ಚಾಕೋಲೆಟ್, ತಿಂಡಿ ನೀಡುವುದಾಗಿ ಮೂವರು ಬಾಲಕಿಯರನ್ನು ಪುಸಲಾಯಿಸಿದ್ದ ಅಜಯ್, ನಾಲ್ಕು ದಿನ ಅಕ್ರಮ ಬಂಧನದಲ್ಲಿರಿಸಿ, ಅಶ್ಲೀಲ ನಗ್ನ ದೃಶ್ಯಗಳನ್ನು ತೋರಿಸಿ, ಲೈಂಗಿಕ ದೌರ್ಜನ್ಯ ಎಸಗಿದ್ದ. ಕೊಲೆ ಬೆದರಿಕೆಯನ್ನೂ ಹಾಕಿದ್ದು ತನಿಖೆಯಿಂದ ಗೊತ್ತಾಗಿತ್ತು. ವಿಚಾರಣೆ ನಡೆಸಿದ ವಿಶೇಷ ನ್ಯಾಯಾಧೀಶೆ ಕೆ.ಎ.ನಾಗಜ್ಯೋತಿ ಅಪರಾಧಿಗೆ ಕಠಿಣ ಸಜೆ ವಿಧಿಸಿದರು. ಸರ್ಕಾರಿ ಅಭಿಯೋಜಕಿ ಪಿ.ಕೆ.ಶಕೀಲಾ ಅಬೂಬಕರ್ ವಾದ ಮಂಡಿಸಿದ್ದರು.