<p><strong>ಹುಲಿಗಿ (ಮುನಿರಾಬಾದ್): </strong>ಮುನಿರಾಬಾದ್ ರೈಲು ನಿಲ್ದಾಣದ ಆವರಣ ಪ್ರವೇಶಿದ ತಕ್ಷಣ ಗಿಡ, ಮರಗಳು ಸ್ವಾಗತಿಸುತ್ತವೆ. ಇದಕ್ಕೆ ಕಾರಣ ಇಲಾಖೆಯ ಸಿಬ್ಬಂದಿ ಚುನ್ನಿಲಾಲ್.</p>.<p>ಇಲ್ಲಿನ ನಿಲ್ದಾಣದಲ್ಲಿ ಕಮರ್ಷಿಯಲ್ ಅಸಿಸ್ಟೆಂಟ್ ಆಗಿ ಕಾರ್ಯನಿರ್ವಹಿಸಿದ ಚುನ್ನಿಲಾಲ್ ಮೂಲತಃ ರಾಜಸ್ಥಾನದ ಪಾಲಿ ಜಿಲ್ಲೆಯ ಕನೆಲಾವ್ ಗ್ರಾಮದವರು.</p>.<p>ಸುಮಾರು ಎಂಟು ವರ್ಷ ಇಲ್ಲಿನ ನಿಲ್ದಾಣದಲ್ಲಿ ಕಾರ್ಯನಿರ್ವಹಿಸಿದ ಇವರಿಗೆ ಪರಿಸರ ಮತ್ತು ಯೋಧರ ಮೇಲೆ ಅಪಾರ ಅಭಿಮಾನ.</p>.<p>ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಯೋಧರ ಸ್ಮರಣಾರ್ಥ ಅವರು ಸುಮಾರು 42 ಗಿಡಗಳನ್ನು ನೆಟ್ಟಿದ್ದಾರೆ.</p>.<p>ಹುಟ್ಟುಹಬ್ಬದ ಸಂದರ್ಭದಲ್ಲಿ ಕೇಕ್ ಕತ್ತರಿಸುವ ಸಂಪ್ರದಾಯ ವಿರೋಧಿಸುವ ಚುನ್ನಿಲಾಲ್, ತಮ್ಮ ಇಬ್ಬರು ಹೆಣ್ಣು ಮಕ್ಕಳ ಹುಟ್ಟುಹಬ್ಬದ ಪ್ರಯುಕ್ತ ನಿಲ್ದಾಣದ ಎರಡೂ ಪ್ಲಾಟ್ಫಾರ್ಮ್ ಪಕ್ಕದಲ್ಲಿ ಸಸಿ ನೆಟ್ಟು ಪೋಷಿಸುತ್ತಿದ್ದಾರೆ.</p>.<p>‘ಪರಿಸರ ದಿನದ ಸಂದರ್ಭದಲ್ಲಿ ಸಸಿ ನೆಟ್ಟು ಮರೆತು ಬಿಡುವುದಲ್ಲ. ಅವುಗಳ ಪೋಷಣೆ ಮಾಡುತ್ತಿರುವ ಸಿಬ್ಬಂದಿ ಕಾರ್ಯ ಶ್ಲಾಘನೀಯ’ ಎಂದು ಉಪನ್ಯಾಸಕ ಬಸವರಾಜ ಮೇಟಿ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ.</p>.<p>ಬಿಡುವಿನ ವೇಳೆಯಲ್ಲಿ ಮಕ್ಕಳ ಜತೆ ಗಿಡಗಳಿಗೆ ನೀರುಣಿಸುವ ಚುನ್ನಿಲಾಲ್ ಸುಮಾರು ₹40-50 ಸಾವಿರ ಖರ್ಚು ಮಾಡಿದ್ದಾರೆ. ಗಿಡಗಳ ಆರೈಕೆಗೆ ವ್ಯಕ್ತಿಯೊಬ್ಬರನ್ನು ನೇಮಿಸಿ ಪ್ರತಿ ತಿಂಗಳು ಅವರಿಗೆ ಸಂಬಳ ಕೂಡ ನೀಡುತ್ತಿದ್ದಾರೆ. ಸುಮಾರು 8 ವರ್ಷಗಳಿಂದ ಗಿಡ-ಮರಗಳ ಸೇವೆ ಮಾಡುತ್ತಿರುವ ಅವರು, ನೆರಳು ನೀಡುತ್ತಿರುವ ಮರಗಳನ್ನು ಕಂಡು ಸಂತಸವಾಗುತ್ತದೆ ಎಂದು ಸಂಭ್ರಮ ಹಂಚಿಕೊಂಡರು.