ಮಾದಿಗ ಮೀಸಲಾತಿ ಹೋರಾಟ ಸಮಿತಿ, ಮಾದಿಗ ದಂಡೋರಾ, ಮಾದಿಗ ಮಹಾಸಭೆಯಿಂದ ನಡೆದ ಪ್ರತಿಭಟನೆ ತಾಲ್ಲೂಕು ಕ್ರೀಡಾಂಗಣದಿಂದ ಜಿಲ್ಲಾಧಿಕಾರಿ ಕಚೇರಿಗೆ ತೆರಳುವಾಗ ಬಸವೇಶ್ವರ ವೃತ್ತದಲ್ಲಿ ಸಮಿತಿ ಕಾರ್ಯಕರ್ತರು ಟಯರ್ಗೆ ಬೆಂಕಿ ಹಚ್ಚಿದರು. ಇದನ್ನು ತಡೆಯಲು ಮಫ್ತಿಯಲ್ಲಿ ಇದ್ದ ಪೊಲೀಸ್ ಸಿಬ್ಬಂದಿ ಜೊತೆ ವಾಗ್ವಾದ ನಡೆಸಿ ಎಳೆದಾಡಿದರೆನ್ನಲಾಗಿದೆ.