ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬಸವಣ್ಣ’ ಕವರ್ ಸಾಂಗ್ ಬಿಡುಗಡೆ

Last Updated 14 ಡಿಸೆಂಬರ್ 2020, 12:29 IST
ಅಕ್ಷರ ಗಾತ್ರ

ಗಂಗಾವತಿ: ಕೊಪ್ಪಳದ ಗವಿಮಠದ ಅಭಿನವ ಗವಿಸಿದ್ದೇಶ್ವರ ಶ್ರೀ ವಿಶ್ವಜ್ಯೋತಿ ಬಸವಣ್ಣನವರ ಕವರ್ ಸಾಂಗ್ ಅನ್ನು ಬಿಡುಗಡೆ ಮಾಡಿದರು.

ನಂತರ ಮಾತನಾಡಿದ ಅವರು,‘ಬಸವಣ್ಣನ ಪಾತ್ರ ಅದ್ಭುತವಾಗಿ ಮೂಡಿಬಂದಿದೆ. ಚಿತ್ರಗಳು ತುಂಬಾ ಚೆನ್ನಾಗಿವೆ. ನಮ್ಮ ಸಂಸ್ಕೃತಿ, ಪರಂಪರೆ ಬಿಂಬಿಸುವ ಹಾಡುಗಳನ್ನು ಹಾಗೂ ಚಿತ್ರಗಳನ್ನು ಕಲಾವಿದರು ಹೆಚ್ಚು ಮಾಡಬೇಕು. ವಿಶ್ವಜ್ಯೋತಿ ಬಸವಣ್ಣ ಕವರ್ ಸಾಂಗ್ ಯಶಸ್ವಿಯಾಗಲಿ. ಈ ಚಿತ್ರೀಕರಣ ಮಾಡಿದ ತಂಡಕ್ಕೆ ಜಯ ಸಿಗಲಿ’ ಎಂದು ಶುಭ ಹಾರೈಸಿದರು.

ಅಕ್ಷರ ಪಬ್ಲಿಕ್ ಸ್ಕೂಲ್ ನಿರ್ದೇಶಕ ರವಿಚೇತನ್ ರೆಡ್ಡಿ, ಶಾಲೆಯ ಮುಖ್ಯೋಪಾಧ್ಯಾಯನಿ ಎಸ್.ಹಿಮಾ ರೆಡ್ಡಿ, ಬಸವಣ್ಣ ಪಾತ್ರಧಾರಿ ರಿತ್ವಿಕ್ ರೆಡ್ಡಿ, ಸಾತ್ವಿಕ್ ರೆಡ್ಡಿ, ಎಂ.ಎಸ್.ತ್ರೀಡಿ ಡ್ಯಾನ್ಸ್ ಸ್ಟುಡಿಯೊದ ನೃತ್ಯ ನಿರ್ದೇಶಕರುಗಳಾದ ದೇವರಾಜ್, ಸಂತೋಷ, ಸುಂದರ, ಮೋಜಸ್‍ಫಾಲ್, ಗೌಸ್‌, ಸರ್ಜಿಲ್ ಹಾಗೂ ರಾಘವೇಂದ್ರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT