇವರಮನಿ(60) ಎಂದು ಗುರುತಿಸಲಾಗಿದೆ. ಇಬ್ಬರೂ ಲಘು ಪ್ರಯಾಣಿಕರ ವಾಹನದಲ್ಲಿದ್ದರು.</p>.<p>ಟಾಟಾ ಏಸ್ ಚಾಲಕ ರಾಜಾಹುಸೇನ್ ಹಿಟ್ನಾಳ ಸೇರಿದಂತೆ ಪರಶುರಾಮ ಶಹಾಪುರ, ರಾಮಪ್ಪ ಹಿಟ್ನಾಳ, ನಾಗರಾಜ ಹಿಟ್ನಾಳ ನಾಲ್ವರಿಗೆ ಗಾಯಗಳಾಗಿದ್ದು, ಕೊಪ್ಪಳ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.</p>.<p>’ಲಘು ವಾಹನಗಳ ಚಾಲಕರ ನಿರ್ಲಕ್ಷವೇ ಘಟನೆಗೆ ಕಾರಣ’ ಎಂದು ಪ್ರಕರಣ ದಾಖಲಿಸಿರುವ ಮುನಿರಾಬಾದ್ ಪೊಲೀಸರು ತಿಳಿಸಿದ್ದಾರೆ.</p>.<p>ಅದೇ ಸಮಯಕ್ಕೆ ಹೆದ್ದಾರಿಯಲ್ಲಿ ಪ್ರಯಾಣಿಸುತ್ತಿದ್ದ ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಅವರು ಗಾಯಾಳುಗಳನ್ನು ಆಂಬುಲೆನ್ಸ್ನಲ್ಲಿ ಕಳಿಸಲು ನೆರವಾದರು ಎಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುನಿರಾಬಾದ್</strong>: ಬೇವಿನಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಬುಧವಾರ ಸಂಭವಿಸಿದ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಮೃತ ಪಟ್ಟಿದ್ದು, ನಾಲ್ವರಿಗೆ ಗಾಯಗಳಾಗಿವೆ.</p>.<p>ಕೊಪ್ಪಳ ಕಡೆ ಹೊರಟಿದ್ದ ಸರಕು ಸಾಗಿಸುವ ವಾಹನ ಮತ್ತು ಲಘು ಪ್ರಯಾಣಿಕರ ವಾಹನ ಪರಸ್ಪರ ಉಜ್ಜಿಕೊಂಡ ಪರಿಣಾಮ ಪ್ರಯಾಣಿಕರ ವಾಹನ ರಸ್ತೆ ವಿಭಜಕ ದಾಟಿ ಬಲ ಬದಿಗೆ ಹೋಗಿದೆ.</p>.<p>ಅದೇ ಸಮಯದಲ್ಲಿ ಎದುರಿನಿಂದ ಬರುತ್ತಿದ್ದ ಸಾರಿಗೆ ಸಂಸ್ಥೆಯ ಕುಕನೂರು–ಧರ್ಮಸ್ಥಳ ಬಸ್ ಪ್ರಯಾಣಿಕರ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಅಪಘಾತದ ಪರಿಣಾಮ ಸ್ಥಳದಲ್ಲೇ ಇಬ್ಬರು ಅಸು ನೀಗಿದ್ದಾರೆ.</p>.<p>ಮೃತರನ್ನು ಬಸಾಪುರ ಗ್ರಾಮದ ಪ್ರಮೀಳಾ ಶಶಿಧರ(35) ಹಾಗೂ ಹಿರೇ ಬಗನಾಳ ಗ್ರಾಮದ ಹನುಮಂತಪ್ಪ ಬಾಲಪ್ಪ ದೇವರಮನಿ(60) ಎಂದು ಗುರುತಿಸಲಾಗಿದೆ. ಇಬ್ಬರೂ ಲಘು ಪ್ರಯಾಣಿಕರ ವಾಹನದಲ್ಲಿದ್ದರು.</p>.<p>ಟಾಟಾ ಏಸ್ ಚಾಲಕ ರಾಜಾಹುಸೇನ್ ಹಿಟ್ನಾಳ ಸೇರಿದಂತೆ ಪರಶುರಾಮ ಶಹಾಪುರ, ರಾಮಪ್ಪ ಹಿಟ್ನಾಳ, ನಾಗರಾಜ ಹಿಟ್ನಾಳ ನಾಲ್ವರಿಗೆ ಗಾಯಗಳಾಗಿದ್ದು, ಕೊಪ್ಪಳ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.</p>.<p>’ಲಘು ವಾಹನಗಳ ಚಾಲಕರ ನಿರ್ಲಕ್ಷವೇ ಘಟನೆಗೆ ಕಾರಣ’ ಎಂದು ಪ್ರಕರಣ ದಾಖಲಿಸಿರುವ ಮುನಿರಾಬಾದ್ ಪೊಲೀಸರು ತಿಳಿಸಿದ್ದಾರೆ.</p>.<p>ಅದೇ ಸಮಯಕ್ಕೆ ಹೆದ್ದಾರಿಯಲ್ಲಿ ಪ್ರಯಾಣಿಸುತ್ತಿದ್ದ ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಅವರು ಗಾಯಾಳುಗಳನ್ನು ಆಂಬುಲೆನ್ಸ್ನಲ್ಲಿ ಕಳಿಸಲು ನೆರವಾದರು ಎಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>