ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ರೈತರು, ಮಹಾಮಂಡಳ ದಲ್ಲಾಳಿಗಳ ಪರವಾಗಿರುವುದರಿಂದ ರೈತರ ಬೆಳೆ ಖರೀದಿಗೆ ವಿಳಂಬ ಮಾಡಲಾಗುತ್ತಿದೆ. ಲಾರಿ ಮತ್ತು ದೊಡ್ಡ ಗೂಡ್ಸ್ ವಾಹನಗಳಲ್ಲಿ 100, 200 ಕ್ವಿಂಟಲ್ ಭತ್ತ, ರಾಗಿ ತುಂಬಿಕೊಂಡು ಬರುತ್ತಾರೆ. ಆದರೆ, ರೈತರು 10–20ಕ್ವಿಂಟಲ್ ತರುತ್ತಾರೆ. ದಲ್ಲಾಳಿಗಳ ಭತ್ತ, ರಾಗಿ ಖರೀದಿಗೆ ಆದ್ಯತೆ ದೊರೆಯುತ್ತಿದ್ದು, ರೈತರನ್ನು ಕಡೆಗಣಿಸಲಾಗುತ್ತಿದೆ. ಹೀಗಾಗಿ ರೈತರು 3–4ದಿನ ಕಾಯುವ ಸ್ಥಿತಿ ನಿರ್ಮಾಣವಾಗಿ ವಾಹನದ ಬಾಡಿಗೆ ಕೂಡ ದುಪ್ಪಟ್ಟಾಗಿ ನಷ್ಟ ಅನುಭವಿ ಸಬೇಕಿದೆ ಎಂದು ಕಿಡಿಕಾರಿದರು.