ನೀರಾವರಿ ಕಚೇರಿ ಮುಂದೆ ಶವ: ನೀರಾವರಿ ನಿಗಮ ವ್ಯಾಪ್ತಿಯ ಅಗಳಕೇರಾ ಗ್ರಾಮದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಕಚೇರಿಯ ಎದುರು ಕೆಲಕಾಲ ಶವ ಇಟ್ಟ ಮೃತರ ಸಂಬಂಧಿಕರು ಮತ್ತು ಸಹೋದ್ಯೋಗಿಗಳು ಹೆಚ್ಚಿನ ಪರಿಹಾರಕ್ಕಾಗಿ ಘೋಷಣೆ ಕೂಗಿದರು. ಸ್ಥಳಕ್ಕೆ ಬಂದ ನೀರಾವರಿ ಇಲಾಖೆಯ ಎಂಜಿನಿಯರ್ ನಾಗಭೂಷಣ, ಅಜೀಜ್ ಮತ್ತು ಅಮರೇಶಪ್ಪ ಅವರು ಅಂತ್ಯಸಂಸ್ಕಾರದ ಖರ್ಚಿಗೆಂದು ₹10 ಸಾವಿರ ನೀಡಿದರು ಎಂದು ಕುಟುಂಬದವರು ತಿಳಿಸಿದ್ದಾರೆ. ಇಲ್ಲಿನ ಠಾಣೆಯಲ್ಲಿ ಅಸಹಜ ಸಾವಿನ ಪ್ರಕರಣ ದಾಖಲಾಗಿದೆ.