<p><strong>ಮಂಡ್ಯ</strong>: ಪುಸ್ತಕ ಓದುವ ಸಂಸ್ಕೃತಿ ಸಮಾಜದಲ್ಲಿ ಹೆಚ್ಚಾದರೆ ಒಂದಿಷ್ಟು ಬದಲಾವಣೆ ಕಾಣಲು ಸಾಧ್ಯ ಎಂದು ರಂಗಕರ್ಮಿ ಶ್ರೀನಿವಾಸಪ್ರಭು ಅಭಿಪ್ರಾಯಪಟ್ಟರು.</p><p>ನಗರದ ಗಾಂಧಿ ಭವನದಲ್ಲಿ ಚಿರಂತ ಪ್ರಕಾಶನ ವತಿಯಿಂದ ಭಾನುವಾರ ನಡೆದ ಕೆ.ಪ್ರಭಾಕರ್ ಅವರ ‘ಜಡ್ಜ್ಮೆಂಟ್’ ಹಾಗೂ ಸುಮಾರಾಣಿ ಅವರ ‘ದೇವರ ಹುಡುಕಾಟದಲ್ಲಿ’ ಕೃತಿ ಲೋಕಾರ್ಪಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.</p>.<p>‘ಮನುಷ್ಯ ಜೀವನದಲ್ಲಿ ಮಿತಿಯನ್ನು ಹಾಕಿಕೊಳ್ಳುತ್ತಾನೆ. ಆದರೆ ಕೆಲವೊಮ್ಮೆ ನಾವೇ ನಮ್ಮ ಮಿತಿ ದಾಟಿ ಮುನ್ನುಗ್ಗಿದಾಗ ಸಾಧನೆ ಸಾಧ್ಯವಾಗುತ್ತದೆ. ಮನುಷ್ಯ ಜೀವನದಲ್ಲಿ ಸಾಧನೆ ಮಾಡಬೇಕಾದರೆ ಚೌಕಟ್ಟು ಹಾಕಿಕೊಂಡು, ಆ ಮಿತಿಯನ್ನ ನಾವೇ ಮೀರಬೇಕು’ ಎಂದು ಸಲಹೆ ನೀಡಿದರು.</p>.<p>‘ಮನುಷ್ಯರಾದವರು ನಿರಂತರವಾಗಿ ಕನಸು ಕಾಣುತ್ತಿರಬೇಕು. ಆ ಕನಸು ಯಾವಾಗಲೂ ದೊಡ್ಡದಾಗಿರಬೇಕು. ಆ ಮೂಲಕ ಕನಸುಗಳನ್ನು ನಾವು ಕಳೆದುಕೊಳ್ಳಬಾರದು. ಇಲ್ಲಿ ಲೇಖಕಿ ಸುಮಾರಾಣಿ ಶಂಭು ಅವರು ತಮ್ಮ ಕೃತಿಯಲ್ಲಿ ಚೌಕಟ್ಟು ಹಾಕಿಕೊಳ್ಳದೆ ವಿಶಿಷ್ಟ ದೃಷ್ಟಿಕೋನದೊಂದಿಗೆ ಸಾಹಿತ್ಯ ಕೃಷಿ ಮಾಡಿದ್ದಾರೆ ಎನ್ನುವುದು ವಿಶೇಷ. ಈ ಕೃತಿಯಲ್ಲಿ ಇತಿಹಾಸ ಹಾಗೂ ಪುರಾಣಗಳ ಉಲ್ಲೇಖ ಇರುವುದರಿಂದ ಇದನ್ನು ಓದುವುದು ಮುಖ್ಯವಾಗಬೇಕು’ ಎಂದರು.</p>.<p>ದೇವರ ಹುಡುಕಾಟದಲ್ಲಿ ಕೃತಿ ಕುರಿತು ಮಾತನಾಡಿದ ಸಹ ಪ್ರಾಧ್ಯಾಪಕ ಕೆ.ಸೋಮಶೇಖರ, ‘ಭಾವನೆಗಳು ಸುಮಾರಾಣಿ ಅವರ ಲೇಖನಿಯಲ್ಲಿ ಉತ್ತಮವಾಗಿ ವ್ಯಕ್ತವಾಗಿವೆ. ದೇವರ ಹುಡುಕಾಟದಲ್ಲಿ ಮೌಲಿಕ ಕೃತಿ ಆಗಿದೆ’ ಎಂದು ಹೇಳಿದರು.</p>.<p>‘ಜಡ್ಚ್ಮೆಂಟ್’ ಕೃತಿ ಕುರಿತು ಮಾತನಾಡಿದ ಹೈಕೋರ್ಟ್ ವಕೀಲ ಲೋಹಿತ್ ಹನುಮಾಪುರ, ‘ವಕೀಲ ವೃತ್ತಿಯಲ್ಲಿ ಒಳ್ಳೆಯ ಹೆಸರು ಗಳಿಸುವುದು ಕಷ್ಟ. ಪ್ರತಿಯೊಬ್ಬ ವಕೀಲರಿಗೂ ಕೂಡ ಈ ಕೃತಿ ದಾರಿದೀಪವಾಗಲಿದೆ’ ಎಂದು ಅಭಿಪ್ರಾಯಪಟ್ಟರು.