ಮಳವಳ್ಳಿ ತಾಲ್ಲೂಕಿನ ಮೇಗಳಾಪುರ ಶಾಲೆಯ ಕೊಠಡಿಯ ಚಾವಣಿ ಹಾಳಾಗಿದ್ದು ಈ ಕೊಠಡಿಯಲ್ಲಿ ಮಕ್ಕಳಿಗೆ ಪಾಠ ಮಾಡುತ್ತಿಲ್ಲ
ಕೆ.ಆರ್.ಪೇಟೆ ತಾಲ್ಲೂಕಿನ ತೆಂಡೇಕೆರೆ ಹಿರಿಯ ಪ್ರಾಧಮಿಕ ಶಾಲೆಯಲ್ಲಿ ಕೊಠಡಿಗಳ ಚಾವಣಿಯ ಕಾಂಕ್ರೀಟ್ ಉದುರಿರುವ ದೃಶ್ಯ
ಪಾಂಡವಪುರ ತಾಲ್ಲೂಕಿನ ಮಾಡರಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯ ಕೊಠಡಿಯ ಗೋಡೆ ಬಿರುಕುಬಿಟ್ಟಿದೆ
ಮಂಡ್ಯ ತಾಲ್ಲೂಕಿನ ಹೊನಗಾನಹಳ್ಳಿ ಸರ್ಕಾರಿ ಶಾಲೆಯ ಆವರಣದಲ್ಲಿರುವ ಶೌಚಾಲಯದ ದುಸ್ಥಿತಿ
ಮಕ್ಕಳಿಗೆ ಯಾವುದೇ ಅಪಾಯವಾಗದಂತೆ ಜಾಗೃತಿ ವಹಿಸಿ ಸುಸಜ್ಜಿತ ಕೊಠಡಿಗಳಲ್ಲಿ ಪಾಠ ಮುಂದುವರಿಸಲಾಗಿದೆ. ಕೊಠಡಿಗಳ ದುರಸ್ತಿ ಬಗ್ಗೆ ಮೇಲಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ
– ಎಸ್.ಚಂದ್ರಪಾಟೀಲ್ ಬಿಇಒ ಮಳವಳ್ಳಿ2023–24ನೇ ಸಾಲಿನಲ್ಲಿ ಮಳೆಯಿಂದಾಗಿ 32 ಶಾಲೆಗಳು ದುರಸ್ತಿಗೆ ಬಂದಿದ್ದವು. ಕೊಠಡಿಗಳು ಮಳೆ ನೀರಿಗೆ ಸೋರುತ್ತಿದ್ದವು. ₹9ಲಕ್ಷ ಅಂದಾಜು ವೆಚ್ಚದಲ್ಲಿ ದುರಸ್ತಿ ಮಾಡಿಸಲಾಗಿದೆ.
– ಬಿ.ಚಂದ್ರಶೇಖರ್ ಬಿಇಒ ಪಾಂಡವಪುರ ನಮ್ಮ ಶಾಲೆಗಳು ಶಿಥಿಲಾವಸ್ಥೆಯಲ್ಲಿರುವುದು ಕಡಿಮೆ. ದುರಸ್ತಿ ಆಗಬೇಕಿರುವ ಕೆಲವು ಶಾಲೆಗಳ ಪಟ್ಟಿಯನ್ನು ಈಗಾಗಲೇ ಡಿಡಿಪಿಐ ಕಚೇರಿಗೆ ಕಳುಹಿಸಲಾಗಿದೆ
ಕೆ.ಟಿ.ಸೌಭಾಗ್ಯ ಬಿಇಒ ಮಂಡ್ಯ(ಉತ್ತರ ವಲಯ)ಗಬ್ಬು ನಾರುವ ಶೌಚಾಲಯ
