<p><strong>ಅಳವಂಡಿ (ತಿಗರಿ):</strong> ಸಮೀಪದ ತಿಗರಿ ಗ್ರಾಮದಲ್ಲಿ ಭಾವೈಕ್ಯ ನಿಧಿ ಶಿರಹಟ್ಟಿಯ ಫಕೀರೇಶ್ವರ ಶಾಖಾ ಮಠದ ಜಾತ್ರಾ ಮಹೋತ್ಸವ ಸೋಮವಾರ ಸಂಭ್ರಮದಿಂದ ನಡೆಯಿತು.</p>.<p>ಬೆಳಿಗ್ಗೆ ದೇವರಿಗೆ ವಿಶೇಷ ಪೂಜೆ ಹಾಗೂ ಅಭಿಷೇಕ ನಡೆದವು. ಭಕ್ತರು ನೈವೇದ್ಯ ಅರ್ಪಿಸಿದರು. ಬೆಳಿಗ್ಗೆ ಹಂದ್ರಾಳ ಗ್ರಾಮದಿಂದ ಬಂದಂತಹ ಫಕೀರೇಶ್ವರ ಮೂರ್ತಿಯನ್ನು ಗ್ರಾಮಕ್ಕೆ ಬರಮಾಡಿಕೊಂಡು, ತುಂಗಾಭದ್ರಾ ನದಿಗೆ ತೆರಳಿ ಗಂಗಾಪೂಜೆ ಕಾರ್ಯಕ್ರಮ ನಡೆಯಿತು.</p>.<p>ಪಕೀರೇಶ್ವರ ಮೂರ್ತಿಯನ್ನು ಮೆರವಣಿಗೆ ಮೂಲಕ ಮತ್ತೆ ಗ್ರಾಮಕ್ಕೆ ತರಲಾಯಿತು. ಜಾತ್ರಾ ಮಹೋತ್ಸವದ ಅಂಗವಾಗಿ ಮಠವನ್ನು ಅಲಂಕಾರಿಕ ಹೂಗಳಿಂದ, ವಿದ್ಯುತ್ ದೀಪಗಳಿಂದ, ತಳೀರು ತೋರಣಗಳಿಂದ ಸಿಂಗರಿಸಲಾಗಿತ್ತು. ಭಕ್ತರು ದೀರ್ಘದಂಡ(ದೀಡ) ನಮಸ್ಕಾರ ಹಾಕಿ ಹರಕೆ ತೀರಿಸಿದರು.</p>.<p>ಸಂಜೆ ಲಘು ರಥೋತ್ಸವ ಅದ್ದೂರಿಯಾಗಿ ನೆರವೇರಿತು. ಭಕ್ತರು ರಥೋತ್ಸವಕ್ಕೆ ಉತ್ತುತ್ತಿ ಹಾಗೂ ಬಾಳೆಹಣ್ಣು ಎಸೆದು ಭಕ್ತಿ ಸಮರ್ಪಿಸಿದರು. ಅನ್ನ ಸಂತರ್ಪಣೆ ವ್ಯವಸ್ಥೆ ಮಾಡಲಾಗಿತ್ತು. ಪಿಎಸ್ಐ ಪ್ರಹ್ಲಾದ್ ನಾಯಕ ನೇತೃತ್ವದಲ್ಲಿ ಪೋಲಿಸ್ ಬಿಗಿ ಬಂದೋಬಸ್ತ್ ಒದಗಿಸಿದ್ದರು.</p>.<p>ಶಿರಹಟ್ಟಿಯ ಪಕೀರ ಸಿದ್ದರಾಮೇಶ್ವರ ಸ್ವಾಮೀಜಿ, ಹಂದ್ರಾಳದ ಫಕೀರ ಮರಿಸ್ವಾಮೀಜಿ, ಬಿಸರಳ್ಳಿಯ ಖಾಜಾಸಾಬ ಮೌಲ್ವಿಗಳು ದಿವ್ಯ ಸಾನ್ನಿಧ್ಯ ವಹಿಸಿದ್ದರು.</p>.<p>ಗ್ರಾಮಸ್ಥರಾದ ಭೀಮನಗೌಡ ಪೋಲಿಸ್ ಪಾಟೀಲ, ಸಂಗಪ್ಪ ಕವಲೂರು, ಬಾಳಪ್ಪ ಅಗಸಿಮನಿ, ಕೋಟ್ರೇಶ ಕಾತರಕಿ, ಸುರೇಶ ರಡ್ಡೇರ , ಭರಮಪ್ಪ ಅಂಬಳಿ, ರಾಮಣ್ಣ ಬಾರಕೇರ, ಶೇಖರಪ್ಪ ಅಗಸಿಮನಿ, ವೆಂಕಟೇಶ ಕವಲೂರು, ವೀರಭದ್ರ ಹಡಪದ, ಬಸಪ್ಪ ಗೌಡ್ರು, ಮಾರುತಿ ಅಂಬಿಗೇರ, ನಿಂಗಪ್ಪ ಮಡಿವಾಳ, ಉಮೇಶ, ದೇವಪ್ಪ, ವೀರೇಶ , ಹನುಮೇಶ, ಗೋಣೇಪ್ಪ, ರಮೇಶ, ಮಂಜು, ಗವಿ ಅಂಗಡಿ ಹಾಗೂ ಇತರರು ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಅಳವಂಡಿ (ತಿಗರಿ):</strong> ಸಮೀಪದ ತಿಗರಿ ಗ್ರಾಮದಲ್ಲಿ ಭಾವೈಕ್ಯ ನಿಧಿ ಶಿರಹಟ್ಟಿಯ ಫಕೀರೇಶ್ವರ ಶಾಖಾ ಮಠದ ಜಾತ್ರಾ ಮಹೋತ್ಸವ ಸೋಮವಾರ ಸಂಭ್ರಮದಿಂದ ನಡೆಯಿತು.