</p>.<p>ಯೋಧರ ಸ್ಮರಣಾರ್ಥ 42, ಮಕ್ಕಳ ಜನ್ಮದಿನದ ಸವಿನೆನಪಿಗಾಗಿ 66 ಸೇರಿ ಒಟ್ಟು 88 ಗಿಡಗಳು ರೈಲು ನಿಲ್ದಾಣ ಮತ್ತು ಅದರ ಮುಂಭಾಗದಲ್ಲಿ ಬೆಳೆದು ನಿಂತಿರುವುದೇ ಚುನ್ನಿಲಾಲ್ ಅವರ ಪರಿಸರ ಪ್ರಜ್ಞೆಗೆ ಸಾಕ್ಷಿಯಾಗಿದೆ.</p>.<p>ಇಲಾಖೆಗೆ ಸೇರಿದ ಮೊದಲು 8 ವರ್ಷ ಮುನಿರಾಬಾದ್ನಲ್ಲಿ ಸೇವೆ ಸಲ್ಲಿಸಿದ ಅವರು, ಕಳೆದ ಒಂದು ವರ್ಷದಿಂದ ಬಳ್ಳಾರಿ ಜಿಲ್ಲೆಯ ತೋರಣಗಲ್ ನಿಲ್ದಾಣದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಮರಗಳ ಆರೈಕೆ ಮಾತ್ರ ನಿರಂತರವಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಲಿಗಿ (ಮುನಿರಾಬಾದ್): </strong>ಮುನಿರಾಬಾದ್ ರೈಲು ನಿಲ್ದಾಣದ ಆವರಣ ಪ್ರವೇಶಿದ ತಕ್ಷಣ ಗಿಡ, ಮರಗಳು ಸ್ವಾಗತಿಸುತ್ತವೆ. ಇದಕ್ಕೆ ಕಾರಣ ಇಲಾಖೆಯ ಸಿಬ್ಬಂದಿ ಚುನ್ನಿಲಾಲ್.</p>.<p>ಇಲ್ಲಿನ ನಿಲ್ದಾಣದಲ್ಲಿ ಕಮರ್ಷಿಯಲ್ ಅಸಿಸ್ಟೆಂಟ್ ಆಗಿ ಕಾರ್ಯನಿರ್ವಹಿಸಿದ ಚುನ್ನಿಲಾಲ್ ಮೂಲತಃ ರಾಜಸ್ಥಾನದ ಪಾಲಿ ಜಿಲ್ಲೆಯ ಕನೆಲಾವ್ ಗ್ರಾಮದವರು.</p>.<p>ಸುಮಾರು ಎಂಟು ವರ್ಷ ಇಲ್ಲಿನ ನಿಲ್ದಾಣದಲ್ಲಿ ಕಾರ್ಯನಿರ್ವಹಿಸಿದ ಇವರಿಗೆ ಪರಿಸರ ಮತ್ತು ಯೋಧರ ಮೇಲೆ ಅಪಾರ ಅಭಿಮಾನ.</p>.<p>ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಯೋಧರ ಸ್ಮರಣಾರ್ಥ ಅವರು ಸುಮಾರು 42 ಗಿಡಗಳನ್ನು ನೆಟ್ಟಿದ್ದಾರೆ.</p>.