ನೂರಾರು ಸಂಖ್ಯೆಯಲ್ಲಿ ಸೇರಿದ್ದ ಸಂಘಟನೆಯ ಸದಸ್ಯರು ಇಲ್ಲಿನ ಅಶೋಕ ವೃತ್ತದಲ್ಲಿ ಪಿಎಫ್ಐ ಸಂಘಟನೆ ಪರ ಹಾಗೂ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಸಿಸಿಬಿ, ಸ್ಥಳೀಯ ಪೊಲೀಸರು, ಎನ್ಐಎ ಹಾಗೂ ಇತರೆ ತನಿಖಾ ತಂಡಗಳ ಅಧಿಕಾರಿಗಳು ‘ನಮ್ಮ ಸಂಘಟನೆ ಸದಸ್ಯರ ಮೇಲೆ ಉದ್ದೇಶಪೂರ್ವಕವಾಗಿ ದಾಳಿ ಮಾಡಿದ್ದಾರೆ. ಕೆ.ಜಿ. ಹಳ್ಳಿ ಘಟನೆ ಬಗ್ಗೆ ತನಿಖಾ ತಂಡಗಳ ಮುಖ್ಯಸ್ಥರೇ ದ್ವಂದ್ವ ನಿಲುವು ಹೊಂದಿದ್ದಾರೆ’ ಎಂದು ಆರೋಪಿಸಿದರು.