ತಮ್ಮದೇ ಜಮೀನಿನಲ್ಲಿರುವ ಕೃಷಿ ಹೊಂಡ ಮಳೆಯಿಂದ ಭರ್ತಿಯಾಗಿತ್ತು. ಎತ್ತುಗಳ ಮೈ ತೊಳೆಯಲು ಹೋಗಿ ಆಯತಪ್ಪಿ ನೀರಿನಲ್ಲಿ ಮುಳುಗಿದ್ದಾನೆ. ಕೃಷಿ ಹೊಂಡದ ಬಳಿ ಎತ್ತು ಮಾತ್ರ ಇತ್ತು. ಆದರೆ ಬಾಲಕ ನೀರಿನಲ್ಲಿ ಮುಳುಗಿದ್ದು ನಂತರ ತಿಳಿದಿದೆ. 8ನೇ ತರಗತಿಯಲ್ಲಿ ಓದುತ್ತಿದ್ದ ಬಾಲಕನ ಅಕಾಲಿಕ ಮರಣಕ್ಕೆ ಪಾಲಕರಲ್ಲಿ ಶೋಕ ಮಡುಗಟ್ಟಿತ್ತು. ಈ ಸಂಬಂಧ ಇಲ್ಲಿಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.