ಶ್ರೀರಂಗಪಟ್ಟಣ ತಾಲ್ಲೂಕಿನ ಸರ್ಕಾರಿ ಶಾಲೆಗಳಲ್ಲಿ ತರಗತಿ ಕೊಠಡಿಗಳ ಸಮಸ್ಯೆ ಇಲ್ಲ ಶಿಥಿಲವಾಗಿದ್ದ ಶಾಲಾ ಕಟ್ಟಡಗಳನ್ನು ನೆಲಸಮ ಮಾಡಿದ್ದು ಸುಸ್ಥಿಯಲ್ಲಿರುವ ಕೊಠಡಿಗಳಲ್ಲಿ ತರಗತಿಗಳು ನಡೆಯುತ್ತಿವೆ. ಆದರೆ ಕೆಲವೆಡೆ ಶೌಚಾಲಯಗಳ ಕೊರತೆ ಇದೆ. ಸ್ಥಳೀಯ ಗ್ರಾ.ಪಂ.ಗಳು ಶೌಚಾಲಯಗಳ ಸ್ವಚ್ಚತೆ ಬಗ್ಗೆ ಗಮನ ಹರಿಸುತ್ತಿಲ್ಲ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮಹೇಶ್ ಆರ್.ಪಿ. ಹೇಳಿದ್ದಾರೆ. ಮೇಳಾಪುರ ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ತಕ್ಕಷ್ಟು ಶೌಚಾಲಯ ಇಲ್ಲ. ಕೇವಲ ಎರಡು ಶೌಚಾಲಯ ಇದ್ದು ಸ್ವಚ್ಛತೆ ಇಲ್ಲದೆ ಗಬ್ಬು ನಾರುತ್ತಿವೆ. ಶಿಕ್ಷಣ ಇಲಾಖೆ ಅಧಿಕಾರಿಗಳು ಇತ್ತ ಗಮನ ಹರಿಸಬೇಕು ಎಂದು ಗ್ರಾಮದ ಮುಖಂಡ ವಿರೂಪಾಕ್ಷ ಒತ್ತಾಯಿಸಿದ್ದಾರೆ.
ಉದುರುತ್ತಿರುವ ಚಾವಣಿ ಕಾಂಕ್ರೀಟ್
ಕೆ.ಆರ್.ಪೇಟೆ ತಾಲ್ಲೂಕಿನ ಕಿರಿಯ ಹಿರಿಯ ಪ್ರೌಢಶಾಲೆಗಳು ಸರ್ಕಾರಿ ಕಟ್ಟಡದಲ್ಲಿ ನಡೆಯುತ್ತಿವೆಯಾದರೂ ಕೊಠಡಿಗಳು ಸಣ್ಣಪುಟ್ಟ ದುರಸ್ತಿ ಕಾಣಬೇಕಿವೆ. ಕೆಲವೆಡೆ ಶಿಥಿಲಾವಸ್ಥೆಯಲ್ಲಿವೆ. ಹೆಂಚುಗಳ ಚಾವಣಿ ಒಡೆದಿವೆ ತೆಂಡೇಕೆರೆ ಹಿರಿಯ ಪ್ರಾಧಮಿಕ ಶಾಲೆಯಲ್ಲಿ ಕೊಠಡಿಗಳ ಚಾವಣಿಯ ಕಾಂಕ್ರೀಟ್ ಉದುರಿಬಿದ್ದು ಕಟ್ಟಡ ಹಾಳಾಗಿದೆ. ಹಾಳಾಗಿರುವ ನಾಲ್ಕು ಕೊಠಡಿ ಕಟ್ಟಡವನ್ನು ತೆರವುಗೊಳಿಸುವ ಬದಲು ಅದನ್ನೇ ದುರಸ್ತಿಗೊಳಿಸಲಾಗಿದೆ. ಶಿಕ್ಷಣ ಇಲಾಖೆ ಎಚ್ಚೆತ್ತು ಅಂಥ ಕೊಠಡಿಗಳಲ್ಲಿನ ಮಕ್ಕಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಕ್ರಮವಹಿಸಿದೆ. ಬಹುತೇಕ ಶಾಲೆಗಳಲ್ಲಿ ಶೌಚಾಲಯ ಕೊರತೆಯಿದ್ದು ಬಗೆಹರಿಸಬೇಕಿದೆ.