<p><strong>ಅಳವಂಡಿ:</strong> ಕೊಪ್ಪಳದ ಗವಿಸಿದ್ದೇಶ್ವರ ಜಾತ್ರೆ ಮುಗಿದರೂ ಭಕ್ತರ ಭೇಟಿ ಇನ್ನೂ ಕಡಿಮೆಯಾಗಿಲ್ಲ. ಹೀಗಾಗಿ ದಾಸೋಹಕ್ಕೆ ವಿವಿಧ ಗ್ರಾಮಗಳ ರೈತರು ನಾನಾ ರೀತಿಯ ಖಾದ್ಯಗಳನ್ನು ದೇಣಿಗೆ ಸಲ್ಲಿಸುತ್ತಿದ್ದಾರೆ. </p>.<p>ಕೊಪ್ಪಳ ತಾಲ್ಲೂಕಿನ ಘಟ್ಟಿರಡ್ಡಿಹಾಳ ಗ್ರಾಮಸ್ಥರು ಸುಮಾರು ಎರಡೂವರೆ ಕ್ವಿಂಟಾಲ್ ಜಿಲೇಬಿ, 10 ಸಾವಿರ ರೊಟ್ಟಿ ಹಾಗೂ 10 ಟ್ರ್ಯಾಕ್ಟರ್ ಕಟ್ಟಿಗೆಯನ್ನು ಶುಕ್ರವಾರ ಗವಿಮಠಕ್ಕೆ ಸಮರ್ಪಿಸಿದ್ದಾರೆ.</p>.<p>‘ಪ್ರತಿವರ್ಷ ನಮ್ಮ ಗ್ರಾಮದಿಂದ ಗವಿಸಿದ್ದೇಶ್ವರ ಜಾತ್ರೆಗೆ ರೊಟ್ಟಿ, ನಾನಾ ಖಾದ್ಯ, ದವಸ ಧಾನ್ಯ, ಕಟ್ಟಿಗೆ ಕಳುಹಿಸುವುದು ಸಂಪ್ರದಾಯ. ಹಾಗಾಗಿ ಈ ವರ್ಷ ಜಾತ್ರೆಗೆ ಆಗಮಿಸುವ ಭಕ್ತರಿಗೆ ಜಿಲೇಬಿ, ರೊಟ್ಟಿ ಜತೆ ಅಡುಗೆ ತಯಾರಿಸಲು ಕಟ್ಟಿಗೆಯನ್ನೂ ಕಳಿಸಿದ್ದೇವೆ’ ಎಂದು ಗ್ರಾಮಸ್ಥರು ತಿಳಿಸಿರು.</p>.<p><strong>ಮೈನಹಳ್ಳಿ ವರದಿ:</strong> ಅಳವಂಡಿ ಸಮೀಪದ ಮೈನಹಳ್ಳಿ ಗ್ರಾಮಸ್ಥರು ಈ ವರ್ಷವೂ ಗವಿಸಿದ್ದೇಶ್ವರ ಮಠಕ್ಕೆ ಶೇಂಗಾ ಹೋಳಿಗೆ, ರೊಟ್ಟಿ ನೀಡಿದ್ದಾರೆ.</p>.<p>ಮೈನಹಳ್ಳಿ ಗ್ರಾಮದ ಭಕ್ತರು ಒಗ್ಗೂಡಿ ಸುಮಾರು 4 ಕ್ವಿಂಟಾಲ್ ಶೇಂಗಾ ಹೋಳಿಗೆ, ಎಂಟು ಸಾವಿರಕ್ಕೂ ಹೆಚ್ಚು ರೊಟ್ಟಿ ಹಾಗೂ ದವಸ ಧಾನ್ಯ ಮಠಕ್ಕೆ ಹಸ್ತಾಂತರಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಅಳವಂಡಿ:</strong> ಕೊಪ್ಪಳದ ಗವಿಸಿದ್ದೇಶ್ವರ ಜಾತ್ರೆ ಮುಗಿದರೂ ಭಕ್ತರ ಭೇಟಿ ಇನ್ನೂ ಕಡಿಮೆಯಾಗಿಲ್ಲ. ಹೀಗಾಗಿ ದಾಸೋಹಕ್ಕೆ ವಿವಿಧ ಗ್ರಾಮಗಳ ರೈತರು ನಾನಾ ರೀತಿಯ ಖಾದ್ಯಗಳನ್ನು ದೇಣಿಗೆ ಸಲ್ಲಿಸುತ್ತಿದ್ದಾರೆ. </p>.<p>ಕೊಪ್ಪಳ ತಾಲ್ಲೂಕಿನ ಘಟ್ಟಿರಡ್ಡಿಹಾಳ ಗ್ರಾಮಸ್ಥರು ಸುಮಾರು ಎರಡೂವರೆ ಕ್ವಿಂಟಾಲ್ ಜಿಲೇಬಿ, 10 ಸಾವಿರ ರೊಟ್ಟಿ ಹಾಗೂ 10 ಟ್ರ್ಯಾಕ್ಟರ್ ಕಟ್ಟಿಗೆಯನ್ನು ಶುಕ್ರವಾರ ಗವಿಮಠಕ್ಕೆ ಸಮರ್ಪಿಸಿದ್ದಾರೆ.</p>.<p>‘ಪ್ರತಿವರ್ಷ ನಮ್ಮ ಗ್ರಾಮದಿಂದ ಗವಿಸಿದ್ದೇಶ್ವರ ಜಾತ್ರೆಗೆ ರೊಟ್ಟಿ, ನಾನಾ ಖಾದ್ಯ, ದವಸ ಧಾನ್ಯ, ಕಟ್ಟಿಗೆ ಕಳುಹಿಸುವುದು ಸಂಪ್ರದಾಯ. ಹಾಗಾಗಿ ಈ ವರ್ಷ ಜಾತ್ರೆಗೆ ಆಗಮಿಸುವ ಭಕ್ತರಿಗೆ ಜಿಲೇಬಿ, ರೊಟ್ಟಿ ಜತೆ ಅಡುಗೆ ತಯಾರಿಸಲು ಕಟ್ಟಿಗೆಯನ್ನೂ ಕಳಿಸಿದ್ದೇವೆ’ ಎಂದು ಗ್ರಾಮಸ್ಥರು ತಿಳಿಸಿರು.</p>.<p><strong>ಮೈನಹಳ್ಳಿ ವರದಿ:</strong> ಅಳವಂಡಿ ಸಮೀಪದ ಮೈನಹಳ್ಳಿ ಗ್ರಾಮಸ್ಥರು ಈ ವರ್ಷವೂ ಗವಿಸಿದ್ದೇಶ್ವರ ಮಠಕ್ಕೆ ಶೇಂಗಾ ಹೋಳಿಗೆ, ರೊಟ್ಟಿ ನೀಡಿದ್ದಾರೆ.</p>.<p>ಮೈನಹಳ್ಳಿ ಗ್ರಾಮದ ಭಕ್ತರು ಒಗ್ಗೂಡಿ ಸುಮಾರು 4 ಕ್ವಿಂಟಾಲ್ ಶೇಂಗಾ ಹೋಳಿಗೆ, ಎಂಟು ಸಾವಿರಕ್ಕೂ ಹೆಚ್ಚು ರೊಟ್ಟಿ ಹಾಗೂ ದವಸ ಧಾನ್ಯ ಮಠಕ್ಕೆ ಹಸ್ತಾಂತರಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>