</p>.<p>ಸಾಹಿತಿಗಳಾದ ರಂಜನಿ ಪ್ರಭು, ಸುಮಾರಾಣಿ ಶಂಭು, ಕೆ.ಪ್ರಭಾಕರ್, ಚಿರಂತ ಪ್ರಕಾಶನದ ಕಬ್ಬನಹಳ್ಳಿ ಶಂಭು, ಶಮಂತಕ ಪ್ರಭಾಕರ್ ಭಾಗವಹಿಸಿದ್ದರು.</p>.<p><strong>ಕೃತಿಗಳ ಪರಿಚಯ </strong></p><p><strong>ಕೃತಿ– ದೇವರ ಹುಡುಕಾಟದಲ್ಲಿ </strong></p><p>ಸಾಹಿತಿ– ಸುಮಾರಾಣಿ ಶಂಭು </p><p>ಪುಟಗಳು– 132 </p><p>ಬೆಲೆ– ₹158 </p><p>ಮುದ್ರಣ– ತಾರಾ ಪ್ರಿಂಟ್ಸ್ ಮೈಸೂರು </p><p><strong>ಪ್ರಕಾಶನ ಕೃತಿ– ಜಡ್ಜ್ಮೆಂಟ್</strong></p><p>ಪ್ರಕಾಶನ– ಆನಂದಿ </p><p>ಸಾಹಿತಿ–ಕೆ.ಪ್ರಭಾಕರ್ </p><p>ಪುಟಗಳು– 156 </p><p>ಬೆಲೆ– ₹190 ಮುದ್ರಣ– ತಾರಾ ಪ್ರಿಂಟ್ಸ್ ಮೈಸೂರು</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಂಡ್ಯ</strong>: ಪುಸ್ತಕ ಓದುವ ಸಂಸ್ಕೃತಿ ಸಮಾಜದಲ್ಲಿ ಹೆಚ್ಚಾದರೆ ಒಂದಿಷ್ಟು ಬದಲಾವಣೆ ಕಾಣಲು ಸಾಧ್ಯ ಎಂದು ರಂಗಕರ್ಮಿ ಶ್ರೀನಿವಾಸಪ್ರಭು ಅಭಿಪ್ರಾಯಪಟ್ಟರು.</p><p>ನಗರದ ಗಾಂಧಿ ಭವನದಲ್ಲಿ ಚಿರಂತ ಪ್ರಕಾಶನ ವತಿಯಿಂದ ಭಾನುವಾರ ನಡೆದ ಕೆ.ಪ್ರಭಾಕರ್ ಅವರ ‘ಜಡ್ಜ್ಮೆಂಟ್’ ಹಾಗೂ ಸುಮಾರಾಣಿ ಅವರ ‘ದೇವರ ಹುಡುಕಾಟದಲ್ಲಿ’ ಕೃತಿ ಲೋಕಾರ್ಪಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.</p>.<p>‘ಮನುಷ್ಯ ಜೀವನದಲ್ಲಿ ಮಿತಿಯನ್ನು ಹಾಕಿಕೊಳ್ಳುತ್ತಾನೆ. ಆದರೆ ಕೆಲವೊಮ್ಮೆ ನಾವೇ ನಮ್ಮ ಮಿತಿ ದಾಟಿ ಮುನ್ನುಗ್ಗಿದಾಗ ಸಾಧನೆ ಸಾಧ್ಯವಾಗುತ್ತದೆ. ಮನುಷ್ಯ ಜೀವನದಲ್ಲಿ ಸಾಧನೆ ಮಾಡಬೇಕಾದರೆ ಚೌಕಟ್ಟು ಹಾಕಿಕೊಂಡು, ಆ ಮಿತಿಯನ್ನ ನಾವೇ ಮೀರಬೇಕು’ ಎಂದು ಸಲಹೆ ನೀಡಿದರು.</p>.