ಇದಕ್ಕೂ ಮುನ್ನ ಕಾಳಿಕಾಂಬ ದೇವಸ್ಥಾನದ ಗಜೇಂದ್ರ ಮೋಕ್ಷ ಕೊಳದ ಬಳಿ ಬನ್ನಿಮರಕ್ಕೆ ಪೂಜೆ ಸಲ್ಲಿಸುವುದರ ಮೆರವಣಿಗೆಗೆ ಚಾಲನೆ ನೀಡಲಾಯಿತು. ಬೆಳ್ಳಿ ರಥದಲ್ಲಿ ಪ್ರತಿಷ್ಠಾಪಿಸಿದ್ದ ನಾಡ ದೇವತೆ ಶ್ರೀ ಚಾಮುಂಡೇಶ್ವರಿ ದೇವಿ ವಿಗ್ರಹಕ್ಕೆ ಶಾಸಕ ಸಿ.ಎಸ್.ಪುಟ್ಟರಾಜು ಚಾಲನೆ ನೀಡಿದರು. ಮಂಡ್ಯ ಯೂತ್ ಗ್ರೂಪ್ನ ಡಾ.ಅನಿಲ್ ಆನಂದ್, ಎಚ್.ಎಸ್.ಮಂಜು, ಡಾ.ಯಾಶಿಕಾ ಅನಿಲ್, ರುದ್ರಪ್ಪ, ಮಲ್ಲೇಶ್, ಬಿ.ಎಂ.ಅಪ್ಪಾಜಪ್ಪ, ದರ್ಶನ್, ವಿನಯ್, ಪ್ರಮೋದ್, ರಾಜಣ್ಣ, ದೇವಿ ಇದ್ದರು.