<p>ಹುಟ್ಟುಹಬ್ಬದ ಸಂದರ್ಭದಲ್ಲಿ ಕೇಕ್ ಕತ್ತರಿಸುವ ಸಂಪ್ರದಾಯ ವಿರೋಧಿಸುವ ಚುನ್ನಿಲಾಲ್, ತಮ್ಮ ಇಬ್ಬರು ಹೆಣ್ಣು ಮಕ್ಕಳ ಹುಟ್ಟುಹಬ್ಬದ ಪ್ರಯುಕ್ತ ನಿಲ್ದಾಣದ ಎರಡೂ ಪ್ಲಾಟ್ಫಾರ್ಮ್ ಪಕ್ಕದಲ್ಲಿ ಸಸಿ ನೆಟ್ಟು ಪೋಷಿಸುತ್ತಿದ್ದಾರೆ.</p>.<p>‘ಪರಿಸರ ದಿನದ ಸಂದರ್ಭದಲ್ಲಿ ಸಸಿ ನೆಟ್ಟು ಮರೆತು ಬಿಡುವುದಲ್ಲ. ಅವುಗಳ ಪೋಷಣೆ ಮಾಡುತ್ತಿರುವ ಸಿಬ್ಬಂದಿ ಕಾರ್ಯ ಶ್ಲಾಘನೀಯ’ ಎಂದು ಉಪನ್ಯಾಸಕ ಬಸವರಾಜ ಮೇಟಿ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ.</p>.<p>ಬಿಡುವಿನ ವೇಳೆಯಲ್ಲಿ ಮಕ್ಕಳ ಜತೆ ಗಿಡಗಳಿಗೆ ನೀರುಣಿಸುವ ಚುನ್ನಿಲಾಲ್ ಸುಮಾರು ₹40-50 ಸಾವಿರ ಖರ್ಚು ಮಾಡಿದ್ದಾರೆ. ಗಿಡಗಳ ಆರೈಕೆಗೆ ವ್ಯಕ್ತಿಯೊಬ್ಬರನ್ನು ನೇಮಿಸಿ ಪ್ರತಿ ತಿಂಗಳು ಅವರಿಗೆ ಸಂಬಳ ಕೂಡ ನೀಡುತ್ತಿದ್ದಾರೆ. ಸುಮಾರು 8 ವರ್ಷಗಳಿಂದ ಗಿಡ-ಮರಗಳ ಸೇವೆ ಮಾಡುತ್ತಿರುವ ಅವರು, ನೆರಳು ನೀಡುತ್ತಿರುವ ಮರಗಳನ್ನು ಕಂಡು ಸಂತಸವಾಗುತ್ತದೆ ಎಂದು ಸಂಭ್ರಮ ಹಂಚಿಕೊಂಡರು.</p>.<p>ಯೋಧರ ಸ್ಮರಣಾರ್ಥ 42, ಮಕ್ಕಳ ಜನ್ಮದಿನದ ಸವಿನೆನಪಿಗಾಗಿ 66 ಸೇರಿ ಒಟ್ಟು 88 ಗಿಡಗಳು ರೈಲು ನಿಲ್ದಾಣ ಮತ್ತು ಅದರ ಮುಂಭಾಗದಲ್ಲಿ ಬೆಳೆದು ನಿಂತಿರುವುದೇ ಚುನ್ನಿಲಾಲ್ ಅವರ ಪರಿಸರ ಪ್ರಜ್ಞೆಗೆ ಸಾಕ್ಷಿಯಾಗಿದೆ.</p>.<p>ಇಲಾಖೆಗೆ ಸೇರಿದ ಮೊದಲು 8 ವರ್ಷ ಮುನಿರಾಬಾದ್ನಲ್ಲಿ ಸೇವೆ ಸಲ್ಲಿಸಿದ ಅವರು, ಕಳೆದ ಒಂದು ವರ್ಷದಿಂದ ಬಳ್ಳಾರಿ ಜಿಲ್ಲೆಯ ತೋರಣಗಲ್ ನಿಲ್ದಾಣದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಮರಗಳ ಆರೈಕೆ ಮಾತ್ರ ನಿರಂತರವಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>