ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಜಯಪ್ರಕಾಶಗೌಡ ಮಾತನಾಡಿ, ಪ್ರಸ್ತುತ ವಿದ್ಯಾರ್ಥಿಗಳ ನಡೆ, ನಡಿ ತಪ್ಪುತ್ತಿರುವುದು ದುರಂತ. ಅವರಿಗೆ ಮೌಲ್ಯಯುತ ಶಿಕ್ಷಣ ನೀಡುವ ಮನೋಭಾವ ಮುಖ್ಯವಾಗಬೇಕು. ತರಗತಿ ಕೋಣೆಯಲ್ಲಿ ವರ್ತನೆ ಸರಿಯಿದ್ದರೆ ಸಾಲದು, ಅದರಾಚೆಗೂ ವರ್ತನೆ ಬದಲಿಸದೆ ಇರುವಂತೆ ಶಿಕ್ಷಣ ನೀಡುವಂತಾಗಬೇಕು. ಪ್ರಾಥಮಿಕ ಶಿಕ್ಷಣದ ಶಿಕ್ಷಕರು ಕೆಳ ಹಂತದಲ್ಲಿಯೇ ವಿದ್ಯಾರ್ಥಿಗಳನ್ನು ಅಣಿಮಾಡಬೇಕು. ಇದರಲ್ಲಿ ಕ್ಷೇತ್ರ ಸಂಪನ್ಮೂಲ ಅಧಿಕಾರಿಗಳು ಪ್ರಮುಖ ಪಾತ್ರ ವಹಿಸಬೇಕು ಎಂದು ಸಲಹೆ ನೀಡಿದರು.