ಕುಕನೂರು: ಜಿಲ್ಲಾ ನಾಗರಿಕ ವೇದಿಕೆ ವತಿಯಿಂದ ಜನವರಿ 2ರಿಂದ 4 ರಂದು ಇಟಗಿ ಗ್ರಾಮದಲ್ಲಿ ನಡೆಯುವ 15ನೇ ಇಟಗಿ ಉತ್ಸವದ ಕವಿ ಸಮ್ಮೇಳನದ ಸರ್ವಾಧ್ಯಕ್ಷೆಯಾಗಿ ಅನ್ನಪೂರ್ಣಮ್ಮ ಮನ್ನಾಪೂರ ಆಯ್ಕೆಯಾಗಿದ್ದಾರೆ.
ಅನ್ನಪೂರ್ಣಮ್ಮ ಅವರು 50ಕ್ಕೂ ಹೇಚ್ಚು ಕ್ಯಾಸೆಟ್, ಸಿ.ಡಿಗಳನ್ನು ಹೊರತಂದಿದ್ದಾರೆ. ಕವನ, ಚುಟಕು ಸಾಹಿತ್ಯ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸಿದ್ದಾರೆ ಎಂದು ನಾಗರಿಕ ವೇದಿಕೆ ಅಧ್ಯಕ್ಷ ಮಹೇಶ ಬಾಬು ಸುರ್ವೆ ತಿಳಿಸಿದ್ದಾರೆ.