<p><strong>ಯಲಬುರ್ಗಾ:</strong> ‘ಲಾಕ್ಡೌನ್ನಿಂದ ಬಡಕುಟುಂಬಗಳು ತೊಂದರೆ ಅನುಭವಿಸಿವೆ. ಆರ್ಥಿಕವಾಗಿ ಸಲಬರಾಗಿದವರು ಅವರ ನೆರವಿಗೆ ಬರುತ್ತಿರುವುದು ಉತ್ತಮ ಬೆಳವಣಿಗೆ’ ಎಂದು ಕುದ್ರಿಮೋತಿಯ ಸಂಸ್ಥಾನ ಹಿರೇಮಠದ ಮೈಸೂರು ಮಠದ ವಿಜಯ ಮಹಾಂತ ಸ್ವಾಮೀಜಿ ಹೇಳಿದರು.</p>.<p>ತಾಲ್ಲೂಕಿನ ಮುಧೋಳ ಗ್ರಾಮದಲ್ಲಿ ದಿ. ಶಿವಮ್ಮ ಶಂಕರಗೌಡ ಉಳ್ಳಾಗಡ್ಡಿ ಅವರ ಸ್ಮರಣಾರ್ಥ ಯುವಕ ಆನಂದ ಉಳ್ಳಾಗಡ್ಡ ಆಯೋಜಿಸಿದ್ದ ತಳ್ಳು ಬಂಡಿ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.</p>.<p>ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಜತೆಗೆ ಮಧ್ಯಮ ವರ್ಗದ ಜನತೆಯನ್ನು ಸಹ ಕೋವಿಡ್ ಲಾಕ್ಡೌನ್ ಸಂಕಷ್ಟಕ್ಕೆ ತಳ್ಳಿದೆ. ಈ ಸ್ಥಿತಿಯನ್ನು ಅರಿತು ವಿವಿಧ ರೀತಿಯಲ್ಲಿ ಸಹಾಯ ಮಾಡಿದ್ದು, ಶ್ಲಾಘನೀಯ. ದಾನದ ಪ್ರವೃತ್ತಿ ಮೈಗೂಡಿಸಿಕೊಳ್ಳುವುದು ಸುಲಭವಲ್ಲ. ಅದು ಎಲ್ಲರಲ್ಲೂ ಕಾಣಸಿಗುವುದಿಲ್ಲ. ಮಾನವೀಯ ಗುಣವುಳ್ಳವರಿಗೆ ಮಾತ್ರ ಅದು ಕಂಡುಬರುತ್ತದೆ. ಇಂಥ ಗುಣಗಳಿಗೆ ಉಳ್ಳಾಗಡ್ಡಿ ಮನೆತನದವರು ಸಾಕ್ಷಿ ಎಂದರು.</p>.<p>ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಹಾಗೂ ಕಾಂಗ್ರೆಸ್ ಯುವ ಮುಖಂಡ ಆನಂದ ಉಳ್ಳಾಗಡ್ಡಿ ಮಾತನಾಡಿದರು.</p>.<p>ಗ್ರಾ.ಪಂ. ಸದಸ್ಯರಾದ ಬಸಪ್ಪ ಅಕ್ಕಿ, ಬಾಷಾಸಾಬ ಆರಬರಳ್, ಖಾದರಸಾಬ ಮುಖಂಡರಾದ ಚಂದ್ರಶೇಖರ ದೇಸಾಯಿ, ಛತ್ರಪ್ಪ ಛಲವಾದಿ, ಶಿವಾನಂದ ಬಣಕಾರ, ಕಳಕಪ್ಪ ಕುರಿ ಹಾಗೂ ಉಮೇಶ ಹವಳದ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಯಲಬುರ್ಗಾ:</strong> ‘ಲಾಕ್ಡೌನ್ನಿಂದ ಬಡಕುಟುಂಬಗಳು ತೊಂದರೆ ಅನುಭವಿಸಿವೆ. ಆರ್ಥಿಕವಾಗಿ ಸಲಬರಾಗಿದವರು ಅವರ ನೆರವಿಗೆ ಬರುತ್ತಿರುವುದು ಉತ್ತಮ ಬೆಳವಣಿಗೆ’ ಎಂದು ಕುದ್ರಿಮೋತಿಯ ಸಂಸ್ಥಾನ ಹಿರೇಮಠದ ಮೈಸೂರು ಮಠದ ವಿಜಯ ಮಹಾಂತ ಸ್ವಾಮೀಜಿ ಹೇಳಿದರು.</p>.<p>ತಾಲ್ಲೂಕಿನ ಮುಧೋಳ ಗ್ರಾಮದಲ್ಲಿ ದಿ. ಶಿವಮ್ಮ ಶಂಕರಗೌಡ ಉಳ್ಳಾಗಡ್ಡಿ ಅವರ ಸ್ಮರಣಾರ್ಥ ಯುವಕ ಆನಂದ ಉಳ್ಳಾಗಡ್ಡ ಆಯೋಜಿಸಿದ್ದ ತಳ್ಳು ಬಂಡಿ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.</p>.<p>ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಜತೆಗೆ ಮಧ್ಯಮ ವರ್ಗದ ಜನತೆಯನ್ನು ಸಹ ಕೋವಿಡ್ ಲಾಕ್ಡೌನ್ ಸಂಕಷ್ಟಕ್ಕೆ ತಳ್ಳಿದೆ. ಈ ಸ್ಥಿತಿಯನ್ನು ಅರಿತು ವಿವಿಧ ರೀತಿಯಲ್ಲಿ ಸಹಾಯ ಮಾಡಿದ್ದು, ಶ್ಲಾಘನೀಯ. ದಾನದ ಪ್ರವೃತ್ತಿ ಮೈಗೂಡಿಸಿಕೊಳ್ಳುವುದು ಸುಲಭವಲ್ಲ. ಅದು ಎಲ್ಲರಲ್ಲೂ ಕಾಣಸಿಗುವುದಿಲ್ಲ. ಮಾನವೀಯ ಗುಣವುಳ್ಳವರಿಗೆ ಮಾತ್ರ ಅದು ಕಂಡುಬರುತ್ತದೆ. ಇಂಥ ಗುಣಗಳಿಗೆ ಉಳ್ಳಾಗಡ್ಡಿ ಮನೆತನದವರು ಸಾಕ್ಷಿ ಎಂದರು.</p>.<p>ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಹಾಗೂ ಕಾಂಗ್ರೆಸ್ ಯುವ ಮುಖಂಡ ಆನಂದ ಉಳ್ಳಾಗಡ್ಡಿ ಮಾತನಾಡಿದರು.</p>.<p>ಗ್ರಾ.ಪಂ. ಸದಸ್ಯರಾದ ಬಸಪ್ಪ ಅಕ್ಕಿ, ಬಾಷಾಸಾಬ ಆರಬರಳ್, ಖಾದರಸಾಬ ಮುಖಂಡರಾದ ಚಂದ್ರಶೇಖರ ದೇಸಾಯಿ, ಛತ್ರಪ್ಪ ಛಲವಾದಿ, ಶಿವಾನಂದ ಬಣಕಾರ, ಕಳಕಪ್ಪ ಕುರಿ ಹಾಗೂ ಉಮೇಶ ಹವಳದ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>