ಈ ವೇಳೆ ಶ್ರೀಗಳು ಮಾತನಾಡಿ, ‘ವಿಜಯದಾಸರು ದಾಸರ ಪರಂಪರೆಗೆ ಹೆಚ್ಚಿನ ಒತ್ತು ನೀಡಿ, 25 ಸಾವಿರಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಕಳೆದ 20 ವರ್ಷಗಳಿಂದ ಈ ಆರಾಧನಾ ಮಹೋತ್ಸವ ನಡೆಸಿಕೊಂಡು ಬರುತ್ತಿರು ವುದು ಶ್ಲಾಘನೀಯ. ಹೀಗೆ ಮುಂದುವರಿಸಿಕೊಂಡು ಹೋದರೆ, ರಾಯರ ಮಠದಿಂದ ₹1 ಲಕ್ಷ ಅನುದಾನ ನೀಡಲಾಗುವುದು’ಎಂದರು. ಭಕ್ತರಿಗೆ ತಪ್ತ ಮುದ್ರಧಾರಣೆ ಹಾಕಲಾಯಿತು.
ಇದಕ್ಕೂ ಮುನ್ನ ವಿಜಯದಾಸರ ವೃಂದಾವನಕ್ಕೆ ಪಂಚಾಮೃತ ಅಭಿಷೇಕ, ವಿಶೇಷ ಹೂವಿನ ಅಲಂಕಾರ, ಮಹಾ ಮಂಗಳಾರತಿ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.
ನಂತರ ನಗರೇಶ್ವರ ದೇವಸ್ಥಾನದಿಂದ ರಾಯರ ಮಠದವರೆಗೆ ರಾಯರ ಮಠದ ಶ್ರೀಗಳನ್ನು ಮೆರವಣಿಗೆ ಮಾಡಲಾಯಿತು. ನಂತರ ಶ್ರೀಗಳಿಂದ ಮಠದ ಆವರಣದಲ್ಲಿ ಪ್ರವಚನ ಕಾರ್ಯಕ್ರಮ ನಡೆಯಿತು.
ಶಾಸಕ ಪರಣ್ಣ ಮುನವಳ್ಳಿ, ಬ್ರಾಹ್ಮಣ ಸಮಾಜದ ನಾರಾಯಣರಾವ್ ಆಚಾರ್, ವಾಸುದೇವ ನವಲಿ, ಮಧುಸೂಧನ್, ರಾಮಕೃಷ್ಣ ಜಾಗಿರದಾರ್, ಶ್ರೀನಿವಾಸ ಢಣಾಪುರ, ಗೋಪಾಲಕೃಷ್ಣ ಹೇರೂರು, ಲಕ್ಷ್ಮೀಕಾಂತ, ಪವನಕುಮಾರ ಗುಂಡೂರು, ಬದ್ರಿನಾರಾಯಣ ಇದ್ದರು.