<p><strong>ಕೊಪ್ಪಳ</strong>: ಶಿಥಿಲಗೊಂಡು ಅವ್ಯವಸ್ಥೆಯ ಗೂಡಾಗಿದ್ದ ಇಲ್ಲಿನ ದಿಡ್ಡಿ ಓಣಿಯಲ್ಲಿರುವ ಅಂಗನವಾಡಿ ಕೇಂದ್ರವನ್ನು ಸೋಮವಾರ ಸ್ಥಳಾಂತರ ಮಾಡಲಾಗಿದೆ.</p><p>ಈ ಕುರಿತು ‘ಪ್ರಜಾವಾಣಿ’ಯ ಭಾನುವಾರದ ಸಂಚಿಕೆಯ ಒಳನೋಟದಲ್ಲಿ ‘ಅಂಗನವಾಡಿ: ಸಮಸ್ಯೆ ನೂರು’ ತಲೆಬರಹದಲ್ಲಿ ವಿಶೇಷ ವರದಿ ಹಾಗೂ ದಿಡ್ಡಿ ಓಣಿಯ ಅಂಗನವಾಡಿಯ ಚಿತ್ರ ಪ್ರಕಟವಾಗಿತ್ತು.</p><p>ಮೇಲಧಿಕಾರಿಗಳ ಸೂಚನೆ ಮೇರೆಗೆ ಕೊಪ್ಪಳ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ರೂಪಾ ಗಂಧದ ಹಾಗೂ ವಲಯದ ಹಿರಿಯ ಮೇಲ್ವಿಚಾರಕಿ ಭುವನೇಶ್ವರಿ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದರು.</p><p>ಬೇರೆ ಕಡೆ ಇದ್ದ ಕೇಂದ್ರವನ್ನು ಎರಡು ತಿಂಗಳ ಹಿಂದೆ ಶಿಥಿಲ ಕಟ್ಟಡಕ್ಕೆ ಸ್ಥಳಾಂತರಿಸಲಾಗಿತ್ತು. ಈ ಎರಡೂ ಕಟ್ಟಡಗಳ ಮಾಲೀಕರು ಒಬ್ಬರೇ ಇದ್ದು ಕೇಂದ್ರವನ್ನು ಸ್ಥಳಾಂತರ ಮಾಡಿದ ಬಗ್ಗೆ ಅಂಗನವಾಡಿ ಕಾರ್ಯಕರ್ತೆ ಮೇಲಧಿಕಾರಿಗೆ ಮಾಹಿತಿ ನೀಡಿರಲಿಲ್ಲ ಎನ್ನುವ ವಿಷಯವೂ ಬಹಿರಂಗವಾಗಿದೆ.</p><p>ಕೇಂದ್ರಕ್ಕೆ ತೆರಳಿದ ಅಧಿಕಾರಿಗಳು ಅಲ್ಲಿಯೇ ಬಾಲವಿಕಾಸ ಸಮಿತಿ ಸಭೆ ನಡೆಸಿ ಸಮೀಪದ ಸರ್ಕಾರಿ ಹಿರಿಯ ಪ್ರಾಥಮಿಕ ಉರ್ದು ಶಾಲೆಗೆ ದಿಡ್ಡಿಕೇರಿಯ ಅಂಗನವಾಡಿ ಕೇಂದ್ರವನ್ನು ಸ್ಥಳಾಂತರಿಸಿದರು.</p><p>‘ದಿಡ್ಡಿಕೇರಿ ಓಣಿಯಲ್ಲಿ ನಿವೇಶನ ಗುರುತಿಸಿದ್ದು ಸದ್ಯದಲ್ಲೆ ಕಟ್ಟಡ ಕಾಮಗಾರಿ ಪ್ರಾರಂಭಿಸಲಾಗುವುದು’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೊಪ್ಪಳ</strong>: ಶಿಥಿಲಗೊಂಡು ಅವ್ಯವಸ್ಥೆಯ ಗೂಡಾಗಿದ್ದ ಇಲ್ಲಿನ ದಿಡ್ಡಿ ಓಣಿಯಲ್ಲಿರುವ ಅಂಗನವಾಡಿ ಕೇಂದ್ರವನ್ನು ಸೋಮವಾರ ಸ್ಥಳಾಂತರ ಮಾಡಲಾಗಿದೆ.</p><p>ಈ ಕುರಿತು ‘ಪ್ರಜಾವಾಣಿ’ಯ ಭಾನುವಾರದ ಸಂಚಿಕೆಯ ಒಳನೋಟದಲ್ಲಿ ‘ಅಂಗನವಾಡಿ: ಸಮಸ್ಯೆ ನೂರು’ ತಲೆಬರಹದಲ್ಲಿ ವಿಶೇಷ ವರದಿ ಹಾಗೂ ದಿಡ್ಡಿ ಓಣಿಯ ಅಂಗನವಾಡಿಯ ಚಿತ್ರ ಪ್ರಕಟವಾಗಿತ್ತು.</p><p>ಮೇಲಧಿಕಾರಿಗಳ ಸೂಚನೆ ಮೇರೆಗೆ ಕೊಪ್ಪಳ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ರೂಪಾ ಗಂಧದ ಹಾಗೂ ವಲಯದ ಹಿರಿಯ ಮೇಲ್ವಿಚಾರಕಿ ಭುವನೇಶ್ವರಿ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದರು.</p><p>ಬೇರೆ ಕಡೆ ಇದ್ದ ಕೇಂದ್ರವನ್ನು ಎರಡು ತಿಂಗಳ ಹಿಂದೆ ಶಿಥಿಲ ಕಟ್ಟಡಕ್ಕೆ ಸ್ಥಳಾಂತರಿಸಲಾಗಿತ್ತು. ಈ ಎರಡೂ ಕಟ್ಟಡಗಳ ಮಾಲೀಕರು ಒಬ್ಬರೇ ಇದ್ದು ಕೇಂದ್ರವನ್ನು ಸ್ಥಳಾಂತರ ಮಾಡಿದ ಬಗ್ಗೆ ಅಂಗನವಾಡಿ ಕಾರ್ಯಕರ್ತೆ ಮೇಲಧಿಕಾರಿಗೆ ಮಾಹಿತಿ ನೀಡಿರಲಿಲ್ಲ ಎನ್ನುವ ವಿಷಯವೂ ಬಹಿರಂಗವಾಗಿದೆ.</p><p>ಕೇಂದ್ರಕ್ಕೆ ತೆರಳಿದ ಅಧಿಕಾರಿಗಳು ಅಲ್ಲಿಯೇ ಬಾಲವಿಕಾಸ ಸಮಿತಿ ಸಭೆ ನಡೆಸಿ ಸಮೀಪದ ಸರ್ಕಾರಿ ಹಿರಿಯ ಪ್ರಾಥಮಿಕ ಉರ್ದು ಶಾಲೆಗೆ ದಿಡ್ಡಿಕೇರಿಯ ಅಂಗನವಾಡಿ ಕೇಂದ್ರವನ್ನು ಸ್ಥಳಾಂತರಿಸಿದರು.</p><p>‘ದಿಡ್ಡಿಕೇರಿ ಓಣಿಯಲ್ಲಿ ನಿವೇಶನ ಗುರುತಿಸಿದ್ದು ಸದ್ಯದಲ್ಲೆ ಕಟ್ಟಡ ಕಾಮಗಾರಿ ಪ್ರಾರಂಭಿಸಲಾಗುವುದು’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>