ಕೊಪ್ಪಳ: ಇಲ್ಲಿನ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾದ ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಕಾನೂನು ಮಹಾವಿದ್ಯಾಲಯದಲ್ಲಿ ಇತ್ತೀಚೆಗೆ ಹಿಂದಿ ದಿವಸ ಆಚರಿಸಲಾಯಿತು.
ಪ್ರಾಚಾರ್ಯ ಪ್ರೊ. ಬಿ.ಎಸ್. ಹನಸಿ ಮಾತನಾಡಿ ‘ಮಹಾತ್ಮ ಗಾಂಧೀಜಿ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾವನ್ನು ಏಕ್ ರಾಷ್ಟ್ರಭಾಷ ಹಿಂದಿ ಹೋ ಏಕ್ ಹೃದಯ್ ಹೋ ಭಾರತ್ ಜನನಿ ಎಂಬ ಧ್ಯೇಯೋದ್ದೇಶದೊಂದಿಗೆ ಚೆನೈನಲ್ಲಿ ಸ್ಥಾಪಿಸಿದರು. ಈ ಸಂಸ್ಥೆಯ ಸ್ಥಾಪನೆಯ ಮೂಲ ಉದ್ದೇಶ ಭಾಷೆಯಿಂದ ದೇಶವನ್ನು ಒಗ್ಗೂಡಿಸುವುದಾಗಿದೆ’ ಎಂದರು.
ಮಹಾವಿದ್ಯಾಲಯದ ಉಪನ್ಯಾಸಕರಾದ ಉಷಾದೇವಿ ಹಿರೇಮಠ, ಸ್ಮಿತಾ ಅಂಗಡಿ, ಶಿಲ್ಪಾ ಬಿರಾದಾರ್, ರಜಿಯಾಬೇಗಂ ಹಾಗೂ ಶೇಷಾದ್ರಿ ಅವರು ಹಿಂದಿ ದಿವಸ ಮಹತ್ವದ ಬಗ್ಗೆ ಮಾತನಾಡಿದರು. ವಿದ್ಯಾರ್ಥಿ ಪ್ರದೀಪ್ ಕುಮಾರ್, ಬಸವರಾಜ್ ಅಳ್ಳಳ್ಳಿ, ಬಸವರಾ ಎಸ್.ಎಂ., ರವಿ ಬಡಿಗೇರ ಹಾಗೂ ಸಿಬ್ಬಂದಿ ಇದ್ದರು.