<p><strong>ಹೇಮಗುಡ್ಡ (ಕೊಪ್ಪಳ ಜಿಲ್ಲೆ):</strong> ‘ಸಿಗಂದೂರು ಚೌಡೇಶ್ವರಿ ದೇವಸ್ಥಾನವನ್ನು ಸರ್ಕಾರ ವಶಪಡಿಸಿಕೊಳ್ಳಲು ಮುಂದಾದರೆ ತಕ್ಕ ಪಾಠ ಕಲಿಸಲಾಗುವುದು’ ಎಂದು ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷಮಾಲೀಕಯ್ಯ ಗುತ್ತೇದಾರ ಎಚ್ಚರಿಕೆ ನೀಡಿದರು.</p>.<p>ಗಂಗಾವತಿ ತಾಲ್ಲೂಕಿನ ಹೇಮ ಗುಡ್ಡದ ದುರ್ಗಾದೇವಿ ದೇವಾಲಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಉತ್ತರ ಹಾಗೂ ಕಲ್ಯಾಣ ಕರ್ನಾಟಕ ಆರ್ಯ ಈಡಿಗರ ಸಮಾವೇಶದ ಚಿಂತನ-ಮಂಥನ ಸಮಾವೇಶದಲ್ಲಿ ಅವರು ಮಾತನಾಡಿದರು.</p>.<p>‘ಕಲ್ಯಾಣ ಕರ್ನಾಟಕ ಭಾಗದಲ್ಲಿ ಆರ್ಯ ಈಡಿಗರ ಶಕ್ತಿ ಏನೆಂದು ಈಗಾಗಲೇ ತೋರಿಸಿದ್ದೇವೆ. ನಮ್ಮನ್ನು ಬಳಸಿಕೊಂಡು ನಿರ್ಲಕ್ಷ್ಯ ಮಾಡುವುದು ಒಳ್ಳೆಯದಲ್ಲ. ಹೆಂಡ ಮಾರಾಟದ ಮೂಲಕ ಬದುಕು ಕಟ್ಟಿಕೊಂಡಿದ್ದ ಸಮಾಜದ ಜನರು ಇಂದು ಹಮಾಲಿ ಮಾಡುವ ಸ್ಥಿತಿ ತಲುಪಿದ್ದಾರೆ’ ಎಂದರು.</p>.<p>ಮಾಜಿ ಶಾಸಕ ಮಧು ಬಂಗಾರಪ್ಪ ಮಾತನಾಡಿ, ‘ರಾಜಕೀಯ ಪ್ರಾತಿನಿಧ್ಯ, ಸಮಾಜದ ಶಕ್ತಿ ಪ್ರದರ್ಶನಕ್ಕೆ ನಾವೆಲ್ಲ ಸಜ್ಜಾ ಗೋಣ. ಬಿಲ್ಲವ, ಪೂಜಾರಿ, ಈಳವ, ಈಡಿಗ ಎಂಬ 26 ಒಳಪಂಗಡ ಮರೆತು ನಮ್ಮ ಅಸ್ತಿತ್ವ ತೋರಿಸಬೇಕು’ ಎಂದರು.</p>.<p>ರಾಜ್ಯ ಆರ್ಯ ಈಡಿಗ ಸಂಘದ ಅಧ್ಯಕ್ಷ ತಿಮ್ಮೇಗೌಡ ಮಾತನಾಡಿದರು.</p>.<p>ಅಭಿವೃದ್ಧಿ ನಿಗಮ, ಕೂಡಲಸಂಗಮದಲ್ಲಿ ಆರ್ಯಈಡಿಗ ಪೀಠ ಸ್ಥಾಪನೆಗೆ ಸ್ಥಳ, ಮುನಿರಾಬಾದ್ನಲ್ಲಿ ನಾರಾಯಣ ಗುರು ಶಿಕ್ಷಣ ಪೀಠ ಸ್ಥಾಪನೆಗೆ 70 ಎಕರೆ ಭೂಮಿ, ಅಧಿಕೃತ ಮದ್ಯ ಮಾರಾಟದಲ್ಲಿ ಸಮಾಜದವರಿಗೆ ಅವಕಾಶ, ಹೋರಾಟ ಸಮಿತಿ ರಚನೆ ಸೇರಿ 14 ನಿರ್ಣಯಗಳನ್ನು ಅಂಗೀಕರಿಸಲಾಯಿತು.