ಕೊಪ್ಪಳ: ವಿಧಾನಸಭಾ ಚುನಾವಣೆಯ ಪ್ರಚಾರಕ್ಕಾಗಿ ಜಿಲ್ಲೆಯಲ್ಲಿ ಮೂರು ಕಡೆ ಶುಕ್ರವಾರ (ಮೇ 5) ನಿಗದಿಯಾಗಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಎಲ್ಲಾ ಕಾರ್ಯಕ್ರಮಗಳು ರದ್ದಾಗಿವೆ.
ಅಮಿತ್ ಶಾ ಮಧ್ಯಾಹ್ನ 2.30ಕ್ಕೆ ಮಸ್ಕಿಯಿಂದ ಕಾರಟಗಿಗೆ ಬಂದು ಎಪಿಎಂಸಿ ಗೇಟ್ನಿಂದ ಪುರಸಭೆ ಕಾರ್ಯಾಲಯದ ತನಕ ಒಂದು ಕಿ.ಮೀ. ರೋಡ್ ಶೋ ನಡೆಸಿ ಕನಕಗಿರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ದಢೇಸೂಗೂರು ಪರ ಮತಯಾಚನೆ ಮಾಡಬೇಕಿತ್ತು. ಬಳಿಕ ಹೆಲಿಕಾಫ್ಟರ್ ಮೂಲಕ ಸಂಜೆ 4 ಗಂಟೆಗೆ ಕುಷ್ಟಗಿಗೆ ಬಂದು ವೇದಿಕೆ ಕಾರ್ಯಕ್ರಮದ ಮೂಲಕ ಬಿಜೆಪಿ ಅಭ್ಯರ್ಥಿ ದೊಡ್ಡನಗೌಡ ಪಾಟೀಲ ಪರ ಮತಯಾಚಿಸಬೇಕಿತ್ತು. 5.30ಕ್ಕೆ ಕೊಪ್ಪಳದಲ್ಲಿ ರೋಡ್ ಶೋ ನಿಗದಿಯಾಗಿತ್ತು.