ಕರಡಿ ಎಲ್ಲಿ ಓಡಿ ಹೋಯಿತು ಎಂದು ತಿಳಿಯದೇ ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ರೈತರು ಸಂಜೆಯವರೆಗೆ ಹುಡುಕಾಡಿದರೂ ಯಾರ ಕಣ್ಣಿಗೂ ಬೀಳಲಿಲ್ಲ. ಕೊಯ್ಲು ಮಾಡಿದ ಮೆಕ್ಕೆಜೋಳ, ಬಾಳೆ ತೋಟ, ಕಬ್ಬಿನ ಪೊದೆಗಳುಈ ಭಾಗದಲ್ಲಿ ಹೆಚ್ಚಿದ್ದು, ಸಮೀಪದಲ್ಲಿಯೇ ಕಾಸನಕಂಡಿ ಕಾಯ್ದಿಟ್ಟ ಅರಣ್ಯ ಪ್ರದೇಶವಿದೆ. ಕರಡಿ ಹೋದ ದಿಕ್ಕಿನಲ್ಲಿ ಸಂಜೆಯವರೆಗೆ ಪರಿಶೀಲನೆ ನಡೆಸಿದರೂ ಸೆರೆ ಹಿಡಿಯಲು ಆಗಲಿಲ್ಲ.