</p>.<p>ಪ್ರಣವಾನಂದ ಶ್ರೀ, ಬ್ರಹ್ಮಾನಂದ ಸ್ವಾಮೀಜಿ, ವಿಖ್ಯಾತನಂದ, ಸತ್ಯಾನಂದ ಸ್ವಾಮೀಜಿ, ಪ್ರಮುಖರಾದ ಎಚ್.ಆರ್.ಶ್ರೀನಾಥ, ಎಚ್.ಆರ್.ಗವಿಯಪ್ಪ, ಸತ್ಯಜಿತ್ ಸುರತ್ಕಲ್, ರಾಜಶೇಖರ ಕೋಟ್ಯಾನ್, ಭರತ್.ಎಸ್.ಎಸ್, ಹರಿಬಾಬು ಇದ್ದರು.</p>.<p><strong>ಸಚಿವ ಗೈರು: ಬೇಳೂರು ವ್ಯಂಗ್ಯ</strong></p>.<p>‘ಹಿಂದುತ್ವ, ಪಕ್ಷ ನಿಷ್ಠೆ ಎನ್ನುವ ಮುಜರಾಯಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರಿಗೆ ಜಾತಿ ‘ಕೋಟಾ’ದಡಿ ಸಚಿವ ಸ್ಥಾನ ನೀಡಲಾಗಿದೆ. ಆದರೆ, ಯಾರದೋ ಮೇಲಿನ ಭಯದಿಂದ ಅವರು ಸಮಾವೇಶಕ್ಕೆ ಗೈರಾಗಿದ್ದಾರೆ’ ಎಂದು ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ವ್ಯಂಗ್ಯವಾಡಿದರು</p>.<p>‘ಸಮಾಜದ ಋಣ ಇರುವ ಸಚಿವರೇ ಮುಜರಾಯಿ ಇಲಾಖೆ ನಿಭಾಯಿಸು ತ್ತಿದ್ದಾರೆ. ಆದರೆ, ಸಮಾಜದವರಿಗೆ ಸೇರಿದ ಸಿಗಂದೂರು ಚೌಡೇಶ್ವರಿ ದೇವ ಸ್ಥಾನ ಉಳಿಸಿಕೊಳ್ಳಲು ಪ್ರಯತ್ನ ಮಾಡು ತ್ತಿಲ್ಲ. ಅವರು ಸಮಾಜದ ಹಿತ ಹೇಗೆ ಕಾಯುತ್ತಾರೆ’ ಎಂದು ಪ್ರಶ್ನಿಸಿದರು.</p>.<p>***</p>.<p>ಬಂಗಾರಪ್ಪ ಅವರ ನಂತರ ಸಮಾಜವನ್ನು ನಿರಂತರವಾಗಿ ಕಡೆಗಣಿಸಲಾಗುತ್ತಿದೆ. ಹೋರಾಟದ ಮೂಲಕ ನಮ್ಮ ಶಕ್ತಿ ಪ್ರದರ್ಶನ ಮಾಡಿ ವಿಧಾನಸೌಧ ನಡುಗುವಂತೆ ಮಾಡಬೇಕು</p>.