ಉಮ್ಮಡಹಳ್ಳಿ ಗ್ರಾಮದ ಜಯಮ್ಮ (45), ಬೇವಿನಹಳ್ಳಿ ಗ್ರಾಮದ ಚೇತನ್ (40) ಮೃತಪಟ್ಟವರು. ಕುಡಿದು ಅತಿ ವೇಗದಿಂದ ಕಾರು ಚಾಲನೆ ಮಾಡುತ್ತಾ ಬೆಂಗಳೂರಿನಿಂದ ಮೈಸೂರು ಕಡೆಗೆ ಬರುತ್ತಿದ್ದ ಚಾಲಕ ಮುಂದೆ ತೆರಳುತ್ತಿದ್ದ ಎರಡು ಬೈಕ್ಗಳಿಗೆ ಡಿಕ್ಕಿ ಹೊಡೆಸಿದ್ದಾನೆ. ಒಂದು ಬೈಕ್ ಸವಾರ ಚೇತನ್, ಇನ್ನೊಂದು ಬೈಕ್ನಲ್ಲಿ ಹಿಂಬದಿಯಲ್ಲಿ ಕುಳಿತಿದ್ದ ಜಯಮ್ಮ ಮೃತ ಪಟ್ಟಿದ್ದಾರೆ. ಮತ್ತೊಬ್ಬ ಬೈಕ್ ಸವಾರ ಮಹಾದೇವ್ ತೀವ್ರವಾಗಿ ಗಾಯಗೊಂಡಿದ್ದು ನಗರದ ಮಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.