<p><strong>ಗಂಗಾವತಿ: </strong>ಸರ್ಕಾರದ ಸಾಮಾಜಿಕ ಭದ್ರತಾ ಯೋಜನೆಗಳನ್ನು ಫಲಾನುಭವಿಗೆ ಸಕಾಲಕ್ಕೆ ತಲುಪಿಸುವಲ್ಲಿ ವಿಫಲವಾದ ಹಾಗೂ ಹಣಕ್ಕೆ ಬೇಡಿಕೆ ಇಡುವ ಗ್ರಾಮ ಲೆಕ್ಕಾಧಿಕಾರಿ ಬಸವರಾಜರನ್ನು ತಕ್ಷಣ ವರ್ಗಾವಣೆ ಮಾಡುವಂತೆ ಚಿಕ್ಕಬೆಣಕಲ್ ಗ್ರಾಮದ ಕೆಲ ಮಹಿಳೆಯರು ಒತ್ತಾಯಿಸಿದರು.<br /> <br /> ಚಿಕ್ಕಬೆಣಕಲ್ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ನಾಗಮ್ಮ ನೇತೃತ್ವದಲ್ಲಿ ಬುಧವಾರ ತಾಲ್ಲೂಕು ಪಂಚಾಯಿತಿ ಸಮೀಪ ಅಧಿಕಾರಿಯೊಂದಿಗೆ ವಾಗ್ವಾದ ನಡೆಸಿದ ಮಹಿಳೆಯರು ಸರ್ಕಾರದ ಯೋಜನೆ ಮತ್ತು ಆದೇಶ ಪ್ರತಿಗಳನ್ನು ತಲುಪಿಸುವಲ್ಲಿ ಅಧಿಕಾರಿ ವಿಳಂಭ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.<br /> <br /> ಗ್ರಾಮದ ಅಶಕ್ತ, ನಿರ್ಗತಿಕ, ವಿಧವೆ, ಅಂಗವಿಕಲ, ವೃದ್ಧಾಪ್ಯದ ಫಲಾನುಭವಿಗಳು ಸರ್ಕಾರದ ಸಾಮಾಜಿಕ ಭದ್ರತಾ ಯೋಜನೆಯಲ್ಲಿ ಮಾಸಾಶನ ಪಡೆಯಲು ಮೂರು ತಿಂಗಳ ಹಿಂದೆಯೆ ಅರ್ಜಿ ಹಾಕಿದ್ದರು. ಅರ್ಜಿ ವಿಲೇವಾರಿಯಾಗಿ ಆದೇಶ ಜಾರಿಯಾಗಿದೆ.<br /> <br /> ಶರಣಪ್ಪ ಎಂಬ ಅಧಿಕಾರಿ ಈ ಹಿಂದೆ ಸಕಾಲಕ್ಕೆ ಫಲಾನುಭವಿಗಳಿಗೆ ಆದೇಶ ಪ್ರತಿಗಳನ್ನು ತಲುಪಿಸುತ್ತಿದ್ದರು. ಆದರೆ ಅವರ ವರ್ಗಾವಣೆ ನಂತರ ಬಂದ ಗ್ರಾಮ ಲೆಕ್ಕಾಧಿಕಾರಿ ಬಸವರಾಜ ಫಲಾನುಭವಿಗಳನ್ನು ವಿನಾಕಾರಣ ತಿರಿಗಿಸುತ್ತಾರೆ ಎಂದು ಆರೋಪಿಸಿದರು.<br /> <br /> 65 ವರ್ಷದ ದುರ್ಗಮ್ಮ ಎಂಬ ಮಹಿಳೆಗೆ ಸರ್ಕಾರದಿಂದ ಈ ಹಿಂದೆ ₨400 ಬರುತಿತ್ತು. ಬಸವರಾಜ ಅದನ್ನು ₨200ಕ್ಕೆ ಇಳಿಸಿದ್ದಾರೆ. ನಿಂಗಮ್ಮ ಎಂಬುವರ ವಿಧವಾ ವೇತನ ರದ್ದುಗೊಳಿಸಿದ್ದಾರೆ. ವಡ್ಡರ ತಿಪ್ಪಮ್ಮರ ಮೊಮ್ಮಗ ಆನಂದ್ನಿಗೆ ಬರುತ್ತಿದ್ದ ಅಂಗವೈಕಲ್ಯ ವೇತನಕ್ಕೂ ಕುತ್ತು ತಂದಿದ್ದಾರೆ ಎಂದು ಆರೋಪಿಸಿದರು.<br /> <br /> ಫಲಾನುಭವಿಗಳಿಗೆ ಸರ್ಕಾರದ ಮಾಸಾಶನದ ಆದೇಶ ಪ್ರತಿ ನೀಡಲು ಹಣ ಪಡೆಯುತ್ತಿರುವ ಬಸವರಾಜ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾವಣೆ ಮಾಡಬೇಕೆಂದು ಬಾಳಮ್ಮ ಹೊಸಳ್ಳಿ, ಹನುಮಮ್ಮ, ದುರ್ಗಮ್ಮ ಭೋವಿ, ನಿಂಗಮ್ಮ, ಮಳೆಯಮ್ಮ, ಹುಲಿಗೆಮ್ಮ, ಇಂದ್ರಮ್ಮ ಇತರರು ಒತ್ತಾಯಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗಂಗಾವತಿ: </strong>ಸರ್ಕಾರದ ಸಾಮಾಜಿಕ ಭದ್ರತಾ ಯೋಜನೆಗಳನ್ನು ಫಲಾನುಭವಿಗೆ ಸಕಾಲಕ್ಕೆ ತಲುಪಿಸುವಲ್ಲಿ ವಿಫಲವಾದ ಹಾಗೂ ಹಣಕ್ಕೆ ಬೇಡಿಕೆ ಇಡುವ ಗ್ರಾಮ ಲೆಕ್ಕಾಧಿಕಾರಿ ಬಸವರಾಜರನ್ನು ತಕ್ಷಣ ವರ್ಗಾವಣೆ ಮಾಡುವಂತೆ ಚಿಕ್ಕಬೆಣಕಲ್ ಗ್ರಾಮದ ಕೆಲ ಮಹಿಳೆಯರು ಒತ್ತಾಯಿಸಿದರು.<br /> <br /> ಚಿಕ್ಕಬೆಣಕಲ್ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ನಾಗಮ್ಮ ನೇತೃತ್ವದಲ್ಲಿ ಬುಧವಾರ ತಾಲ್ಲೂಕು ಪಂಚಾಯಿತಿ ಸಮೀಪ ಅಧಿಕಾರಿಯೊಂದಿಗೆ ವಾಗ್ವಾದ ನಡೆಸಿದ ಮಹಿಳೆಯರು ಸರ್ಕಾರದ ಯೋಜನೆ ಮತ್ತು ಆದೇಶ ಪ್ರತಿಗಳನ್ನು ತಲುಪಿಸುವಲ್ಲಿ ಅಧಿಕಾರಿ ವಿಳಂಭ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.<br /> <br /> ಗ್ರಾಮದ ಅಶಕ್ತ, ನಿರ್ಗತಿಕ, ವಿಧವೆ, ಅಂಗವಿಕಲ, ವೃದ್ಧಾಪ್ಯದ ಫಲಾನುಭವಿಗಳು ಸರ್ಕಾರದ ಸಾಮಾಜಿಕ ಭದ್ರತಾ ಯೋಜನೆಯಲ್ಲಿ ಮಾಸಾಶನ ಪಡೆಯಲು ಮೂರು ತಿಂಗಳ ಹಿಂದೆಯೆ ಅರ್ಜಿ ಹಾಕಿದ್ದರು. ಅರ್ಜಿ ವಿಲೇವಾರಿಯಾಗಿ ಆದೇಶ ಜಾರಿಯಾಗಿದೆ.<br /> <br /> ಶರಣಪ್ಪ ಎಂಬ ಅಧಿಕಾರಿ ಈ ಹಿಂದೆ ಸಕಾಲಕ್ಕೆ ಫಲಾನುಭವಿಗಳಿಗೆ ಆದೇಶ ಪ್ರತಿಗಳನ್ನು ತಲುಪಿಸುತ್ತಿದ್ದರು. ಆದರೆ ಅವರ ವರ್ಗಾವಣೆ ನಂತರ ಬಂದ ಗ್ರಾಮ ಲೆಕ್ಕಾಧಿಕಾರಿ ಬಸವರಾಜ ಫಲಾನುಭವಿಗಳನ್ನು ವಿನಾಕಾರಣ ತಿರಿಗಿಸುತ್ತಾರೆ ಎಂದು ಆರೋಪಿಸಿದರು.<br /> <br /> 65 ವರ್ಷದ ದುರ್ಗಮ್ಮ ಎಂಬ ಮಹಿಳೆಗೆ ಸರ್ಕಾರದಿಂದ ಈ ಹಿಂದೆ ₨400 ಬರುತಿತ್ತು. ಬಸವರಾಜ ಅದನ್ನು ₨200ಕ್ಕೆ ಇಳಿಸಿದ್ದಾರೆ. ನಿಂಗಮ್ಮ ಎಂಬುವರ ವಿಧವಾ ವೇತನ ರದ್ದುಗೊಳಿಸಿದ್ದಾರೆ. ವಡ್ಡರ ತಿಪ್ಪಮ್ಮರ ಮೊಮ್ಮಗ ಆನಂದ್ನಿಗೆ ಬರುತ್ತಿದ್ದ ಅಂಗವೈಕಲ್ಯ ವೇತನಕ್ಕೂ ಕುತ್ತು ತಂದಿದ್ದಾರೆ ಎಂದು ಆರೋಪಿಸಿದರು.<br /> <br /> ಫಲಾನುಭವಿಗಳಿಗೆ ಸರ್ಕಾರದ ಮಾಸಾಶನದ ಆದೇಶ ಪ್ರತಿ ನೀಡಲು ಹಣ ಪಡೆಯುತ್ತಿರುವ ಬಸವರಾಜ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾವಣೆ ಮಾಡಬೇಕೆಂದು ಬಾಳಮ್ಮ ಹೊಸಳ್ಳಿ, ಹನುಮಮ್ಮ, ದುರ್ಗಮ್ಮ ಭೋವಿ, ನಿಂಗಮ್ಮ, ಮಳೆಯಮ್ಮ, ಹುಲಿಗೆಮ್ಮ, ಇಂದ್ರಮ್ಮ ಇತರರು ಒತ್ತಾಯಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>