<p><strong>ತಾವರಗೇರಾ</strong>: ‘ಸಮಾಜದಲ್ಲಿ ಮಾನವ ಮೌಲ್ಯಗಳನ್ನು ಕಾಪಾಡುವುದು ಅತಿ ಮುಖ್ಯವಾಗಿದೆ. ಆದ್ದರಿಂದ ಮದರಸಾ ಮಕ್ಕಳಿಗೆ ಸಮಾಜದ ಸಹಕಾರದಿಂದ ವಿಶೇಷ ಕಾರ್ಯಕ್ರಮ ಆಯೋಜಿಸಿ ಪ್ರೋತ್ಸಾಹ ನೀಡಲಾಗುತ್ತಿದೆ’ ಎಂದು ಸ್ಥಳೀಯ ಅಂಜುಮಾನ ನೌಜನ್ ಕಮಿಟಿ ಅಧ್ಯಕ್ಷ ಫಯಾಜ್ ಬನ್ನು ಹೇಳಿದರು.</p>.<p>ಪಟ್ಟಣದಲ್ಲಿ ಮುಸ್ಲಿಂ ಸಮಾಜದ ಎಚ್ಕೆಜಿಎನ್ ಕಮಿಟಿ ವತಿಯಿಂದ ಭಾನುವಾರ ಮಹಮ್ಮದ್ ಪೈಗಂಬರ್ ಜನ್ಮ ದಿನಾಚರಣೆ ಪ್ರಯುಕ್ತ ಏರ್ಪಡಿಸಿದ್ದ ಅರಬ್ಬಿ ಮದರಸಾ ಮಕ್ಕಳಿಗೆ ಸಾಮಗ್ರಿ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.</p>.<p>ನಂತರ ಎಚ್ಕೆಜಿಎನ್ ಅಧ್ಯಕ್ಷ ನವಾಬ್ ಮೆಹಬೂಬ್ ಜಹಗೀರದಾರ ಮಾತನಾಡಿ, ‘ನಮ್ಮ ಕಮಿಟಿ ವತಿಯಿಂದ ಸಾಮಾಜಿಕ ಕಾರ್ಯಗಳನ್ನು ನಡೆಸಲಾಗುವದು. ಅದರಂತೆ ಇಂದೂ ಸಹ ಅರಬ್ಬಿ ಮದರಸಾ ಮಕ್ಕಳಿಗೆ ಬ್ಯಾಗ್ , ಟೋಪಿ ವಿತರಣೆ ಮಾಡಲಾಗಿದೆ. ಸಮಾಜದಲ್ಲಿ ನಾವೆಲ್ಲ ವಿವಿಧ ಸಮಾಜಗಳ ಜೊತೆ ಉತ್ತಮ ಬಾಂಧವ್ಯ ಹೊಂದಿರಬೇಕು’ ಎಂದರು.</p>.<p>ಕಮಿಟಿ ಕಾರ್ಯದರ್ಶಿ ಮಹಮ್ಮದ್ ಹುಸೇನ್, ಇನಾಮ್ ಜಾಹೀದ್ ಹುಸೇನ್, ವಕ್ಫ್ಬೋರ್ಡ್ ಉಪಾಧ್ಯಕ್ಷ ಸೈಯದ್ ಖಾಜಾರಜಾ, ಸೈಯದ್ ನವೀದ್, ಶ್ಯಾಮೀದಸಾಬ ನಾಡಗೌಡ, ಮಹಮ್ಮದ್ ಹುಸೇನ್ ಮತ್ತು ಸಮಾಜದ ಪ್ರಮುಖರು, ಕಮಿಟಿ ಸದಸ್ಯರು ಮದರಸಾ ಮಕ್ಕಳು ಹಾಜರಿದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತಾವರಗೇರಾ</strong>: ‘ಸಮಾಜದಲ್ಲಿ ಮಾನವ ಮೌಲ್ಯಗಳನ್ನು ಕಾಪಾಡುವುದು ಅತಿ ಮುಖ್ಯವಾಗಿದೆ. ಆದ್ದರಿಂದ ಮದರಸಾ ಮಕ್ಕಳಿಗೆ ಸಮಾಜದ ಸಹಕಾರದಿಂದ ವಿಶೇಷ ಕಾರ್ಯಕ್ರಮ ಆಯೋಜಿಸಿ ಪ್ರೋತ್ಸಾಹ ನೀಡಲಾಗುತ್ತಿದೆ’ ಎಂದು ಸ್ಥಳೀಯ ಅಂಜುಮಾನ ನೌಜನ್ ಕಮಿಟಿ ಅಧ್ಯಕ್ಷ ಫಯಾಜ್ ಬನ್ನು ಹೇಳಿದರು.</p>.<p>ಪಟ್ಟಣದಲ್ಲಿ ಮುಸ್ಲಿಂ ಸಮಾಜದ ಎಚ್ಕೆಜಿಎನ್ ಕಮಿಟಿ ವತಿಯಿಂದ ಭಾನುವಾರ ಮಹಮ್ಮದ್ ಪೈಗಂಬರ್ ಜನ್ಮ ದಿನಾಚರಣೆ ಪ್ರಯುಕ್ತ ಏರ್ಪಡಿಸಿದ್ದ ಅರಬ್ಬಿ ಮದರಸಾ ಮಕ್ಕಳಿಗೆ ಸಾಮಗ್ರಿ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.</p>.<p>ನಂತರ ಎಚ್ಕೆಜಿಎನ್ ಅಧ್ಯಕ್ಷ ನವಾಬ್ ಮೆಹಬೂಬ್ ಜಹಗೀರದಾರ ಮಾತನಾಡಿ, ‘ನಮ್ಮ ಕಮಿಟಿ ವತಿಯಿಂದ ಸಾಮಾಜಿಕ ಕಾರ್ಯಗಳನ್ನು ನಡೆಸಲಾಗುವದು. ಅದರಂತೆ ಇಂದೂ ಸಹ ಅರಬ್ಬಿ ಮದರಸಾ ಮಕ್ಕಳಿಗೆ ಬ್ಯಾಗ್ , ಟೋಪಿ ವಿತರಣೆ ಮಾಡಲಾಗಿದೆ. ಸಮಾಜದಲ್ಲಿ ನಾವೆಲ್ಲ ವಿವಿಧ ಸಮಾಜಗಳ ಜೊತೆ ಉತ್ತಮ ಬಾಂಧವ್ಯ ಹೊಂದಿರಬೇಕು’ ಎಂದರು.</p>.<p>ಕಮಿಟಿ ಕಾರ್ಯದರ್ಶಿ ಮಹಮ್ಮದ್ ಹುಸೇನ್, ಇನಾಮ್ ಜಾಹೀದ್ ಹುಸೇನ್, ವಕ್ಫ್ಬೋರ್ಡ್ ಉಪಾಧ್ಯಕ್ಷ ಸೈಯದ್ ಖಾಜಾರಜಾ, ಸೈಯದ್ ನವೀದ್, ಶ್ಯಾಮೀದಸಾಬ ನಾಡಗೌಡ, ಮಹಮ್ಮದ್ ಹುಸೇನ್ ಮತ್ತು ಸಮಾಜದ ಪ್ರಮುಖರು, ಕಮಿಟಿ ಸದಸ್ಯರು ಮದರಸಾ ಮಕ್ಕಳು ಹಾಜರಿದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>