<p><strong>- ಮಾಲೀಕಯ್ಯ ಗುತ್ತೇದಾರ, ಬಿಜೆಪಿ ರಾಜ್ಯ ಉಪಾಧ್ಯಕ್ಷ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೇಮಗುಡ್ಡ (ಕೊಪ್ಪಳ ಜಿಲ್ಲೆ):</strong> ‘ಸಿಗಂದೂರು ಚೌಡೇಶ್ವರಿ ದೇವಸ್ಥಾನವನ್ನು ಸರ್ಕಾರ ವಶಪಡಿಸಿಕೊಳ್ಳಲು ಮುಂದಾದರೆ ತಕ್ಕ ಪಾಠ ಕಲಿಸಲಾಗುವುದು’ ಎಂದು ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷಮಾಲೀಕಯ್ಯ ಗುತ್ತೇದಾರ ಎಚ್ಚರಿಕೆ ನೀಡಿದರು.</p>.<p>ಗಂಗಾವತಿ ತಾಲ್ಲೂಕಿನ ಹೇಮ ಗುಡ್ಡದ ದುರ್ಗಾದೇವಿ ದೇವಾಲಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಉತ್ತರ ಹಾಗೂ ಕಲ್ಯಾಣ ಕರ್ನಾಟಕ ಆರ್ಯ ಈಡಿಗರ ಸಮಾವೇಶದ ಚಿಂತನ-ಮಂಥನ ಸಮಾವೇಶದಲ್ಲಿ ಅವರು ಮಾತನಾಡಿದರು.</p>.<p>‘ಕಲ್ಯಾಣ ಕರ್ನಾಟಕ ಭಾಗದಲ್ಲಿ ಆರ್ಯ ಈಡಿಗರ ಶಕ್ತಿ ಏನೆಂದು ಈಗಾಗಲೇ ತೋರಿಸಿದ್ದೇವೆ. ನಮ್ಮನ್ನು ಬಳಸಿಕೊಂಡು ನಿರ್ಲಕ್ಷ್ಯ ಮಾಡುವುದು ಒಳ್ಳೆಯದಲ್ಲ. ಹೆಂಡ ಮಾರಾಟದ ಮೂಲಕ ಬದುಕು ಕಟ್ಟಿಕೊಂಡಿದ್ದ ಸಮಾಜದ ಜನರು ಇಂದು ಹಮಾಲಿ ಮಾಡುವ ಸ್ಥಿತಿ ತಲುಪಿದ್ದಾರೆ’ ಎಂದರು.</p>.<p>ಮಾಜಿ ಶಾಸಕ ಮಧು ಬಂಗಾರಪ್ಪ ಮಾತನಾಡಿ, ‘ರಾಜಕೀಯ ಪ್ರಾತಿನಿಧ್ಯ, ಸಮಾಜದ ಶಕ್ತಿ ಪ್ರದರ್ಶನಕ್ಕೆ ನಾವೆಲ್ಲ ಸಜ್ಜಾ ಗೋಣ. ಬಿಲ್ಲವ, ಪೂಜಾರಿ, ಈಳವ, ಈಡಿಗ ಎಂಬ 26 ಒಳಪಂಗಡ ಮರೆತು ನಮ್ಮ ಅಸ್ತಿತ್ವ ತೋರಿಸಬೇಕು’ ಎಂದರು.</p>.<p>ರಾಜ್ಯ ಆರ್ಯ ಈಡಿಗ ಸಂಘದ ಅಧ್ಯಕ್ಷ ತಿಮ್ಮೇಗೌಡ ಮಾತನಾಡಿದರು.</p>.<p>ಅಭಿವೃದ್ಧಿ ನಿಗಮ, ಕೂಡಲಸಂಗಮದಲ್ಲಿ ಆರ್ಯಈಡಿಗ ಪೀಠ ಸ್ಥಾಪನೆಗೆ ಸ್ಥಳ, ಮುನಿರಾಬಾದ್ನಲ್ಲಿ ನಾರಾಯಣ ಗುರು ಶಿಕ್ಷಣ ಪೀಠ ಸ್ಥಾಪನೆಗೆ 70 ಎಕರೆ ಭೂಮಿ, ಅಧಿಕೃತ ಮದ್ಯ ಮಾರಾಟದಲ್ಲಿ ಸಮಾಜದವರಿಗೆ ಅವಕಾಶ, ಹೋರಾಟ ಸಮಿತಿ ರಚನೆ ಸೇರಿ 14 ನಿರ್ಣಯಗಳನ್ನು ಅಂಗೀಕರಿಸಲಾಯಿತು.