ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಅನುದಾನದಲ್ಲಿ ದೋಟಿಹಾಳ ಮುದೇನೂರು ರಾಜ್ಯ ಹೆದ್ದಾರಿಯ ಅಭಿವೃದ್ಧಿಯನ್ನು ಲೋಕೋಪಯೋಗಿ ಇಲಾಖೆ ಕೈಗೆತ್ತಿಕೊಂಡಿದ್ದು ಆದರೆ ಸೇತುವೆಗಳನ್ನು ದುರಸ್ತಿಗೊಳಿಸುವ ಕೆಲಸ ನಡೆಸಿಲ್ಲ. ರಸ್ತೆ ಅಭಿವೃದ್ಧಿಗೊಂಡರೂ ಕುಸಿದುಹೋದರೆ ಜನರು ಮತ್ತೆ ತೊಂದರೆ ಅನುಭವಿಸಬೇಕಾಗುತ್ತದೆ. ಹಾಗಾಗಿ ಸೇತುವೆ ಕಾಮಗಾರಿ ದುರಸ್ತಿಗೆ ತಕ್ಷಣ ಮುಂದಾಗುವಂತೆ ದೋಟಿಹಾಳ ಗ್ರಾಮದ ಬಸವರಾಜ, ಮುದೇನೂರಿನ ಚಂದ್ರಶೇಖರಗೌಡ ಇತರರು ಒತ್ತಾಯಿಸಿದ್ದಾರೆ.