ರಮೇಶ ಜಾರಕಿಹೊಳಿಗೆ ಬೃಹತ್ ನೀರಾವರಿ ಖಾತೆ ನೀಡಿದ್ದಾರೆ. ಆದರೆ ಅವನಿಗೆ ಈ ಖಾತೆ ನಿಭಾಯಿಸುವುದು ಕಷ್ಟ ಅನ್ನಿಸುತ್ತದೆ. ಕಾನೂನಾತ್ಮಕ ಸಮಸ್ಯೆಗಳು ಇರುತ್ತವೆ. ನಿಭಾಯಿಸುವುದು ಕಷ್ಟವಾಗಬಹುದು. ಆದರೂ ಹೇಗೆ ನಿಭಾಯಿಸುತ್ತಾನೆ ಎಂದು ಕಾದು ನೋಡಬೇಕಿದೆ. ಬ್ಲಾಕ್ ಮೇಲ್ ಮಾಡುವುದು ಸರಿಯಲ್ಲ. ಬಿಜೆಪಿಗೆ ಹೋಗಿದ್ದಾರೆ, ಆ ಪಕ್ಷದ ನಿಲುವಿಗೆ ಅಂಟಿಕೊಂಡು ಇರಬೇಕು. ಮತ್ತೆ 20 ಜನರನ್ನು ಕಟ್ಟಿಕೊಂಡು ಹೊರಗೆ ಬರುತ್ತೇವೆ ಎಂದರೆ ಅದು ಸರಿಯಲ್ಲ ಎಂದರು.