</p>.<p>ಬೆಳಿಗ್ಗೆ ದೇವರಿಗೆ ವಿಶೇಷ ಪೂಜೆ ಹಾಗೂ ಅಭಿಷೇಕ ನಡೆದವು. ಭಕ್ತರು ನೈವೇದ್ಯ ಅರ್ಪಿಸಿದರು. ಬೆಳಿಗ್ಗೆ ಹಂದ್ರಾಳ ಗ್ರಾಮದಿಂದ ಬಂದಂತಹ ಫಕೀರೇಶ್ವರ ಮೂರ್ತಿಯನ್ನು ಗ್ರಾಮಕ್ಕೆ ಬರಮಾಡಿಕೊಂಡು, ತುಂಗಾಭದ್ರಾ ನದಿಗೆ ತೆರಳಿ ಗಂಗಾಪೂಜೆ ಕಾರ್ಯಕ್ರಮ ನಡೆಯಿತು.</p>.<p>ಪಕೀರೇಶ್ವರ ಮೂರ್ತಿಯನ್ನು ಮೆರವಣಿಗೆ ಮೂಲಕ ಮತ್ತೆ ಗ್ರಾಮಕ್ಕೆ ತರಲಾಯಿತು. ಜಾತ್ರಾ ಮಹೋತ್ಸವದ ಅಂಗವಾಗಿ ಮಠವನ್ನು ಅಲಂಕಾರಿಕ ಹೂಗಳಿಂದ, ವಿದ್ಯುತ್ ದೀಪಗಳಿಂದ, ತಳೀರು ತೋರಣಗಳಿಂದ ಸಿಂಗರಿಸಲಾಗಿತ್ತು. ಭಕ್ತರು ದೀರ್ಘದಂಡ(ದೀಡ) ನಮಸ್ಕಾರ ಹಾಕಿ ಹರಕೆ ತೀರಿಸಿದರು.</p>.<p>ಸಂಜೆ ಲಘು ರಥೋತ್ಸವ ಅದ್ದೂರಿಯಾಗಿ ನೆರವೇರಿತು. ಭಕ್ತರು ರಥೋತ್ಸವಕ್ಕೆ ಉತ್ತುತ್ತಿ ಹಾಗೂ ಬಾಳೆಹಣ್ಣು ಎಸೆದು ಭಕ್ತಿ ಸಮರ್ಪಿಸಿದರು. ಅನ್ನ ಸಂತರ್ಪಣೆ ವ್ಯವಸ್ಥೆ ಮಾಡಲಾಗಿತ್ತು. ಪಿಎಸ್ಐ ಪ್ರಹ್ಲಾದ್ ನಾಯಕ ನೇತೃತ್ವದಲ್ಲಿ ಪೋಲಿಸ್ ಬಿಗಿ ಬಂದೋಬಸ್ತ್ ಒದಗಿಸಿದ್ದರು.</p>.<p>ಶಿರಹಟ್ಟಿಯ ಪಕೀರ ಸಿದ್ದರಾಮೇಶ್ವರ ಸ್ವಾಮೀಜಿ, ಹಂದ್ರಾಳದ ಫಕೀರ ಮರಿಸ್ವಾಮೀಜಿ, ಬಿಸರಳ್ಳಿಯ ಖಾಜಾಸಾಬ ಮೌಲ್ವಿಗಳು ದಿವ್ಯ ಸಾನ್ನಿಧ್ಯ ವಹಿಸಿದ್ದರು.</p>.<p>ಗ್ರಾಮಸ್ಥರಾದ ಭೀಮನಗೌಡ ಪೋಲಿಸ್ ಪಾಟೀಲ, ಸಂಗಪ್ಪ ಕವಲೂರು, ಬಾಳಪ್ಪ ಅಗಸಿಮನಿ, ಕೋಟ್ರೇಶ ಕಾತರಕಿ, ಸುರೇಶ ರಡ್ಡೇರ , ಭರಮಪ್ಪ ಅಂಬಳಿ, ರಾಮಣ್ಣ ಬಾರಕೇರ, ಶೇಖರಪ್ಪ ಅಗಸಿಮನಿ, ವೆಂಕಟೇಶ ಕವಲೂರು, ವೀರಭದ್ರ ಹಡಪದ, ಬಸಪ್ಪ ಗೌಡ್ರು, ಮಾರುತಿ ಅಂಬಿಗೇರ, ನಿಂಗಪ್ಪ ಮಡಿವಾಳ, ಉಮೇಶ, ದೇವಪ್ಪ, ವೀರೇಶ , ಹನುಮೇಶ, ಗೋಣೇಪ್ಪ, ರಮೇಶ, ಮಂಜು, ಗವಿ ಅಂಗಡಿ ಹಾಗೂ ಇತರರು ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>