<p>‘ಮನುಷ್ಯರಾದವರು ನಿರಂತರವಾಗಿ ಕನಸು ಕಾಣುತ್ತಿರಬೇಕು. ಆ ಕನಸು ಯಾವಾಗಲೂ ದೊಡ್ಡದಾಗಿರಬೇಕು. ಆ ಮೂಲಕ ಕನಸುಗಳನ್ನು ನಾವು ಕಳೆದುಕೊಳ್ಳಬಾರದು. ಇಲ್ಲಿ ಲೇಖಕಿ ಸುಮಾರಾಣಿ ಶಂಭು ಅವರು ತಮ್ಮ ಕೃತಿಯಲ್ಲಿ ಚೌಕಟ್ಟು ಹಾಕಿಕೊಳ್ಳದೆ ವಿಶಿಷ್ಟ ದೃಷ್ಟಿಕೋನದೊಂದಿಗೆ ಸಾಹಿತ್ಯ ಕೃಷಿ ಮಾಡಿದ್ದಾರೆ ಎನ್ನುವುದು ವಿಶೇಷ. ಈ ಕೃತಿಯಲ್ಲಿ ಇತಿಹಾಸ ಹಾಗೂ ಪುರಾಣಗಳ ಉಲ್ಲೇಖ ಇರುವುದರಿಂದ ಇದನ್ನು ಓದುವುದು ಮುಖ್ಯವಾಗಬೇಕು’ ಎಂದರು.</p>.<p>ದೇವರ ಹುಡುಕಾಟದಲ್ಲಿ ಕೃತಿ ಕುರಿತು ಮಾತನಾಡಿದ ಸಹ ಪ್ರಾಧ್ಯಾಪಕ ಕೆ.ಸೋಮಶೇಖರ, ‘ಭಾವನೆಗಳು ಸುಮಾರಾಣಿ ಅವರ ಲೇಖನಿಯಲ್ಲಿ ಉತ್ತಮವಾಗಿ ವ್ಯಕ್ತವಾಗಿವೆ. ದೇವರ ಹುಡುಕಾಟದಲ್ಲಿ ಮೌಲಿಕ ಕೃತಿ ಆಗಿದೆ’ ಎಂದು ಹೇಳಿದರು.</p>.<p>‘ಜಡ್ಚ್ಮೆಂಟ್’ ಕೃತಿ ಕುರಿತು ಮಾತನಾಡಿದ ಹೈಕೋರ್ಟ್ ವಕೀಲ ಲೋಹಿತ್ ಹನುಮಾಪುರ, ‘ವಕೀಲ ವೃತ್ತಿಯಲ್ಲಿ ಒಳ್ಳೆಯ ಹೆಸರು ಗಳಿಸುವುದು ಕಷ್ಟ. ಪ್ರತಿಯೊಬ್ಬ ವಕೀಲರಿಗೂ ಕೂಡ ಈ ಕೃತಿ ದಾರಿದೀಪವಾಗಲಿದೆ’ ಎಂದು ಅಭಿಪ್ರಾಯಪಟ್ಟರು.</p>.<p>ಸಾಹಿತಿಗಳಾದ ರಂಜನಿ ಪ್ರಭು, ಸುಮಾರಾಣಿ ಶಂಭು, ಕೆ.ಪ್ರಭಾಕರ್, ಚಿರಂತ ಪ್ರಕಾಶನದ ಕಬ್ಬನಹಳ್ಳಿ ಶಂಭು, ಶಮಂತಕ ಪ್ರಭಾಕರ್ ಭಾಗವಹಿಸಿದ್ದರು.</p>.<p><strong>ಕೃತಿಗಳ ಪರಿಚಯ </strong></p><p><strong>ಕೃತಿ– ದೇವರ ಹುಡುಕಾಟದಲ್ಲಿ </strong></p><p>ಸಾಹಿತಿ– ಸುಮಾರಾಣಿ ಶಂಭು </p><p>ಪುಟಗಳು– 132 </p><p>ಬೆಲೆ– ₹158 </p><p>ಮುದ್ರಣ– ತಾರಾ ಪ್ರಿಂಟ್ಸ್ ಮೈಸೂರು </p><p><strong>ಪ್ರಕಾಶನ ಕೃತಿ– ಜಡ್ಜ್ಮೆಂಟ್</strong></p><p>ಪ್ರಕಾಶನ– ಆನಂದಿ </p><p>ಸಾಹಿತಿ–ಕೆ.ಪ್ರಭಾಕರ್ </p><p>ಪುಟಗಳು– 156 </p><p>ಬೆಲೆ– ₹190 ಮುದ್ರಣ– ತಾರಾ ಪ್ರಿಂಟ್ಸ್ ಮೈಸೂರು</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>