<p><strong>ಗಂಗಾವತಿ</strong>: ಇಲ್ಲಿನ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಬುಧವಾರ 267ನೇ ವಿಜಯದಾಸರ ಆರಾಧನಾ ಮಹೋತ್ಸವ ಮಂತ್ರಾಲಯ ರಾಘವೇಂದ್ರ ಸ್ವಾಮಿಗಳ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರ ಸಾನ್ನಿಧ್ಯದಲ್ಲಿ ಜರುಗಿತು.</p>.<p>ಈ ವೇಳೆ ಶ್ರೀಗಳು ಮಾತನಾಡಿ, ‘ವಿಜಯದಾಸರು ದಾಸರ ಪರಂಪರೆಗೆ ಹೆಚ್ಚಿನ ಒತ್ತು ನೀಡಿ, 25 ಸಾವಿರಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಕಳೆದ 20 ವರ್ಷಗಳಿಂದ ಈ ಆರಾಧನಾ ಮಹೋತ್ಸವ ನಡೆಸಿಕೊಂಡು ಬರುತ್ತಿರು ವುದು ಶ್ಲಾಘನೀಯ. ಹೀಗೆ ಮುಂದುವರಿಸಿಕೊಂಡು ಹೋದರೆ, ರಾಯರ ಮಠದಿಂದ ₹1 ಲಕ್ಷ ಅನುದಾನ ನೀಡಲಾಗುವುದು’ಎಂದರು. ಭಕ್ತರಿಗೆ ತಪ್ತ ಮುದ್ರಧಾರಣೆ ಹಾಕಲಾಯಿತು.</p>.<p>ಇದಕ್ಕೂ ಮುನ್ನ ವಿಜಯದಾಸರ ವೃಂದಾವನಕ್ಕೆ ಪಂಚಾಮೃತ ಅಭಿಷೇಕ, ವಿಶೇಷ ಹೂವಿನ ಅಲಂಕಾರ, ಮಹಾ ಮಂಗಳಾರತಿ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.</p>.<p>ನಂತರ ನಗರೇಶ್ವರ ದೇವಸ್ಥಾನದಿಂದ ರಾಯರ ಮಠದವರೆಗೆ ರಾಯರ ಮಠದ ಶ್ರೀಗಳನ್ನು ಮೆರವಣಿಗೆ ಮಾಡಲಾಯಿತು. ನಂತರ ಶ್ರೀಗಳಿಂದ ಮಠದ ಆವರಣದಲ್ಲಿ ಪ್ರವಚನ ಕಾರ್ಯಕ್ರಮ ನಡೆಯಿತು.</p>.<p>ಶಾಸಕ ಪರಣ್ಣ ಮುನವಳ್ಳಿ, ಬ್ರಾಹ್ಮಣ ಸಮಾಜದ ನಾರಾಯಣರಾವ್ ಆಚಾರ್, ವಾಸುದೇವ ನವಲಿ, ಮಧುಸೂಧನ್, ರಾಮಕೃಷ್ಣ ಜಾಗಿರದಾರ್, ಶ್ರೀನಿವಾಸ ಢಣಾಪುರ, ಗೋಪಾಲಕೃಷ್ಣ ಹೇರೂರು, ಲಕ್ಷ್ಮೀಕಾಂತ, ಪವನಕುಮಾರ ಗುಂಡೂರು, ಬದ್ರಿನಾರಾಯಣ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗಂಗಾವತಿ</strong>: ಇಲ್ಲಿನ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಬುಧವಾರ 267ನೇ ವಿಜಯದಾಸರ ಆರಾಧನಾ ಮಹೋತ್ಸವ ಮಂತ್ರಾಲಯ ರಾಘವೇಂದ್ರ ಸ್ವಾಮಿಗಳ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರ ಸಾನ್ನಿಧ್ಯದಲ್ಲಿ ಜರುಗಿತು.</p>.<p>ಈ ವೇಳೆ ಶ್ರೀಗಳು ಮಾತನಾಡಿ, ‘ವಿಜಯದಾಸರು ದಾಸರ ಪರಂಪರೆಗೆ ಹೆಚ್ಚಿನ ಒತ್ತು ನೀಡಿ, 25 ಸಾವಿರಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಕಳೆದ 20 ವರ್ಷಗಳಿಂದ ಈ ಆರಾಧನಾ ಮಹೋತ್ಸವ ನಡೆಸಿಕೊಂಡು ಬರುತ್ತಿರು ವುದು ಶ್ಲಾಘನೀಯ. ಹೀಗೆ ಮುಂದುವರಿಸಿಕೊಂಡು ಹೋದರೆ, ರಾಯರ ಮಠದಿಂದ ₹1 ಲಕ್ಷ ಅನುದಾನ ನೀಡಲಾಗುವುದು’ಎಂದರು. ಭಕ್ತರಿಗೆ ತಪ್ತ ಮುದ್ರಧಾರಣೆ ಹಾಕಲಾಯಿತು.</p>.<p>ಇದಕ್ಕೂ ಮುನ್ನ ವಿಜಯದಾಸರ ವೃಂದಾವನಕ್ಕೆ ಪಂಚಾಮೃತ ಅಭಿಷೇಕ, ವಿಶೇಷ ಹೂವಿನ ಅಲಂಕಾರ, ಮಹಾ ಮಂಗಳಾರತಿ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.</p>.<p>ನಂತರ ನಗರೇಶ್ವರ ದೇವಸ್ಥಾನದಿಂದ ರಾಯರ ಮಠದವರೆಗೆ ರಾಯರ ಮಠದ ಶ್ರೀಗಳನ್ನು ಮೆರವಣಿಗೆ ಮಾಡಲಾಯಿತು. ನಂತರ ಶ್ರೀಗಳಿಂದ ಮಠದ ಆವರಣದಲ್ಲಿ ಪ್ರವಚನ ಕಾರ್ಯಕ್ರಮ ನಡೆಯಿತು.</p>.<p>ಶಾಸಕ ಪರಣ್ಣ ಮುನವಳ್ಳಿ, ಬ್ರಾಹ್ಮಣ ಸಮಾಜದ ನಾರಾಯಣರಾವ್ ಆಚಾರ್, ವಾಸುದೇವ ನವಲಿ, ಮಧುಸೂಧನ್, ರಾಮಕೃಷ್ಣ ಜಾಗಿರದಾರ್, ಶ್ರೀನಿವಾಸ ಢಣಾಪುರ, ಗೋಪಾಲಕೃಷ್ಣ ಹೇರೂರು, ಲಕ್ಷ್ಮೀಕಾಂತ, ಪವನಕುಮಾರ ಗುಂಡೂರು, ಬದ್ರಿನಾರಾಯಣ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>