ಕೊಪ್ಪಳ: ಗಂಜ್ದಲ್ಲಿರುವ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಇಬ್ಬರನ್ನು ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ತಾಲ್ಲೂಕಿನ ಅಳವಂಡಿ ಗ್ರಾಮದ ಶ್ರೀನಿವಾಸರಡ್ಡಿ ಶಂಕ್ರಪ್ಪ ಕಲಾದಗಿ ಮತ್ತು ಇರಕಲ್ಲಗಡ ಹೋಬಳಿಯ ಕೂಕನಪಳ್ಳಿ ಗ್ರಾಮದ ರುದ್ರಪ್ಪ ರಾಚಪ್ಪ ಹಲಗೇರಿ ಅವರನ್ನು ಸರ್ಕಾರ ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ. ಸಂಸದ ಸಂಗಣ್ಣ ಕರಡಿ ಅವರ ಮನವಿ ಮೇರೆಗೆ ನೇಮಕ ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.