ಸಹಾಯಕ ಕೃಷಿ ನಿರ್ದೇಶಕ ಮಹಾದೇವಪ್ಪ ನಾಯಕ ಮಾತನಾಡಿ,‘ಹಿಂಗಾರು ಹಂಗಾಮಿಗೆ ತಾಲ್ಲೂಕಿಗೆ ಒಟ್ಟು 4500 ಕ್ವಿಂಟಲ್ ಕಡಲೆ ಬೀಜದ ಅಂದಾಜು ಬೇಡಿಕೆ ಇದೆ. ಸದ್ಯ 720 ಕ್ವಿಂಟಲ್ ಬಂದಿದೆ. ಸುಮಾರು 120 ಕ್ವಿಂಟಲ್ ಜೋಳದ ಬೀಜಕ್ಕೆ ಬೇಡಿಕೆ ಸಲ್ಲಿಸಲಾಗಿದೆ. ಈಗ 20 ಕ್ವಿಂಟಲ್ ಬಂದಿದೆ. ಕಡಲೆ ಬೀಜದ ಪೂರ್ಣ ದರ ಕ್ವಿಂಟಲ್ಗೆ ₹7,000 ಇದೆ. ರೈತರು ₹4,500 ಪಾವತಿಸಬೇಕಾಗುತ್ತದೆ. ಜೋಳದ ಪೂರ್ಣ ದರ ಕೇಜಿಗೆ ₹57 ಇದ್ದು ಪರಿಶಿಷ್ಟ ಜಾತಿ, ಪಂಗಡದವರಿಗೆ ₹30 ಹಾಗೂ ಸಾಮಾನ್ಯರಿಗೆ ₹20 ಸಹಾಯಧನದಲ್ಲಿವಿತರಿಸಲಾಗುತ್ತದೆ’ ಎಂದು ವಿವರಿಸಿದರು.