</p>.<p>ಪ್ರಣವಾನಂದ ಶ್ರೀ, ಬ್ರಹ್ಮಾನಂದ ಸ್ವಾಮೀಜಿ, ವಿಖ್ಯಾತನಂದ, ಸತ್ಯಾನಂದ ಸ್ವಾಮೀಜಿ, ಪ್ರಮುಖರಾದ ಎಚ್.ಆರ್.ಶ್ರೀನಾಥ, ಎಚ್.ಆರ್.ಗವಿಯಪ್ಪ, ಸತ್ಯಜಿತ್ ಸುರತ್ಕಲ್, ರಾಜಶೇಖರ ಕೋಟ್ಯಾನ್, ಭರತ್.ಎಸ್.ಎಸ್, ಹರಿಬಾಬು ಇದ್ದರು.</p>.<p><strong>ಸಚಿವ ಗೈರು: ಬೇಳೂರು ವ್ಯಂಗ್ಯ</strong></p>.<p>‘ಹಿಂದುತ್ವ, ಪಕ್ಷ ನಿಷ್ಠೆ ಎನ್ನುವ ಮುಜರಾಯಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರಿಗೆ ಜಾತಿ ‘ಕೋಟಾ’ದಡಿ ಸಚಿವ ಸ್ಥಾನ ನೀಡಲಾಗಿದೆ. ಆದರೆ, ಯಾರದೋ ಮೇಲಿನ ಭಯದಿಂದ ಅವರು ಸಮಾವೇಶಕ್ಕೆ ಗೈರಾಗಿದ್ದಾರೆ’ ಎಂದು ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ವ್ಯಂಗ್ಯವಾಡಿದರು</p>.<p>‘ಸಮಾಜದ ಋಣ ಇರುವ ಸಚಿವರೇ ಮುಜರಾಯಿ ಇಲಾಖೆ ನಿಭಾಯಿಸು ತ್ತಿದ್ದಾರೆ. ಆದರೆ, ಸಮಾಜದವರಿಗೆ ಸೇರಿದ ಸಿಗಂದೂರು ಚೌಡೇಶ್ವರಿ ದೇವ ಸ್ಥಾನ ಉಳಿಸಿಕೊಳ್ಳಲು ಪ್ರಯತ್ನ ಮಾಡು ತ್ತಿಲ್ಲ. ಅವರು ಸಮಾಜದ ಹಿತ ಹೇಗೆ ಕಾಯುತ್ತಾರೆ’ ಎಂದು ಪ್ರಶ್ನಿಸಿದರು.</p>.<p>***</p>.<p>ಬಂಗಾರಪ್ಪ ಅವರ ನಂತರ ಸಮಾಜವನ್ನು ನಿರಂತರವಾಗಿ ಕಡೆಗಣಿಸಲಾಗುತ್ತಿದೆ. ಹೋರಾಟದ ಮೂಲಕ ನಮ್ಮ ಶಕ್ತಿ ಪ್ರದರ್ಶನ ಮಾಡಿ ವಿಧಾನಸೌಧ ನಡುಗುವಂತೆ ಮಾಡಬೇಕು</p>.<p><strong>- ಮಾಲೀಕಯ್ಯ ಗುತ್ತೇದಾರ, ಬಿಜೆಪಿ ರಾಜ್ಯ ಉಪಾಧ್ಯಕ್ಷ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>