‘ಜಿಲ್ಲಾಡಳಿತ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಸಮುದಾಯ ಆರೋಗ್ಯ ಕೇಂದ್ರದ ಕಾರ್ಯಾರಂಭಕ್ಕೆ ಗಮನಹರಿಸಿ ಶೀಘ್ರದಲ್ಲಿ ಮೂಲ ಸೌಕರ್ಯಗಳನ್ನು ಕಲ್ಪಿಸುವ ಜೊತೆಗೆ ಸಮುದಾಯ ಆರೋಗ್ಯ ಅಧಿಕಾರಿ ಹಾಗೂ ಇನ್ನಿತರ ಸಿಬ್ಬಂದಿಯನ್ನು ಒದಗಿಸಿಕೊಡಬೇಕು’ ಎಂದು ಪ್ರಮುಖರಾದ ರಾಹುಲ್ ದೇವಸಿಂಗ್, ಶ್ರೀಕಾಂತ ಕಂದಗಲ್, ಮುತ್ತಣ್ಣ ಕಟಗಿ, ಗುರುಸಂಗಪ್ಪ ಮೋಟಗಿ, ಉಮೇಶ ಬಚಲಾಪುರ, ಮಂಜುನಾಥ ಶಿರೋಳ ಮನವಿ ಮಾಡಿದ್ದಾರೆ.