<p><strong>ಹನುಮಸಾಗರ:</strong> ಕುಷ್ಟಗಿ ರಸ್ತೆಯಲ್ಲಿರುವ ಸರ್ವೆ ನಂ. 41/1ರ ಜಮೀನಿನಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ ಪ್ರಸ್ತಾವಕ್ಕೆ ಸ್ಥಳೀಯ ರೈತರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಕುರಿತು ಗ್ರಾ.ಪಂಗೆ ಮನವಿ ಸಲ್ಲಿಸಿ, ಹಾನಿಯಾಗದಂತೆ ಬೇರೊಂದು ಸೂಕ್ತ ಸ್ಥಳದಲ್ಲಿ ಘಟಕ ನಿರ್ಮಿಸಬೇಕು ಎಂದು ಆಗ್ರಹಿಸಿದರು.</p>.<p>ಜ್ಞಾನೋದಯ ಶಿಕ್ಷಣ ಸಂಸ್ಥೆಯ ವಿಷ್ಣು ರಜಪೂತ ಮಾತನಾಡಿ, ‘ಜಾಗದ ಪಕ್ಕದಲ್ಲೇ ಬಸವರಾಜ ಮಾಳಗಿಮಣಿ ಅವರ ಜಮೀನಿನ ಸಮೀಪದಲ್ಲಿ ಸರ್ಕಾರದ 16 ಗುಂಟೆ ಗಾಂವಠಾಣಾ ಜಾಗವಿದ್ದು, ಅದನ್ನೇ ಬಳಸಿ ಘಟಕ ನಿರ್ಮಾಣಕ್ಕೆ ಅನುವು ಮಾಡಬೇಕು’ ಎಂದು ತಿಳಿಸಿದರು.</p>.<p>ಸದ್ಯ ಈ ಪ್ರದೇಶದ ಸುತ್ತಮುತ್ತ 200 ಮೀಟರ್ ಒಳಗೆ ಪ್ರವಾಸಿ ಮಂದಿರ, ಪದವಿ ಕಾಲೇಜು, ಖಾಸಗಿ ಶಾಲೆ, ವಸತಿ ನಿರ್ಮಾಣಗಳು ಹಾಗೂ ಕೃಷಿ ಭೂಮಿ ಇವೆ. ಘಟಕ ನಿರ್ಮಾಣದಿಂದ ವಿದ್ಯಾರ್ಥಿಗಳು, ರೈತರು ಮತ್ತು ಸಾರ್ವಜನಿಕರಿಗೆ ಆರೋಗ್ಯದ ತೊಂದರೆ ಉಂಟಾಗುವ ಭೀತಿಯಿದೆ ಎಂದು ಕಳವಳ ವ್ಯಕ್ತಪಡಿಸಿದರು.</p>.<p>ಘಟನೆ ಸ್ಥಳಕ್ಕೆ ಹಾಜರಿದ್ದ ಗ್ರಾ.ಪಂ ಕಾರ್ಯದರ್ಶಿ ಅಮರೇಶ ಕರಡಿ, ಮನವಿ ಪರಿಶೀಲಿಸಿ, ಮುಂದಿನ ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.</p>.<p>ದಾಮೋದರ ಹಯಗ್ರೀವ, ಹುಲಗಪ್ಪ, ಯಮನೂರ ಹುಲ್ಲೂರ, ಎ.ಕೆ. ಡಾಲಾಯತ್ ಮತ್ತಿತರರು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹನುಮಸಾಗರ:</strong> ಕುಷ್ಟಗಿ ರಸ್ತೆಯಲ್ಲಿರುವ ಸರ್ವೆ ನಂ. 41/1ರ ಜಮೀನಿನಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ ಪ್ರಸ್ತಾವಕ್ಕೆ ಸ್ಥಳೀಯ ರೈತರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಕುರಿತು ಗ್ರಾ.ಪಂಗೆ ಮನವಿ ಸಲ್ಲಿಸಿ, ಹಾನಿಯಾಗದಂತೆ ಬೇರೊಂದು ಸೂಕ್ತ ಸ್ಥಳದಲ್ಲಿ ಘಟಕ ನಿರ್ಮಿಸಬೇಕು ಎಂದು ಆಗ್ರಹಿಸಿದರು.</p>.<p>ಜ್ಞಾನೋದಯ ಶಿಕ್ಷಣ ಸಂಸ್ಥೆಯ ವಿಷ್ಣು ರಜಪೂತ ಮಾತನಾಡಿ, ‘ಜಾಗದ ಪಕ್ಕದಲ್ಲೇ ಬಸವರಾಜ ಮಾಳಗಿಮಣಿ ಅವರ ಜಮೀನಿನ ಸಮೀಪದಲ್ಲಿ ಸರ್ಕಾರದ 16 ಗುಂಟೆ ಗಾಂವಠಾಣಾ ಜಾಗವಿದ್ದು, ಅದನ್ನೇ ಬಳಸಿ ಘಟಕ ನಿರ್ಮಾಣಕ್ಕೆ ಅನುವು ಮಾಡಬೇಕು’ ಎಂದು ತಿಳಿಸಿದರು.</p>.<p>ಸದ್ಯ ಈ ಪ್ರದೇಶದ ಸುತ್ತಮುತ್ತ 200 ಮೀಟರ್ ಒಳಗೆ ಪ್ರವಾಸಿ ಮಂದಿರ, ಪದವಿ ಕಾಲೇಜು, ಖಾಸಗಿ ಶಾಲೆ, ವಸತಿ ನಿರ್ಮಾಣಗಳು ಹಾಗೂ ಕೃಷಿ ಭೂಮಿ ಇವೆ. ಘಟಕ ನಿರ್ಮಾಣದಿಂದ ವಿದ್ಯಾರ್ಥಿಗಳು, ರೈತರು ಮತ್ತು ಸಾರ್ವಜನಿಕರಿಗೆ ಆರೋಗ್ಯದ ತೊಂದರೆ ಉಂಟಾಗುವ ಭೀತಿಯಿದೆ ಎಂದು ಕಳವಳ ವ್ಯಕ್ತಪಡಿಸಿದರು.</p>.<p>ಘಟನೆ ಸ್ಥಳಕ್ಕೆ ಹಾಜರಿದ್ದ ಗ್ರಾ.ಪಂ ಕಾರ್ಯದರ್ಶಿ ಅಮರೇಶ ಕರಡಿ, ಮನವಿ ಪರಿಶೀಲಿಸಿ, ಮುಂದಿನ ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.</p>.<p>ದಾಮೋದರ ಹಯಗ್ರೀವ, ಹುಲಗಪ್ಪ, ಯಮನೂರ ಹುಲ್ಲೂರ, ಎ.ಕೆ. ಡಾಲಾಯತ್ ಮತ್ತಿತರರು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>